ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ‘ಬ್ಯಾಂಕ್ನ ನೂತನ ಅಧ್ಯಕ್ಷರನ್ನಾಗಿ ಸಾಮಾನ್ಯ ರೈತನ ಮಗನಾದ ಸೋಮನಹಳ್ಳಿ ನಾಗರಾಜ್ ಹಾಗೂ ಉಪಾಧ್ಯಕ್ಷರನ್ನಾಗಿ ಯಾದವ ಸಮಾಜದ ಬಂಡಿಗೌಡ್ರ ರಾಜಣ್ಣ ಆಯ್ಕೆ ಮಾಡಿದ್ದೇವೆ. ಹಿರಿಯರಾದ ಪಟೇಲ್ ಶಿವರಾಂ ಅವರನ್ನು ಅಧ್ಯಕ್ಷರನ್ನಾಗಿ ಮಾಡುವ ಇರಾದೆ ಇತ್ತು. ಆದರೆ ಅವರಿಗೆ ಅನಾರೋಗ್ಯ ಸರಿ ಇಲ್ಲದ ಅವರನ್ನು ಕೇಂದ್ರ ಅಪೆಕ್ಸ್ ಬ್ಯಾಂಕ್ ಗೆ ಕಳಿಸಲಾಗುವುದು’ ಎಂದು ಹೇಳಿದರು.