<p><strong>ಚನ್ನರಾಯಪಟ್ಟಣ:</strong> ಭರತನಾಟ್ಯ ಪಾರಂಪರಿಕ ಕಲೆ ಎಂದು ಹಾಸನದ ಭಾರತೀಯ ಸಂಗೀತ ನೃತ್ಯ ಶಾಲೆಯ ಕಲಾವಿದೆ ಅಂಬಳೆ ರಾಜೇಶ್ವರಿ ಹೇಳಿದರು.</p>.<p>ಪಟ್ಟಣದ ವಾಸವಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಸುಪ್ರದಾ ಅಕಾಡೆಮಿಯ ಕಲಾಸಂಘದ ವತಿಯಿಂದ ಏರ್ಪಡಿಸಿದ್ದ ನೃತ್ಯ ಚಿಗುರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಭರತನಾಟ್ಯ ಮನರಂಜನೆ ಮಾತ್ರವಾಗಿರದೆ ಮನೋವಿಕಾಸಕ್ಕೆ ಅವಕಾಶ ನೀಡುತ್ತದೆ. ಜನಪದನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಕಲೆಯನ್ನು ಆರಾಧಿಸಬೇಕು. ಪರಿಶ್ರಮ, ಶ್ರದ್ಧಾ, ಭಕ್ತಿಯಿಂದ ನೃತ್ಯ ಅಭ್ಯಸಿಸಿದರೆ ಗುರಿ ಸಾಧಿಸಬಹುದು ಎಂದರು.</p>.<p>ಮೇದಿನಿ ನೃತ್ಯ ನಿಕೇತನದ ಕಲಾವಿದೆ ಭಾನು ಮಾತನಾಡಿದರು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಸಿ.ಕೆ. ಬಾಬು ಇದ್ದರು.</p><p><br>ಪುಟಾಣಿ ಕಲಾವಿದರಾದ ಮಾನ್ಯಾ, ಲಾಸ್ಯಾ, ವಿಸ್ಮಿತಾ, ಪ್ರಾಂಜಲಿ ಹಾಗೂ ನಾಗಶ್ರೀ, ನೃತ್ಯ ಪ್ರದರ್ಶಿಸಿದರು. ಕಲಾವಿದೆ ರಮ್ಯಾ ಗಾಯನ, ಗುರುಮೂರ್ತಿ, ಎಸ್. ಸುಯೋಗ್ ಮತ್ತು ಚಿನ್ಮಯಿ ಪಕ್ಕ ವಾದ್ಯ ನುಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನರಾಯಪಟ್ಟಣ:</strong> ಭರತನಾಟ್ಯ ಪಾರಂಪರಿಕ ಕಲೆ ಎಂದು ಹಾಸನದ ಭಾರತೀಯ ಸಂಗೀತ ನೃತ್ಯ ಶಾಲೆಯ ಕಲಾವಿದೆ ಅಂಬಳೆ ರಾಜೇಶ್ವರಿ ಹೇಳಿದರು.</p>.<p>ಪಟ್ಟಣದ ವಾಸವಿ ಮಂದಿರದಲ್ಲಿ ಶುಕ್ರವಾರ ರಾತ್ರಿ ಸುಪ್ರದಾ ಅಕಾಡೆಮಿಯ ಕಲಾಸಂಘದ ವತಿಯಿಂದ ಏರ್ಪಡಿಸಿದ್ದ ನೃತ್ಯ ಚಿಗುರು ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.</p>.<p>ಭರತನಾಟ್ಯ ಮನರಂಜನೆ ಮಾತ್ರವಾಗಿರದೆ ಮನೋವಿಕಾಸಕ್ಕೆ ಅವಕಾಶ ನೀಡುತ್ತದೆ. ಜನಪದನೃತ್ಯ ಹಾಗೂ ಶಾಸ್ತ್ರೀಯ ನೃತ್ಯಗಳು ಮನಸ್ಸಿಗೆ ಮುದ ನೀಡುತ್ತವೆ. ಕಲೆಯನ್ನು ಆರಾಧಿಸಬೇಕು. ಪರಿಶ್ರಮ, ಶ್ರದ್ಧಾ, ಭಕ್ತಿಯಿಂದ ನೃತ್ಯ ಅಭ್ಯಸಿಸಿದರೆ ಗುರಿ ಸಾಧಿಸಬಹುದು ಎಂದರು.</p>.<p>ಮೇದಿನಿ ನೃತ್ಯ ನಿಕೇತನದ ಕಲಾವಿದೆ ಭಾನು ಮಾತನಾಡಿದರು. ಆರ್ಯವೈಶ್ಯ ಮಂಡಳಿಯ ಅಧ್ಯಕ್ಷ ಸಿ.ಕೆ. ಬಾಬು ಇದ್ದರು.</p><p><br>ಪುಟಾಣಿ ಕಲಾವಿದರಾದ ಮಾನ್ಯಾ, ಲಾಸ್ಯಾ, ವಿಸ್ಮಿತಾ, ಪ್ರಾಂಜಲಿ ಹಾಗೂ ನಾಗಶ್ರೀ, ನೃತ್ಯ ಪ್ರದರ್ಶಿಸಿದರು. ಕಲಾವಿದೆ ರಮ್ಯಾ ಗಾಯನ, ಗುರುಮೂರ್ತಿ, ಎಸ್. ಸುಯೋಗ್ ಮತ್ತು ಚಿನ್ಮಯಿ ಪಕ್ಕ ವಾದ್ಯ ನುಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>