ಈ ಕಿರುಹೊತ್ತಿಗೆಯನ್ನು ಜಿಲ್ಲೆಯ ಏಳೂ ವಿಧಾನಸಭಾ ಕ್ಷೇತ್ರಗಳಲ್ಲಿ ಚುನಾವಣಾ ಪ್ರಚಾರಕ್ಕೆ ಬಳಸಲಾಗುತ್ತಿದೆ. ಇದರಲ್ಲಿ ಜಿಲ್ಲೆಯ ಕ್ಷೇತ್ರಗಳಲ್ಲಿ ಸ್ಪರ್ಧಿಸಲಿರುವ ಜೆಡಿಎಸ್ ಅಭ್ಯರ್ಥಿಗಳ ಭಾವಚಿತ್ರಗಳಿವೆ. ಹೊಳೆನರಸೀಪುರದ ಎಚ್.ಡಿ. ರೇವಣ್ಣ, ಬೇಲೂರಿನ ಕೆ.ಎಸ್. ಲಿಂಗೇಶ್, ಶ್ರವಣಬೆಳಗೊಳ ಕ್ಷೇತ್ರದ ಸಿ.ಎನ್. ಬಾಲಕೃಷ್ಣ, ಸಕಲೇಶಪುರ ಕ್ಷೇತ್ರದ ಎಚ್.ಕೆ. ಕುಮಾರಸ್ವಾಮಿ, ಈಗಾಗಲೇ ಘೋಷಿಸಿರುವ ಅರಕಲಗೂಡು ಕ್ಷೇತ್ರದ ಎ. ಮಂಜು, ಅರಸೀಕೆರೆ ಕ್ಷೇತ್ರದ ಬಾಣಾವರ ಅಶೋಕ್ ಅವರ ಚಿತ್ರಗಳಿವೆ. ಇದರ ಜೊತೆಗೆ ಭವಾನಿ ರೇವಣ್ಣ ಅವರ ಚಿತ್ರವನ್ನೂ ಪ್ರಕಟಿಸಲಾಗಿದೆ.