ಮರ ತೆರವು ವಿರೋಧಿಸಿ ಗುಂಡಿಗಿಳಿದು ಅಡ್ಡಿಪಡಿಸಿದ ಪಕ್ಕದ ಮನೆಯ ನಿವಾಸಿಗಳನ್ನು ಪೊಲೀಸರು ಹೊರಗೆ ಕರೆತರಲು ಪ್ರಯತ್ನಿಸುತ್ತಿರುವುದು
ಈ ಜಾಗ ನಮಗೆ ಸೇರಿದ್ದು. ಬಿ.ಶಿವರಾಂ ಬೆಂಬಲಿಗರು ನಮ್ಮನ್ನು ಹೆದರಿಸಿ ಇಲ್ಲಿ ಕಾಂಗ್ರೆಸ್ ಕಚೇರಿ ಕಟ್ಟಲು ನಮ್ಮ ಮೇಲೆ ದೌರ್ಜನ್ಯ ಎಸಗುತ್ತಿದ್ದಾರೆ. ನಮ್ಮನ್ನು ಸಾಯಿಸಿ ಗುಂಡಿಯಲ್ಲಿ ಮುಚ್ಚಿದ ನಂತರ ಅಳತೆ ಮಾಡಲಿ
– ಖುರ್ಷಿದಾ ಬೇಗಂ, ಪಕ್ಕದ ಮನೆ ಯಜಮಾನಿ
ಅವರ ಸಂಬಂಧಿಕರು ಬಿ.ಶಿವರಾಂ ಅವರಿಗೆ ಜಾಗ ನೋಂದಣಿ ಮಾಡಿಕೊಟ್ಟಿದ್ದಾರೆ. ನಮಗೆ ನಮ್ಮ ನಿವೇಶನ ಮಾತ್ರ ಸಾಕು. ಬೇರೆಯವರ ಜಾಗ ಬೇಡ. ಜಾಗ ಬಿಡಿಸಿಕೊಡಲು ಬಂದ ಪುರಸಭೆಯವರಿಗೆ ಅಡ್ಡಿಪಡಿಸುತಿದ್ದಾರೆ
– ಎಂ.ಜೆ. ನಿಶಾಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ
ಅರ್ಜಿಯ ಆಧಾರದಲ್ಲಿ ಕಾನೂನುಬದ್ಧ ಅಳತೆ ಮಾಡುತ್ತಿದ್ದೇವೆ. ದಾಖಲೆಗಳಿದ್ದರೆ ಕೊಡಿ ಎಂದರೂ ದಾಖಲಾತಿ ಕೊಡದೆ ನಮ್ಮ ವಿರುದ್ಧ ಅವಾಚ್ಯವಾಗಿ ನಿಂದಿಸುತ್ತಿದ್ದು ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ