<p><strong>ಅರಕಲಗೂಡು</strong>: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ 10ಕ್ಕೂ ಹೆಚ್ಚಿನ ಕೆರೆಗಳು ಕೋಡಿ ಬಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.</p>.<p>ಬೆಳವಾಡಿಯ ಹಿರೆಕೆರೆ, ಕೋಟೆ ಕರ್ಪೂರವಳ್ಳಿ ಗ್ರಾಮಗಳಲ್ಲಿ ಕೆರೆಗಳ ಕೋಡಿ ಬಿದ್ದು ತಗ್ಗಿನ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಮುತ್ತಿಗೆ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು, ಸಂತೆ ಮರೂರು ರಸ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.</p>.<p>ತಗ್ಗುಪ್ರದೇಶದ ಮೂರುಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮಳೆಯಿಂದಾಗಿ ಸೀಬಳ್ಳಿ, ಹಾನಗಲ್ಲು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾಶೀಪುರದಲ್ಲಿಯೂ ಕೆರೆ ಕೋಡಿ ಬಿದ್ದು, ತಗ್ಗುಪ್ರದೇಶದ 80 ಎಕರೆ ಪ್ರದೇಶದ ಅಡಿಕೆ ತೋಟಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ.</p>.<p>‘ಕೆರೆ ಏರಿಯ ಮೇಲೆ ನೀರು ಹರಿಯುತ್ತಿದ್ದು ಗೌರಿಕೊಪ್ಪಲು, ಸೀರೆಗೌಡನಕೊಪ್ಪಲು, ಅಂಕನಾಯಕನಹಳ್ಳಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹೊನ್ನವಳ್ಳಿ ಬಳಿ 6 ಕರೆಗಳು ಮಳೆಯಿಂದಾಗಿ ಕೋಡಿ ಬಿದ್ದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ರೈತರಿಗೆ ಸೂಕ್ತ ಪರಿಹಾರ ದೊರಕಿಸುವಂತೆ’ ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್ ಆಗ್ರಹಿಸಿದ್ದಾರೆ.</p>.<p>ತಾಲ್ಲೂಕಿನಾದ್ಯಂತ ಸಾವಿರಾರು ಎಕೆರೆ ಪ್ರದೇಶದ ಭತ್ತ, ಜೋಳ, ಶುಂಠಿ, ಅಡಿಕೆ ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೆಬ್ಬಾಲೆ ಕೊಪ್ಪಲು, ಯಗಟಿ ಗ್ರಾಮಗಳಲ್ಲಿ ತಗ್ಗು ಪ್ರದೇಶದ ಮನೆಗಳು ಹಾಗೂ ಪಟ್ಟಣದ ಹೆಂಟಗೆರೆ ರಸ್ತೆ ಗ್ಯಾರೇಜಿಗೆ ನೀರು ನುಗ್ಗಿ ಹಾನಿಯಾಗಿದೆ.</p>.<p>ಶಾಸಕ ಎ.ಮಂಜು, ಗ್ರೇಡ್ -2 ತಹಶೀಲ್ದಾರ್ ಸಿ.ಸ್ವಾಮಿ, ತಾ.ಪಂ ಇಒ ಶ್ರೀನಿವಾಸ್ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಮಂಜು ಮಾತನಾಡಿ, ‘ಭಾರಿ ಮಳೆಗೆ ಕೆರೆಗಳು ಕೋಡಿ ಬಿದ್ದಿವೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸ್ಥಳಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ’ ಹೇಳಿದರು.</p>.<p>ಗ್ರೇಡ್ 2 ತಹಶೀಲ್ದಾರ್ ಸಿ.ಸ್ವಾಮಿ, ಹಾನಿಗೊಳಗಾಗಿರುವವರಿಗೆ ತಾತ್ಕಾಲಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.</p>.<p><strong>ಮಳೆ ವಿವರ</strong> </p><p>ಅರಕಲಗೂಡು 11 ಸೆಂ.ಮೀ ಮಲ್ಲಿಪಟ್ಟಣ 4.3 ಸೆಂ.ಮೀ ದೊಡ್ಡಮಗ್ಗೆ 1.8 ಸೆಂ.ಮೀ ಕೊಣನೂರು 3.7 ಸೆಂ.ಮೀ ರಾಮನಾಥಪುರ 6.8 ಸೆಂ.ಮೀ ಬಸವಾಪಟ್ಟಣ 5.9 ಸೆಂ.ಮೀ ದೊಡ್ಡಬೆಮ್ಮತ್ತಿ 4.8 ಸೆಂ.ಮೀ ಮಳೆ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅರಕಲಗೂಡು</strong>: ತಾಲ್ಲೂಕಿನಲ್ಲಿ ಶನಿವಾರ ರಾತ್ರಿ ಸುರಿದ ಭಾರಿ ಮಳೆಗೆ 10ಕ್ಕೂ ಹೆಚ್ಚಿನ ಕೆರೆಗಳು ಕೋಡಿ ಬಿದ್ದು, ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ.</p>.<p>ಬೆಳವಾಡಿಯ ಹಿರೆಕೆರೆ, ಕೋಟೆ ಕರ್ಪೂರವಳ್ಳಿ ಗ್ರಾಮಗಳಲ್ಲಿ ಕೆರೆಗಳ ಕೋಡಿ ಬಿದ್ದು ತಗ್ಗಿನ ಪ್ರದೇಶದ ಜಮೀನುಗಳಿಗೆ ನೀರು ನುಗ್ಗಿದೆ. ಮುತ್ತಿಗೆ ಗ್ರಾಮದಲ್ಲಿ ಕೆರೆ ಕೋಡಿ ಬಿದ್ದು, ಸಂತೆ ಮರೂರು ರಸ್ತೆ ಜಲಾವೃತಗೊಂಡು ಸಂಚಾರ ಸ್ಥಗಿತಗೊಂಡಿದೆ.</p>.<p>ತಗ್ಗುಪ್ರದೇಶದ ಮೂರುಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮಳೆಯಿಂದಾಗಿ ಸೀಬಳ್ಳಿ, ಹಾನಗಲ್ಲು ಗ್ರಾಮಗಳ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಾಶೀಪುರದಲ್ಲಿಯೂ ಕೆರೆ ಕೋಡಿ ಬಿದ್ದು, ತಗ್ಗುಪ್ರದೇಶದ 80 ಎಕರೆ ಪ್ರದೇಶದ ಅಡಿಕೆ ತೋಟಗಳಿಗೆ ನೀರು ನುಗ್ಗಿ ಜಲಾವೃತಗೊಂಡಿದೆ.</p>.<p>‘ಕೆರೆ ಏರಿಯ ಮೇಲೆ ನೀರು ಹರಿಯುತ್ತಿದ್ದು ಗೌರಿಕೊಪ್ಪಲು, ಸೀರೆಗೌಡನಕೊಪ್ಪಲು, ಅಂಕನಾಯಕನಹಳ್ಳಿ ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಹೊನ್ನವಳ್ಳಿ ಬಳಿ 6 ಕರೆಗಳು ಮಳೆಯಿಂದಾಗಿ ಕೋಡಿ ಬಿದ್ದು, ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿ ಸಂಭವಿಸಿದೆ. ರೈತರಿಗೆ ಸೂಕ್ತ ಪರಿಹಾರ ದೊರಕಿಸುವಂತೆ’ ರೈತ ಸಂಘದ ಕಾರ್ಯಾಧ್ಯಕ್ಷ ಭುವನೇಶ್ ಆಗ್ರಹಿಸಿದ್ದಾರೆ.</p>.<p>ತಾಲ್ಲೂಕಿನಾದ್ಯಂತ ಸಾವಿರಾರು ಎಕೆರೆ ಪ್ರದೇಶದ ಭತ್ತ, ಜೋಳ, ಶುಂಠಿ, ಅಡಿಕೆ ತೋಟಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹೆಬ್ಬಾಲೆ ಕೊಪ್ಪಲು, ಯಗಟಿ ಗ್ರಾಮಗಳಲ್ಲಿ ತಗ್ಗು ಪ್ರದೇಶದ ಮನೆಗಳು ಹಾಗೂ ಪಟ್ಟಣದ ಹೆಂಟಗೆರೆ ರಸ್ತೆ ಗ್ಯಾರೇಜಿಗೆ ನೀರು ನುಗ್ಗಿ ಹಾನಿಯಾಗಿದೆ.</p>.<p>ಶಾಸಕ ಎ.ಮಂಜು, ಗ್ರೇಡ್ -2 ತಹಶೀಲ್ದಾರ್ ಸಿ.ಸ್ವಾಮಿ, ತಾ.ಪಂ ಇಒ ಶ್ರೀನಿವಾಸ್ ಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.</p>.<p>ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಮಂಜು ಮಾತನಾಡಿ, ‘ಭಾರಿ ಮಳೆಗೆ ಕೆರೆಗಳು ಕೋಡಿ ಬಿದ್ದಿವೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದ್ದು, ಸ್ಥಳಪರಿಶೀಲನೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿರುವುದಾಗಿ’ ಹೇಳಿದರು.</p>.<p>ಗ್ರೇಡ್ 2 ತಹಶೀಲ್ದಾರ್ ಸಿ.ಸ್ವಾಮಿ, ಹಾನಿಗೊಳಗಾಗಿರುವವರಿಗೆ ತಾತ್ಕಾಲಿಕ ಪರಿಹಾರ ನೀಡಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.</p>.<p><strong>ಮಳೆ ವಿವರ</strong> </p><p>ಅರಕಲಗೂಡು 11 ಸೆಂ.ಮೀ ಮಲ್ಲಿಪಟ್ಟಣ 4.3 ಸೆಂ.ಮೀ ದೊಡ್ಡಮಗ್ಗೆ 1.8 ಸೆಂ.ಮೀ ಕೊಣನೂರು 3.7 ಸೆಂ.ಮೀ ರಾಮನಾಥಪುರ 6.8 ಸೆಂ.ಮೀ ಬಸವಾಪಟ್ಟಣ 5.9 ಸೆಂ.ಮೀ ದೊಡ್ಡಬೆಮ್ಮತ್ತಿ 4.8 ಸೆಂ.ಮೀ ಮಳೆ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>