<p>ಅರಸೀಕೆರೆ: ಸರ್ಕಾರಿ ಬಸ್ ನೌಕರರು ಮಂಗಳವಾರದಿಂದ ಪ್ರತಿಭಟನೆ ಆರಂಭಿಸಿದ್ದು ಅರಸೀಕೆರೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು , ಕಚೇರಿಗೆ ತೆರಳುವ ನೌಕರರು , ಸಾಮಾನ್ಯ ಜನರು ಪರದಾಡುವಂತಾಯಿತು.</p>.<p>ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಸುಕಿನಿಂದಲೇ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸದೆ, ಡಿಪೋ ಆವರಣದಲ್ಲಿ ನಿಲುಗಡೆಗೊಳಿಸಲಾಗಿತ್ತು. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಖಾಸಗಿ ಪ್ರಯಾಣಿಕ ವಾಹನಗಳ ದರ್ಬಾರ್ ಜೋರಾಗಿತ್ತು. ಇವುಗಳಲ್ಲಿ ಪ್ರಯಾಣ ದರ ಹೆಚ್ಚಾಗಿದ್ದರೂ ಅನಿವಾರ್ಯವಾಗಿ ಜನರು ಪ್ರಯಾಣಿಸಿದರು.</p>.<p>ಅರಸೀಕೆರೆ ಸಾರಿಗೆ ಡಿಪೊಲ್ಲಿ 110 ಬಸ್ಗಳಿದ್ದು, 80ಕ್ಕೂ ಹೆಚ್ಚು ಬಸ್ಗಳು ಇಲ್ಲಿಗೆ ತಲುಪಿವೆ, ಹೊರ ಊರುಗಳಿಗೆ ಹೋಗಿದ್ದ ಬಸ್ಗಳನ್ನು ಅಲ್ಲಲ್ಲಿಯೇ ನಿಲುಗಡೆಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಪ್ರಯಾಣಿಕರಿಗಾಗಿ ಪೊಲೀಸರೇ ಖಾಸಗಿ ವಾಹನಗಳನ್ನು ಬಳಸಿ ಸಂಚಾರಕ್ಕೆ ಜನರ ಸಂಚಾರಕ್ಕೆ ಬಳಸುತ್ತಿದ್ದರು. ಮುಷ್ಕರದ ಮಾಹಿತಿ ಇದ್ದುದರಿಂದ ಪ್ರಯಾಣಿಕರ ಸಂಚಾರ ಕಡಿಮೆಯಾಗಿತ್ತು.</p>.<p> ಸಾರಿಗೆ ಇಲಾಖೆಯ ನೌಕರ ಮೂರ್ತಿಕೆರೆ ಮಂಜುನಾಥ್ ಮಾತನಾಡಿ, ಸಾರಿಗೆ ಇಲಾಖೆಯ ನೌಕರರ ಸೇವೆಗೆ ತಕ್ಕ ಪುರಸ್ಕಾರವನ್ನು ಸರ್ಕಾರ ನೀಡುತ್ತಿಲ್ಲ. ದಿನವಹಿ ಸಾಮಗ್ರಿಗಳು, ಶಿಕ್ಷಣ , ಆರೋಗ್ಯ ವೆಚ್ಚ ದುಬಾರಿಯಾಗಿವೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬೇಡಿಕೆಯನ್ನು ಈಡೇರಿಸುವ ಮೂಲಕ ಸಾರಿಗೆ ಇಲಾಖೆ ನೌಕರ ಹಿತ ರಕ್ಷಿಸಬೇಕಿದೆ ಎಂದು ಆಗ್ರಹಿಸಿದರು.</p>.<p> ಬಿಜೆಪಿ ಮುಖಂಡ ಜಿ.ಎನ್.ಮನೋಜ್ಕುಮಾರ್ ಮಾತನಾಡಿ, ‘ ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆ , ಸರ್ಕಾರಿ ನೌಕರರಿಗೆ ವೇತನ ನೀಡಲಾಗದೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮುಷ್ಕರದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿತ್ತಿದ್ದು ಸರ್ಕಾರ ಶೀಘ್ರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಸೀಕೆರೆ: ಸರ್ಕಾರಿ ಬಸ್ ನೌಕರರು ಮಂಗಳವಾರದಿಂದ ಪ್ರತಿಭಟನೆ ಆರಂಭಿಸಿದ್ದು ಅರಸೀಕೆರೆ ಬಸ್ ನಿಲ್ದಾಣದಲ್ಲಿ ವಿದ್ಯಾರ್ಥಿಗಳು , ಕಚೇರಿಗೆ ತೆರಳುವ ನೌಕರರು , ಸಾಮಾನ್ಯ ಜನರು ಪರದಾಡುವಂತಾಯಿತು.</p>.<p>ನಗರದ ಸರ್ಕಾರಿ ಬಸ್ ನಿಲ್ದಾಣದಲ್ಲಿ ನಸುಕಿನಿಂದಲೇ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸದೆ, ಡಿಪೋ ಆವರಣದಲ್ಲಿ ನಿಲುಗಡೆಗೊಳಿಸಲಾಗಿತ್ತು. ಸಾರಿಗೆ ಸಂಸ್ಥೆ ಬಸ್ ನಿಲ್ದಾಣದಲ್ಲಿ ಖಾಸಗಿ ಪ್ರಯಾಣಿಕ ವಾಹನಗಳ ದರ್ಬಾರ್ ಜೋರಾಗಿತ್ತು. ಇವುಗಳಲ್ಲಿ ಪ್ರಯಾಣ ದರ ಹೆಚ್ಚಾಗಿದ್ದರೂ ಅನಿವಾರ್ಯವಾಗಿ ಜನರು ಪ್ರಯಾಣಿಸಿದರು.</p>.<p>ಅರಸೀಕೆರೆ ಸಾರಿಗೆ ಡಿಪೊಲ್ಲಿ 110 ಬಸ್ಗಳಿದ್ದು, 80ಕ್ಕೂ ಹೆಚ್ಚು ಬಸ್ಗಳು ಇಲ್ಲಿಗೆ ತಲುಪಿವೆ, ಹೊರ ಊರುಗಳಿಗೆ ಹೋಗಿದ್ದ ಬಸ್ಗಳನ್ನು ಅಲ್ಲಲ್ಲಿಯೇ ನಿಲುಗಡೆಗೊಳಿಸಲಾಗಿದೆ ಎಂದು ಸಾರಿಗೆ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.</p>.<p>ಪ್ರಯಾಣಿಕರಿಗಾಗಿ ಪೊಲೀಸರೇ ಖಾಸಗಿ ವಾಹನಗಳನ್ನು ಬಳಸಿ ಸಂಚಾರಕ್ಕೆ ಜನರ ಸಂಚಾರಕ್ಕೆ ಬಳಸುತ್ತಿದ್ದರು. ಮುಷ್ಕರದ ಮಾಹಿತಿ ಇದ್ದುದರಿಂದ ಪ್ರಯಾಣಿಕರ ಸಂಚಾರ ಕಡಿಮೆಯಾಗಿತ್ತು.</p>.<p> ಸಾರಿಗೆ ಇಲಾಖೆಯ ನೌಕರ ಮೂರ್ತಿಕೆರೆ ಮಂಜುನಾಥ್ ಮಾತನಾಡಿ, ಸಾರಿಗೆ ಇಲಾಖೆಯ ನೌಕರರ ಸೇವೆಗೆ ತಕ್ಕ ಪುರಸ್ಕಾರವನ್ನು ಸರ್ಕಾರ ನೀಡುತ್ತಿಲ್ಲ. ದಿನವಹಿ ಸಾಮಗ್ರಿಗಳು, ಶಿಕ್ಷಣ , ಆರೋಗ್ಯ ವೆಚ್ಚ ದುಬಾರಿಯಾಗಿವೆ. ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬೇಡಿಕೆಯನ್ನು ಈಡೇರಿಸುವ ಮೂಲಕ ಸಾರಿಗೆ ಇಲಾಖೆ ನೌಕರ ಹಿತ ರಕ್ಷಿಸಬೇಕಿದೆ ಎಂದು ಆಗ್ರಹಿಸಿದರು.</p>.<p> ಬಿಜೆಪಿ ಮುಖಂಡ ಜಿ.ಎನ್.ಮನೋಜ್ಕುಮಾರ್ ಮಾತನಾಡಿ, ‘ ಗ್ಯಾರಂಟಿ ಯೋಜನೆಗಳಿಂದ ಸಾರಿಗೆ ಸಂಸ್ಥೆ , ಸರ್ಕಾರಿ ನೌಕರರಿಗೆ ವೇತನ ನೀಡಲಾಗದೆ ರಾಜ್ಯ ಸರ್ಕಾರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದೆ. ಮುಷ್ಕರದಿಂದ ಗ್ರಾಮೀಣ ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿತ್ತಿದ್ದು ಸರ್ಕಾರ ಶೀಘ್ರ ಬೇಡಿಕೆಗಳನ್ನು ಈಡೇರಿಸಬೇಕು’ ಎಂದು ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>