ವೀರಶೈವ ಜನಾಂಗದ ಜಂಗಮ ಪಂಗಡಕ್ಕೆ ಸೇರಿದ ದಿವಂಗತ ಚಂದ್ರಪ್ಪನವರ ಮಗ ರಮೇಶ ಬಿಂದಿಗೆ ಕರಗ ಹೊತ್ತು ನರ್ತಿಸುತ್ತಾ ಬಿಂದಿಗೆ ಜಾತ್ರೆ ನಡೆಸಿಕೊಟ್ಟರು. ಪದ್ದತಿಯಂತೆ ಶಿವರಾತ್ರಿ ಹಬ್ಬದಿಂದ ವ್ರತಾಚರಣೆಯಲ್ಲಿದ್ದು, ಐದು ದಿನಗಳಿಂದ ಉಪವಾಸದಲ್ಲಿದ್ದು ಯುಗಾದಿ ಹಬ್ಬದ ದಿನ ಗ್ರಾಮದ ಶ್ರೀರಾಮೇಶ್ವರ ದೇವಾಲಯ ಹಾಗೂ ಹೇಮಾವತಿ ನದಿ ತೀರದಲ್ಲಿ ಪೂಜೆ ಸಲ್ಲಿಸಿ ತಲೆಯ ಮೇಲೆ ಬಿಂದಿಗೆ (ಕರಗ) ಹೊತ್ತು ಬಾಗಿವಾಳು ಗ್ರಾಮ ಹಾಗೂ ಕಡುವಿನಹೊಸಳ್ಳಿ ಗ್ರಾಮಕ್ಕೆ ತೆರಳಿ ಗ್ರಾಮದೇವತೆ ಅಂಜನೇಯ ಮತ್ತು ಬಸವೇಶ್ವರ ದೇವಾಲಯಗಳಿಗೆ ಪ್ರದಕ್ಷಿಣೆ ಹಾಕಿ ಬಂದ ನಂತರ ಗ್ರಾಮದಲ್ಲಿ ಬಿಂದಿಗೆ ನೃತ್ಯ ಪ್ರದರ್ಶಿಸಿ, ಜಾತ್ರಾ ಮಹೋತ್ಸವಕ್ಕೆ ಮೆರುಗು ನೀಡಿದರು.