ಆರೋಪಿ ನಿಂಗಪ್ಪ ಕಾಗವಾಡನನ್ನು ಪೊಲೀಸರು ಸ್ಥಳ ಮಹಜರಿಗೆ ದಾಸರಕೊಪ್ಪಲಿಗೆ ಕರೆದೊಯ್ದ ವೇಳೆ ಸುತ್ತಲಿನ ಮಹಿಳೆಯರು ಜನರು ಹಿಡಿ ಶಾಪ ಹಾಕಿದರು. ‘ನಿನಗೆ ನಾಚಿಕೆ ಆಗಲ್ವಾ. ಸಣ್ಣ ಮಕ್ಕಳನ್ನು ಕೊಲೆ ಮಾಡೋಕೆ ಹೇಗಾದರೂ ಮನಸು ಬಂತು’ ಎಂದು ಆಕ್ರೋಶ ಹೊರಹಾಕಿದರು. ‘ಈತನಿಗೆ ಅಂತಿಂಥ ಶಿಕ್ಷೆ ಕೊಡಬೇಡಿ. ನೇರವಾಗಿ ನೇಣಿಗೆ ಹಾಕಿ. ಇವರಂಥ ಜನರು ಸಮಾಜದಲ್ಲಿ ಇರಲು ಯೋಗ್ಯರಲ್ಲ’ ಎಂದು ಜನರು ಒತ್ತಾಯಿಸಿದರು.