ಸಭೆಯಲ್ಲಿ ಮಾತನಾಡಿದ ಅಗರವಾಲ್, ‘ಪ್ರೀತಂಗೌಡರನ್ನು ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿರುವ ಅವರು ನಮ್ಮ ಆಸ್ತಿ. ಜೆಡಿಎಸ್ ನಾಯಕರು ಅವರಿಗೆ ಏಕೆ ಕರೆ ಮಾಡಿ ಮಾತನಾಡಿಲ್ಲ ಎಂದು ಪ್ರಶ್ನಿಸಿದರು. ಅವರನ್ನು ಭೇಟಿಯಾಗದೇ, ಬಿಜೆಪಿಯ ಉಳಿದ ನಾಯಕರನ್ನು ಭೇಟಿ ಮಾಡಿರುವ ಜೆಡಿಎಸ್ ಮುಖಂಡರ ನಡೆಗೆ ಆಕ್ಷೇಪ ವ್ಯಕ್ತಪಡಿಸಿದರು’ ಎಂದು ಪಕ್ಷದ ಮೂಲಗಳು ತಿಳಿಸಿವೆ.