<p><strong>ಹಾಸನ:</strong> ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಜೈವಿಕ ಇಂಧನ ಉದ್ಯಾನಗಳಲ್ಲಿನ ಪ್ರಾತ್ಯಕ್ಷಿಕೆಗಳು, ಉದ್ದೇಶಿತ ಉನ್ನತೀಕರಣ ಹಾಗೂ ವಾಣಿಜ್ಯೀಕರಣ ಯೋಜನೆಗಳಿಗೆ ಪೂರಕವಾಗಿವೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ತಿಳಿಸಿದರು.</p>.<p>ತಾಲ್ಲೂಕಿನ ಮಡೇನೂರಿನ ಜೈವಿಕ ಇಂಧನ ಉದ್ಯಾನಕ್ಕೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಅವರು, ರೈತರು, ಜೈವಿಕ ಇಂಧನ ಉದ್ಯಾನ ಹಾಗೂ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿದರು.</p>.<p>ಹಾಸನ ಜಿಲ್ಲೆಯಲ್ಲಿ ಅಪಾರ ಜೈವಿಕ ಇಂಧನ ಸಂಪನ್ಮೂಲಗಳು ಲಭ್ಯವಿದ್ದು, ವಿವಿಧ ಕೃಷಿ ತ್ಯಾಜ್ಯಗಳ ಕ್ರೋಡೀಕರಣಕ್ಕೆ ವಿಪುಲ ಅವಕಾಶಗಳಿವೆ. ಈ ಸಂಬಂಧ ವ್ಯವಸ್ಥಿತ ಮೌಲ್ಯವರ್ಧನೆಗೆ ಒತ್ತು ನೀಡಬೇಕು ಎಂದರು.</p>.<p>ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಮೈಸೂರು ಕಂದಾಯ ವಿಭಾಗದಲ್ಲಿ ನಿರ್ಮಿಸಿದ ಮೊಟ್ಟ ಮೊದಲ ಜೈವಿಕ ಇಂಧನ ಇದಾಗಿದ್ದು, ಜೈವಿಕ ಇಂಧನ ಕ್ಷೇತ್ರದ ಎಲ್ಲ ಆಯಾಮಗಳಿಗೆ ಕಾರಣೀಭೂತವಾಗಿದೆ ಎಂದರು.</p>.<p>ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 50 ಎಕರೆ ಪ್ರದೇಶದಲ್ಲಿರುವ ಈ ಜೈವಿಕ ಉದ್ಯಾನದ ಜೈವಿಕ ಇಂಧನ ಸಸ್ಯಪಾಲನಾ ಕ್ಷೇತ್ರ, ನೆಡು ತೋಪುಗಳು, ಬಯೋ ಡೀಸೆಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ವಾಸ್ತವಿಕ ಸ್ಥಿತಿ ಗತಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.</p>.<p>ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ನಂತರ ಕೈಗೊಳ್ಳಲಾಗಿರುವ ಅನುಪಾಲನಾ ಕ್ರಮಗಳ ಕುರಿತು ಚರ್ಚಿಸಿದ ಅವರು, ಮಂಡಳಿಯ ಉದ್ದೇಶಿತ ಮುಂದಿನ ಕಾರ್ಯಸೂಚಿಗಳ ಕುರಿತು ಮನವರಿಕೆ ಮಾಡಿಕೊಟ್ಟರು.</p>.<p>ಜೈವಿಕ ಇಂಧನಗಳ ಉತ್ಪಾದನಾ ಹಂತಗಳಲ್ಲಿ ಗುಣಮಟ್ಟ ನಿಯಂತ್ರಣ ಕಾಯ್ದುಕೊಳ್ಳುವಿಕೆ ಸವಾಲಾಗಿದ್ದು, ಇತ್ತೀಚೆಗೆ ಬೀದರನಲ್ಲಿ ಕಳಪೆ ಗುಣಮಟ್ಟದ ಜೈವಿಕ ಇಂಧನ ಮಾರಾಟ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದನ್ನು ಪ್ರಸ್ತಾಪಿಸಿದರು.</p>.<p>ಈ ಜೈವಿಕ ಇಂಧನ ಉದ್ಯಾನವು, ಪ್ರಸ್ತುತ ಮಂಡ್ಯದಲ್ಲಿ ಆರಂಭವಾಗಿರುವ ನೂತನ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಬೇಕಿದ್ದು, ಮುಂದಿನ ಕ್ರಮ ವಹಿಸಲು ಸಲಹೆ ನೀಡಿದರು.</p>.<p>ಕೃಷಿ ಕಾಲೇಜಿನ ಡೀನ್ ಡಾ.ಮುನಿಸ್ವಾಮಿಗೌಡ, ಸಂಯೋಜಕ ಡಾ.ಗಿರೀಶ್ ಎ.ಸಿ., ಅಧಿಕಾರಿಗಳು, ರೈತರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ರಾಜ್ಯದ ನಾಲ್ಕು ಕಂದಾಯ ವಿಭಾಗಗಳ ಜೈವಿಕ ಇಂಧನ ಉದ್ಯಾನಗಳಲ್ಲಿನ ಪ್ರಾತ್ಯಕ್ಷಿಕೆಗಳು, ಉದ್ದೇಶಿತ ಉನ್ನತೀಕರಣ ಹಾಗೂ ವಾಣಿಜ್ಯೀಕರಣ ಯೋಜನೆಗಳಿಗೆ ಪೂರಕವಾಗಿವೆ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಎಸ್.ಈ. ಸುಧೀಂದ್ರ ತಿಳಿಸಿದರು.</p>.<p>ತಾಲ್ಲೂಕಿನ ಮಡೇನೂರಿನ ಜೈವಿಕ ಇಂಧನ ಉದ್ಯಾನಕ್ಕೆ ಮಂಗಳವಾರ ಭೇಟಿ ನೀಡಿ ಪ್ರಗತಿ ಪರಿಶೀಲಿಸಿದ ಅವರು, ರೈತರು, ಜೈವಿಕ ಇಂಧನ ಉದ್ಯಾನ ಹಾಗೂ ಜೈವಿಕ ಇಂಧನ ಸಂಶೋಧನೆ, ಮಾಹಿತಿ ಹಾಗೂ ಪ್ರಾತ್ಯಕ್ಷಿಕೆ ಕೇಂದ್ರದ ಸಂಯೋಜಕರು, ಅಧಿಕಾರಿಗಳು ಹಾಗೂ ಸಿಬ್ಬಂದಿಯೊಂದಿಗೆ ಚರ್ಚಿಸಿದರು.</p>.<p>ಹಾಸನ ಜಿಲ್ಲೆಯಲ್ಲಿ ಅಪಾರ ಜೈವಿಕ ಇಂಧನ ಸಂಪನ್ಮೂಲಗಳು ಲಭ್ಯವಿದ್ದು, ವಿವಿಧ ಕೃಷಿ ತ್ಯಾಜ್ಯಗಳ ಕ್ರೋಡೀಕರಣಕ್ಕೆ ವಿಪುಲ ಅವಕಾಶಗಳಿವೆ. ಈ ಸಂಬಂಧ ವ್ಯವಸ್ಥಿತ ಮೌಲ್ಯವರ್ಧನೆಗೆ ಒತ್ತು ನೀಡಬೇಕು ಎಂದರು.</p>.<p>ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಮೈಸೂರು ಕಂದಾಯ ವಿಭಾಗದಲ್ಲಿ ನಿರ್ಮಿಸಿದ ಮೊಟ್ಟ ಮೊದಲ ಜೈವಿಕ ಇಂಧನ ಇದಾಗಿದ್ದು, ಜೈವಿಕ ಇಂಧನ ಕ್ಷೇತ್ರದ ಎಲ್ಲ ಆಯಾಮಗಳಿಗೆ ಕಾರಣೀಭೂತವಾಗಿದೆ ಎಂದರು.</p>.<p>ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 50 ಎಕರೆ ಪ್ರದೇಶದಲ್ಲಿರುವ ಈ ಜೈವಿಕ ಉದ್ಯಾನದ ಜೈವಿಕ ಇಂಧನ ಸಸ್ಯಪಾಲನಾ ಕ್ಷೇತ್ರ, ನೆಡು ತೋಪುಗಳು, ಬಯೋ ಡೀಸೆಲ್ ಉತ್ಪಾದನಾ ಘಟಕಕ್ಕೆ ಭೇಟಿ ನೀಡಿ ವಾಸ್ತವಿಕ ಸ್ಥಿತಿ ಗತಿಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು.</p>.<p>ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಪ್ರಗತಿ ಪರಿಶೀಲನಾ ಸಭೆಯ ನಂತರ ಕೈಗೊಳ್ಳಲಾಗಿರುವ ಅನುಪಾಲನಾ ಕ್ರಮಗಳ ಕುರಿತು ಚರ್ಚಿಸಿದ ಅವರು, ಮಂಡಳಿಯ ಉದ್ದೇಶಿತ ಮುಂದಿನ ಕಾರ್ಯಸೂಚಿಗಳ ಕುರಿತು ಮನವರಿಕೆ ಮಾಡಿಕೊಟ್ಟರು.</p>.<p>ಜೈವಿಕ ಇಂಧನಗಳ ಉತ್ಪಾದನಾ ಹಂತಗಳಲ್ಲಿ ಗುಣಮಟ್ಟ ನಿಯಂತ್ರಣ ಕಾಯ್ದುಕೊಳ್ಳುವಿಕೆ ಸವಾಲಾಗಿದ್ದು, ಇತ್ತೀಚೆಗೆ ಬೀದರನಲ್ಲಿ ಕಳಪೆ ಗುಣಮಟ್ಟದ ಜೈವಿಕ ಇಂಧನ ಮಾರಾಟ ಕುರಿತು ಮಾಧ್ಯಮಗಳಲ್ಲಿ ಬಿತ್ತರವಾಗಿದ್ದನ್ನು ಪ್ರಸ್ತಾಪಿಸಿದರು.</p>.<p>ಈ ಜೈವಿಕ ಇಂಧನ ಉದ್ಯಾನವು, ಪ್ರಸ್ತುತ ಮಂಡ್ಯದಲ್ಲಿ ಆರಂಭವಾಗಿರುವ ನೂತನ ಕೃಷಿ ವಿಶ್ವವಿದ್ಯಾಲಯಕ್ಕೆ ಸೇರ್ಪಡೆಯಾಗಬೇಕಿದ್ದು, ಮುಂದಿನ ಕ್ರಮ ವಹಿಸಲು ಸಲಹೆ ನೀಡಿದರು.</p>.<p>ಕೃಷಿ ಕಾಲೇಜಿನ ಡೀನ್ ಡಾ.ಮುನಿಸ್ವಾಮಿಗೌಡ, ಸಂಯೋಜಕ ಡಾ.ಗಿರೀಶ್ ಎ.ಸಿ., ಅಧಿಕಾರಿಗಳು, ರೈತರು ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>