ಮಹಾಲಕ್ಷ್ಮಿ ಲೇಔಟ್ನಿಂದ ರಾಜಕೀಯ ಜೀವನ ಪ್ರಾರಂಭಿಸಿರುವ ನಾನು ಮುಂದಿನ ಚುನಾವಣೆಗೆ ಹಾಸನವನ್ನು ರಾಜಕೀಯ ಕ್ಷೇತ್ರ ಮಾಡಿಕೊಳ್ಳುತ್ತೇನೆಂಬುದು ಸುಳ್ಳು. ನಾನು ಹಾಸನ ಜಿಲ್ಲೆಯ ಅಳಿಯ ಎಂದ ಮಾತ್ರಕ್ಕೆ ಇಲ್ಲಿಂದಲೇ ಚುನಾವಣೆಗೆ ಸ್ಪರ್ಧಿಸಬೇಕೆಂಬ ನಿಯಮವಿಲ್ಲ. 1983ರಲ್ಲಿಯೇ ಶಾಸಕನಾಗಬೇಕಿದ್ದ ನನಗೆ 2013ರಲ್ಲಿ ಅದೃಷ್ಟ ಒಲಿದಿದೆ. ದೇವರ ಕೃಪೆಯಿಂದ ಈಗ ಜಿಲ್ಲಾ ಉಸ್ತುವಾರಿ ಸಚಿವನಾಗಿ ಬಂದಿದ್ದೇನೆ. ಜಿಲ್ಲೆಯಲ್ಲಿ ಈಗಾಗಲೇ ಸಾಕಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಇನ್ನೂ ಆಗಬೇಕಿರುವ ಕೆಲಸ ಸಾಕಷ್ಟಿದೆ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಸಂಸದ ಹಾಗೂ ಎಲ್ಲ ಶಾಸಕರ ಸಲಹೆ ಪಡೆದು ಕೆಲಸ ಮಾಡುತ್ತೇನೆ. ಅಭಿವೃದ್ಧಿ ವಿಚಾರದಲ್ಲಿ ಪಕ್ಷ, ರಾಜಕೀಯ ಪರಿಗಣಿಸುವುದಿಲ್ಲ ಎಂದು ತಿಳಿಸಿದರು.