ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಫೆ. 23ರಿಂದ ಅಡಿಬೈಲು ರಂಗನಬೆಟ್ಟ ಜಾತ್ರೆ

ರಂಗನಾಥಸ್ವಾಮಿ–ಬಿಂದಿಗಮ್ಮ ಮದುವೆ ವೈಭವ ಕಣ್ತುಂಬಿಕೊಳ್ಳುವ ಭಕ್ತರು
ಎಂ. ಪಿ. ಹರೀಶ್
Published : 20 ಫೆಬ್ರುವರಿ 2024, 6:38 IST
Last Updated : 20 ಫೆಬ್ರುವರಿ 2024, 6:38 IST
ಫಾಲೋ ಮಾಡಿ
Comments
ಅಡಿಬೈಲು ರಂಗನಾಥ ಸ್ವಾಮಿ
ಅಡಿಬೈಲು ರಂಗನಾಥ ಸ್ವಾಮಿ
ಅಡಿಬೈಲು ರಂಗನಾಥಸ್ವಾಮಿ ಜಾತ್ರೆ ಫೆ. 24 ರಂದು ಭರತೂರು ಹೊಳೆ ಬದಿಯಲ್ಲಿ ಮತ್ತು 25 ರಂದು ಬೆಟ್ಟದ ಮೇಲೆ ನಡೆಯುತ್ತದೆ. ಮಗ್ಗೆ-ರಾಯರಕೊಪ್ಪಲು ಮಾರ್ಗವಾಗಿ ನಿತ್ಯ ಬಸ್ ವ್ಯವಸ್ಥೆ ಇದೆ. ಭಕ್ತರು ಸ್ವಚ್ಛತೆ ಕಾಪಾಡಬೇಕು
ಕೆ.ವಿ. ಉಮೇಶ್ ದೇವಾಲಯ ಅಭಿವೃದ್ಧಿ ಸಮಿತಿ ಅಧ್ಯಕ್ಷ
ಅಡಿಬೈಲು ಕಾಡಾನೆಗಳ ಹಾವಳಿ ಪ್ರದೇಶವಾಗಿದೆ. ಸದ್ಯ ಆಲೂರು ತಾಲ್ಲೂಕಿನಲ್ಲಿ ಆನೆ ಹಾವಳಿ ಕಡಿಮೆಯಾಗಿದೆ. ಆದರೂ ಜಾತ್ರೆ ನಡೆಯುವ ಸಂದರ್ಭದಲ್ಲಿ ಶಸ್ತ್ರಸಜ್ಜಿತ ಸಿಬ್ಬಂದಿ ನೇಮಕ ಮಾಡಲಾಗುತ್ತದೆ. ಭಕ್ತರು ಧೈರ್ಯದಿಂದ ಪಾಲ್ಗೊಳ್ಳಿ
ಬಿ.ಬಿ. ಯತೀಶ್ ವಲಯ ಅರಣ್ಯಾಧಿಕಾರಿ ಆಲೂರು
ವಿಷ್ಣುವರ್ಧನ ನಿರ್ಮಿಸಿದ ದೇಗುಲ
ಇತಿಹಾಸ ಹೇಳುವಂತೆ ಒಬ್ಬ ಕೊರಮನು ಬುಟ್ಟಿ ಹೆಣೆಯಲು ಬಿದಿರು ತರಲು ಹೋಗಿದ್ದನು. ಬಿದಿರಿನ ಗುಂಪೊಂದಕ್ಕೆ ಕತ್ತಿಯನ್ನು ಹೊಡೆಯುವಾಗ ಆಯತಪ್ಪಿ ಏಟು ಒಂದು ಬಂಡೆಗೆ ತಾಗುತ್ತದೆ. ಆ ಬಂಡೆಯಿಂದ ಒಂದು ಬದಿಯಲ್ಲಿ ಹಾಲು ಮತ್ತೊಂದು ಬದಿಯಲ್ಲಿ ರಕ್ತ ಬರುತ್ತದೆ. ಇದರಿಂದ ಗಾಬರಿಯಾದ ಅವನು ಪ್ರಜ್ಞೆ ತಪ್ಪಿ ಬೀಳುವನು. ಮನೆಗೆ ವಾಪಸ್‌ ಬಾರದ ಈತನನ್ನು ಮನೆಯವರು ಹುಡುಕಿಕೊಂಡು ಹೋದರು. ಪ್ರಜ್ಞೆ ಬಂದ ವ್ಯಕ್ತಿಯು ನಡೆದ ವಿಷಯವನ್ನು ತಿಳಿಸುತ್ತಾನೆ. ಸ್ಥಳವನ್ನು ಗಮನಿಸಿದಾಗ ಬ್ರಹ್ಮದೇವನ ವಿಗ್ರಹ ಪತ್ತೆಯಾಗುತ್ತದೆ. ಆ ಉದ್ಭವ ಮೂರ್ತಿಯನ್ನು ಪಾಳೆಗಾರರಿಂದ ರಕ್ಷಿಸಲೆಂದು ವಿಷ್ಣುವರ್ಧನ ರಾಜನು ದೇವಾಲಯವನ್ನು ನಿರ್ಮಾಣ ಮಾಡಿಸುತ್ತಾನೆ. ಹೊಯ್ಸಳ ದೊರೆ ವಿಷ್ಣುವರ್ಧನ ಜೈನ ಧರ್ಮದಿಂದ ವೈಷ್ಣವ ಧರ್ಮಕ್ಕೆ ಮತಾಂತರ ಹೊಂದಿದ್ದರಿಂದ ಬ್ರಹ್ಮದೇವನನ್ನೆ ರಂಗನಾಥನೆಂಬ ಹೆಸರಿನಿಂದ ಕರೆಯಲಾರಂಭಿಸಿದರು ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT