<p><strong>ಹಾಸನ: </strong>ಜಿಲ್ಲೆಯ ಮೂರು ಜಲಾಶಯಗಳ ಪೈಕಿ ಆಲೂರು ತಾಲೂಕಿನ ವಾಟೆಹೊಳೆ ಜಲಾಶಯ ಎಂಟು ವರ್ಷದ ಬಳಿಕ ಭರ್ತಿಯಾಗಿದೆ.</p>.<p>ಒಟ್ಟು 1.51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1.31 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟ 1.31 ಟಿ.ಎಂಸಿ ತಲುಪಿದ್ದು, ಜಲಾಶಯ ವ್ಯಾಪ್ತಿಯ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಮುಂಜಾಗ್ರತಾ ಕ್ರಮವಾಗಿ ಗುರುವಾರ 3020 ಕ್ಯುಸೆಕ್ ನೀರನ್ನು ಹೊರ ಬಿಡಲಾಯಿತು. 40520 ಕ್ಯುಸೆಕ್ ಒಳ ಹರಿವು ಇದೆ.</p>.<p>ಅಣೆಕಟ್ಟೆ ನಿರ್ಮಾಣವಾದಾಗಿನಿಂದ ಈ ವರೆಗೆ 1991-92, 1992-93, 1994-95, 2005-06, 2007-08, 2008-09, 2009-10, 2010-11, 2011-12 ರಲ್ಲಿ ಭರ್ತಿಯಾಗಿತ್ತು.</p>.<p>ಕಳೆದ ವರ್ಷ ಜೋರು ಮಳೆಗೆ ಹೇಮಾವತಿ ಸೇರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದರೂ, ವಾಟೆಹೊಳೆ ಜಲಾಶಯದ ಒಡಲು ತುಂಬಿರಲಿಲ್ಲ. ಮುಂಗಾರು ವಿಳಂಬವಾದರೂ, ಆಗಸ್ಟ್ ತಿಂಗಳಲ್ಲೇ ಜಲಾಶಯ ಒಡಲು ತುಂಬಿಕೊಂಡಿದೆ.</p>.<p>ಕಳೆದ ತಿಂಗಳ ಹಿಂದೆ ಮಳೆಯಾಗಿದ್ದರಿಂದ ನಿತ್ಯ ಕೇವಲ 30-40 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಆದರೆ ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಒಳ ಹರಿವು 3500 ರಿಂದ 4000 ಕ್ಯುಸೆಕ್ ಗೆ ಏರಿತು.<br />ಮೂರು ದಿನಗಳಿಂದ ಎಡೆ ಬಿಡದೆ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿದೆ. ತಿಂಗಳಿಂದಲೂ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಬಾರಿಯೂ ಜಲಾಶಯ ಭರ್ತಿಯಾಗುವುದು ಅನುಮಾನವಾಗಿತ್ತು.</p>.<p>‘ಜಲಾಶಯದಿಂದ ಯಾವುದೇ ಸಮಯದಲ್ಲಿ ನದಿಗೆ ನೀರು ಬಿಡಲಾಗುವುದು. ಹೀಗಾಗಿ ನದಿ ಪಾತ್ರ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹನುಮಂತಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಜಿಲ್ಲೆಯ ಮೂರು ಜಲಾಶಯಗಳ ಪೈಕಿ ಆಲೂರು ತಾಲೂಕಿನ ವಾಟೆಹೊಳೆ ಜಲಾಶಯ ಎಂಟು ವರ್ಷದ ಬಳಿಕ ಭರ್ತಿಯಾಗಿದೆ.</p>.<p>ಒಟ್ಟು 1.51 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ ಸದ್ಯ 1.31 ಟಿಎಂಸಿ ನೀರು ಸಂಗ್ರಹವಾಗಿದೆ. ಗರಿಷ್ಠ ಮಟ್ಟ 1.31 ಟಿ.ಎಂಸಿ ತಲುಪಿದ್ದು, ಜಲಾಶಯ ವ್ಯಾಪ್ತಿಯ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.</p>.<p>ಮುಂಜಾಗ್ರತಾ ಕ್ರಮವಾಗಿ ಗುರುವಾರ 3020 ಕ್ಯುಸೆಕ್ ನೀರನ್ನು ಹೊರ ಬಿಡಲಾಯಿತು. 40520 ಕ್ಯುಸೆಕ್ ಒಳ ಹರಿವು ಇದೆ.</p>.<p>ಅಣೆಕಟ್ಟೆ ನಿರ್ಮಾಣವಾದಾಗಿನಿಂದ ಈ ವರೆಗೆ 1991-92, 1992-93, 1994-95, 2005-06, 2007-08, 2008-09, 2009-10, 2010-11, 2011-12 ರಲ್ಲಿ ಭರ್ತಿಯಾಗಿತ್ತು.</p>.<p>ಕಳೆದ ವರ್ಷ ಜೋರು ಮಳೆಗೆ ಹೇಮಾವತಿ ಸೇರಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿದ್ದರೂ, ವಾಟೆಹೊಳೆ ಜಲಾಶಯದ ಒಡಲು ತುಂಬಿರಲಿಲ್ಲ. ಮುಂಗಾರು ವಿಳಂಬವಾದರೂ, ಆಗಸ್ಟ್ ತಿಂಗಳಲ್ಲೇ ಜಲಾಶಯ ಒಡಲು ತುಂಬಿಕೊಂಡಿದೆ.</p>.<p>ಕಳೆದ ತಿಂಗಳ ಹಿಂದೆ ಮಳೆಯಾಗಿದ್ದರಿಂದ ನಿತ್ಯ ಕೇವಲ 30-40 ಕ್ಯುಸೆಕ್ ನೀರು ಜಲಾಶಯಕ್ಕೆ ಹರಿದು ಬರುತ್ತಿತ್ತು. ಆದರೆ ವಾರದಿಂದ ಉತ್ತಮ ಮಳೆಯಾಗುತ್ತಿರುವ ಹಿನ್ನಲೆಯಲ್ಲಿ ಒಳ ಹರಿವು 3500 ರಿಂದ 4000 ಕ್ಯುಸೆಕ್ ಗೆ ಏರಿತು.<br />ಮೂರು ದಿನಗಳಿಂದ ಎಡೆ ಬಿಡದೆ ಸುರಿದ ಮಳೆಯಿಂದಾಗಿ ಜಲಾಶಯ ಭರ್ತಿಯಾಗಿದೆ. ತಿಂಗಳಿಂದಲೂ ಮಳೆ ಪ್ರಮಾಣ ಕಡಿಮೆಯಾಗಿದ್ದರಿಂದ ಈ ಬಾರಿಯೂ ಜಲಾಶಯ ಭರ್ತಿಯಾಗುವುದು ಅನುಮಾನವಾಗಿತ್ತು.</p>.<p>‘ಜಲಾಶಯದಿಂದ ಯಾವುದೇ ಸಮಯದಲ್ಲಿ ನದಿಗೆ ನೀರು ಬಿಡಲಾಗುವುದು. ಹೀಗಾಗಿ ನದಿ ಪಾತ್ರ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸಬೇಕು’ ಎಂದು ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಹನುಮಂತಯ್ಯ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>