<p><strong>ಸಕಲೇಶಪುರ</strong>: ‘ಅವಮಾನವನ್ನು ಶಾಂತಿಯುತವಾಗಿ ನಿರ್ವಹಿಸುವ ಶಕ್ತಿಯೇ ಮಾನವೀಯ ಸಂಸ್ಕೃತಿಯ ಮೌಲ್ಯ. ಪ್ರತಿಕ್ರಿಯೆ ನೀಡುವ ತೀವ್ರತೆಗಿಂತ ತಾಳ್ಮೆಯಿಂದ ಪ್ರತಿಕ್ರಿಯಿಸದಿರುವ ಪ್ರಜ್ಞೆಯೆ ಹೆಚ್ಚು ಶ್ರೇಷ್ಠ’ ಎಂದು ಸಾಹಿತಿ ಹಾಗೂ ರಂಗಕರ್ಮಿ ಪ್ರಸಾದ್ ರಕ್ಷಿದಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಲಯನ್ಸ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರ್ಯನಿರತ ಪತ್ರಕರ್ತರ ಸಂಘ, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಲೇಖಕ ಮಲ್ನಾಡ್ ಮೆಹಬೂಬ್ ಅವರ ‘ಮಲ್ನಾಡ್ ಮನಸ್ಸು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಗ್ಗೆ ಮಾತನಾಡಿದರು.</p>.<p>‘ಸಾಮಾಜಿಕವಾಗಿ ಅವಮಾನಗಳು ಎದುರಾಗುವುದು ಸಹಜ. ಆದರೆ, ಅವಮಾನವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆತ್ಮಚಿಂತನೆಯಿಂದ ಬರಬೇಕು. ಅದನ್ನು ಮೀರಿ ಬದುಕಬೇಕು’ ಎಂದರು.</p>.<p>‘ಮೆಹಬೂಬ್ ಅವರ ಬರಹಗಳು ಈ ಒಳನೋಟಕ್ಕೆ ದಾರಿ ಮಾಡಿಕೊಡುವ ಸಾಮರ್ಥ್ಯ ಹೊಂದಿವೆ. ಅವರು ಬದುಕಿನ ನೋವು, ಧೈರ್ಯ, ಮತ್ತು ನಿರಾಳತೆಯನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದಿದ್ದಾರೆ’ ಎಂದರು.</p>.<p>‘ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಪಾತ್ರ ಬಗ್ಗೆ ಪರಿಣಾಮಕಾರಿ ಲೇಖನಗಳಿವೆ. ಬದುಕಿನ ಗಂಭೀರ ಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಅನಿವಾರ್ಯ ನಿರ್ಣಯಗಳ ಬಗ್ಗೆ, ಸಾಹಿತಿಗಳ ಪರಿಚಯ, ಓದುವ, ಬರೆಯುವ ಮತ್ತು ಸಮಾಜದೊಂದಿಗೆ ಬೆರೆತು ಬಾಳುವ ಪ್ರಾಮುಖ್ಯತೆಯ ಬಗ್ಗೆ ಲೇಖನಗಳು ಉತ್ತಮ’ ಎಂದರು.</p>.<p>ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಂ. ವಿಶ್ವನಾಥ್ ಮಾತನಾಡಿ, ‘ನೋವು-ನಲಿವಿನ ಸಂಗ್ರಹವಾದ ಈ ಪುಸ್ತಕ ತಾತ್ವಿಕತೆಗೆ ತಾಕಲಾಡುತ್ತದೆ. ಸಮಾಜವನ್ನು ಇಂದು ಡ್ರಗ್ಸ್ ಕಾಡುತ್ತಿದೆ. ಪ್ರಮುಖವಾಗಿ ಯುವಜನಾಂಗವನ್ನು ಇದರಿಂದ ಮುಕ್ತಗೊಳಿಸಲು ಸಮಾಜ ಒಂದಾಗಬೇಕು. ಆಗಸ್ಟ್ 21ರಂದು ಸಕಲೇಶಪುರದಲ್ಲಿ ಸಮಾವೇಶ ನಡೆಯಲಿದೆ’ ಎಂದರು.</p>.<p>ಸಾಮಾಜಿಕ ಕಾರ್ಯಕರ್ತ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ‘ಮಲ್ನಾಡ್ ಮನಸ್ಸು’ ಎಂಬ ಕೃತಿಯು ನುಡಿದಂತೆ ಬದುಕುವ ವ್ಯಕ್ತಿಯ ಬದುಕಿನ ಪ್ರತಿಫಲನವಾಗಿದೆ. ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವವರು ನಿಜವಾದ ಬರಹಗಾರರು. ಈ ಬರವಣಿಗೆಗಳು ಮೌನವಾಗಿರುವವರಿಗೂ ಮಾತು ಕೊಟ್ಟಂತಿವೆ ಎಂದರು.</p>.<p>ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಕೆ. ಮುಸ್ಲಿಯಾರ್ ಮಾತನಾಡಿ, ‘ಮೆಹಬೂಬ್’ ಎಂದರೆ ಪ್ರೀತಿಗೆ ಅರ್ಹರು. ಹೆಸರಿಗೆ ತಕ್ಕಂತೆ ಅವರು ಧರ್ಮ, ಜಾತಿ, ವರ್ಣ ಎಲ್ಲರೊಂದಿಗೂ ಸಮಾನವಾಗಿ ಬೆರೆಯುವ ವ್ಯಕ್ತಿ ಎಂದರು.</p>.<p>ಪತ್ರಕರ್ತ ಹೆತ್ತೂರು ನಾಗರಾಜ್ ಮಾತನಾಡಿ, ‘ಮಲ್ನಾಡ್ ಮೆಹಬೂಬ್ ಅವರ ಬರಹಗಳಲ್ಲಿ ಗಂಭೀರ ಸಂವೇದನೆ ಇದೆ. ಪತ್ರಕರ್ತನ ದುರದೃಷ್ಟದ ಅನುಭವ, ಸಾಮಾಜಿಕ ಸಂಕೀರ್ಣತೆಗಳ ವ್ಯಾಖ್ಯಾನ ಈ ಇಲ್ಲಿ ನಿಖರವಾಗಿ ಸೆರೆಯಾಗಿವೆ’ ಎಂದರು.</p>.<p>ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಲೇಖಕ ಮಲ್ನಾಡ್ ಮೆಹಬೂಬ್, ಬಿಜೆಪಿ ಮುಖಂಡ ಜೈ ಮಾರುತಿ ದೇವರಾಜ್, ತೌಫೀಕ್ ಅಹಮದ್, ಜಾಮಿಯ ಮಸೀದಿ ಉಪಾಧ್ಯಕ್ಷ ಅಸ್ಲಾಂ, ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಇದ್ದರು.</p>.<p>ಜೈ ಭೀಮ್ ಮಂಜು ಕಾರ್ಯಕ್ರಮ ನಿರೂಪಿಸಿದರು. ಸಾ.ಸು. ವಿಶ್ವನಾಥ್ ಪ್ರಾರ್ಥಿಸಿದರು, ತಾಲ್ಲೂಕು ಕಸಾಪ ಕಾರ್ಯದರ್ಶಿ ಯೋಗೇಶ್ ಸ್ವಾಗತಿಸಿದರು. ಅಕ್ಬರ್ ಜುನೈದ್ ವಂದಿಸಿದರು.</p>.<div><blockquote>ಸಮಸ್ಯೆಗಳ ನಡುವೆ ಮತ್ತೊಬ್ಬರಿಗೆ ನೆರವಾಗುವ ಮನಸ್ಸು ಎಲ್ಲರಿಗೂ ದೊರೆಯದು. ಎದುರಾದ ಅವಮಾನಗಳು ಮುಂದಿನ ದಿನಗಳಲ್ಲಿ ಸನ್ಮಾನವಾಗಿ ಬರುತ್ತವೆ</blockquote><span class="attribution">ಮುರುಳಿ ಮೋಹನ್ ಕಾಂಗ್ರೆಸ್ ಮುಖಂಡ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ</strong>: ‘ಅವಮಾನವನ್ನು ಶಾಂತಿಯುತವಾಗಿ ನಿರ್ವಹಿಸುವ ಶಕ್ತಿಯೇ ಮಾನವೀಯ ಸಂಸ್ಕೃತಿಯ ಮೌಲ್ಯ. ಪ್ರತಿಕ್ರಿಯೆ ನೀಡುವ ತೀವ್ರತೆಗಿಂತ ತಾಳ್ಮೆಯಿಂದ ಪ್ರತಿಕ್ರಿಯಿಸದಿರುವ ಪ್ರಜ್ಞೆಯೆ ಹೆಚ್ಚು ಶ್ರೇಷ್ಠ’ ಎಂದು ಸಾಹಿತಿ ಹಾಗೂ ರಂಗಕರ್ಮಿ ಪ್ರಸಾದ್ ರಕ್ಷಿದಿ ಅಭಿಪ್ರಾಯಪಟ್ಟರು.</p>.<p>ಪಟ್ಟಣದ ಲಯನ್ಸ್ ಭವನದಲ್ಲಿ ಕನ್ನಡ ಸಾಹಿತ್ಯ ಪರಿಷತ್, ಕಾರ್ಯನಿರತ ಪತ್ರಕರ್ತರ ಸಂಘ, ಡ್ರಗ್ಸ್ ಮುಕ್ತ ಸಕಲೇಶಪುರ ಆಂದೋಲನ ಹಾಗೂ ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಲೇಖಕ ಮಲ್ನಾಡ್ ಮೆಹಬೂಬ್ ಅವರ ‘ಮಲ್ನಾಡ್ ಮನಸ್ಸು’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಕೃತಿ ಬಗ್ಗೆ ಮಾತನಾಡಿದರು.</p>.<p>‘ಸಾಮಾಜಿಕವಾಗಿ ಅವಮಾನಗಳು ಎದುರಾಗುವುದು ಸಹಜ. ಆದರೆ, ಅವಮಾನವನ್ನು ಜೀರ್ಣಿಸಿಕೊಳ್ಳುವ ಶಕ್ತಿ ಆತ್ಮಚಿಂತನೆಯಿಂದ ಬರಬೇಕು. ಅದನ್ನು ಮೀರಿ ಬದುಕಬೇಕು’ ಎಂದರು.</p>.<p>‘ಮೆಹಬೂಬ್ ಅವರ ಬರಹಗಳು ಈ ಒಳನೋಟಕ್ಕೆ ದಾರಿ ಮಾಡಿಕೊಡುವ ಸಾಮರ್ಥ್ಯ ಹೊಂದಿವೆ. ಅವರು ಬದುಕಿನ ನೋವು, ಧೈರ್ಯ, ಮತ್ತು ನಿರಾಳತೆಯನ್ನು ಅಕ್ಷರ ರೂಪದಲ್ಲಿ ಸೆರೆಹಿಡಿದಿದ್ದಾರೆ’ ಎಂದರು.</p>.<p>‘ಡ್ರಗ್ಸ್ ಮುಕ್ತ ಸಮಾಜ ನಿರ್ಮಾಣಕ್ಕೆ ಸಮಾಜದ ಪಾತ್ರ ಬಗ್ಗೆ ಪರಿಣಾಮಕಾರಿ ಲೇಖನಗಳಿವೆ. ಬದುಕಿನ ಗಂಭೀರ ಸ್ಥಿತಿಯಲ್ಲಿ ತೆಗೆದುಕೊಳ್ಳಬೇಕಾದ ಅನಿವಾರ್ಯ ನಿರ್ಣಯಗಳ ಬಗ್ಗೆ, ಸಾಹಿತಿಗಳ ಪರಿಚಯ, ಓದುವ, ಬರೆಯುವ ಮತ್ತು ಸಮಾಜದೊಂದಿಗೆ ಬೆರೆತು ಬಾಳುವ ಪ್ರಾಮುಖ್ಯತೆಯ ಬಗ್ಗೆ ಲೇಖನಗಳು ಉತ್ತಮ’ ಎಂದರು.</p>.<p>ಡ್ರಗ್ಸ್ ಮುಕ್ತ ಭಾರತ ಆಂದೋಲನದ ಪ್ರಮುಖರಾದ ಎಚ್.ಎಂ. ವಿಶ್ವನಾಥ್ ಮಾತನಾಡಿ, ‘ನೋವು-ನಲಿವಿನ ಸಂಗ್ರಹವಾದ ಈ ಪುಸ್ತಕ ತಾತ್ವಿಕತೆಗೆ ತಾಕಲಾಡುತ್ತದೆ. ಸಮಾಜವನ್ನು ಇಂದು ಡ್ರಗ್ಸ್ ಕಾಡುತ್ತಿದೆ. ಪ್ರಮುಖವಾಗಿ ಯುವಜನಾಂಗವನ್ನು ಇದರಿಂದ ಮುಕ್ತಗೊಳಿಸಲು ಸಮಾಜ ಒಂದಾಗಬೇಕು. ಆಗಸ್ಟ್ 21ರಂದು ಸಕಲೇಶಪುರದಲ್ಲಿ ಸಮಾವೇಶ ನಡೆಯಲಿದೆ’ ಎಂದರು.</p>.<p>ಸಾಮಾಜಿಕ ಕಾರ್ಯಕರ್ತ ಯಡೇಹಳ್ಳಿ ಮಂಜುನಾಥ್ ಮಾತನಾಡಿ, ‘ಮಲ್ನಾಡ್ ಮನಸ್ಸು’ ಎಂಬ ಕೃತಿಯು ನುಡಿದಂತೆ ಬದುಕುವ ವ್ಯಕ್ತಿಯ ಬದುಕಿನ ಪ್ರತಿಫಲನವಾಗಿದೆ. ಅನ್ಯಾಯಗಳ ವಿರುದ್ಧ ಧ್ವನಿ ಎತ್ತುವವರು ನಿಜವಾದ ಬರಹಗಾರರು. ಈ ಬರವಣಿಗೆಗಳು ಮೌನವಾಗಿರುವವರಿಗೂ ಮಾತು ಕೊಟ್ಟಂತಿವೆ ಎಂದರು.</p>.<p>ಜುಮಾ ಮಸೀದಿ ಅಧ್ಯಕ್ಷ ಇಬ್ರಾಹಿಂ ಕೆ. ಮುಸ್ಲಿಯಾರ್ ಮಾತನಾಡಿ, ‘ಮೆಹಬೂಬ್’ ಎಂದರೆ ಪ್ರೀತಿಗೆ ಅರ್ಹರು. ಹೆಸರಿಗೆ ತಕ್ಕಂತೆ ಅವರು ಧರ್ಮ, ಜಾತಿ, ವರ್ಣ ಎಲ್ಲರೊಂದಿಗೂ ಸಮಾನವಾಗಿ ಬೆರೆಯುವ ವ್ಯಕ್ತಿ ಎಂದರು.</p>.<p>ಪತ್ರಕರ್ತ ಹೆತ್ತೂರು ನಾಗರಾಜ್ ಮಾತನಾಡಿ, ‘ಮಲ್ನಾಡ್ ಮೆಹಬೂಬ್ ಅವರ ಬರಹಗಳಲ್ಲಿ ಗಂಭೀರ ಸಂವೇದನೆ ಇದೆ. ಪತ್ರಕರ್ತನ ದುರದೃಷ್ಟದ ಅನುಭವ, ಸಾಮಾಜಿಕ ಸಂಕೀರ್ಣತೆಗಳ ವ್ಯಾಖ್ಯಾನ ಈ ಇಲ್ಲಿ ನಿಖರವಾಗಿ ಸೆರೆಯಾಗಿವೆ’ ಎಂದರು.</p>.<p>ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಾರದಾ ಗುರುಮೂರ್ತಿ, ಲೇಖಕ ಮಲ್ನಾಡ್ ಮೆಹಬೂಬ್, ಬಿಜೆಪಿ ಮುಖಂಡ ಜೈ ಮಾರುತಿ ದೇವರಾಜ್, ತೌಫೀಕ್ ಅಹಮದ್, ಜಾಮಿಯ ಮಸೀದಿ ಉಪಾಧ್ಯಕ್ಷ ಅಸ್ಲಾಂ, ದಲಿತ ಮುಖಂಡ ಹೆತ್ತೂರು ಅಣ್ಣಯ್ಯ ಇದ್ದರು.</p>.<p>ಜೈ ಭೀಮ್ ಮಂಜು ಕಾರ್ಯಕ್ರಮ ನಿರೂಪಿಸಿದರು. ಸಾ.ಸು. ವಿಶ್ವನಾಥ್ ಪ್ರಾರ್ಥಿಸಿದರು, ತಾಲ್ಲೂಕು ಕಸಾಪ ಕಾರ್ಯದರ್ಶಿ ಯೋಗೇಶ್ ಸ್ವಾಗತಿಸಿದರು. ಅಕ್ಬರ್ ಜುನೈದ್ ವಂದಿಸಿದರು.</p>.<div><blockquote>ಸಮಸ್ಯೆಗಳ ನಡುವೆ ಮತ್ತೊಬ್ಬರಿಗೆ ನೆರವಾಗುವ ಮನಸ್ಸು ಎಲ್ಲರಿಗೂ ದೊರೆಯದು. ಎದುರಾದ ಅವಮಾನಗಳು ಮುಂದಿನ ದಿನಗಳಲ್ಲಿ ಸನ್ಮಾನವಾಗಿ ಬರುತ್ತವೆ</blockquote><span class="attribution">ಮುರುಳಿ ಮೋಹನ್ ಕಾಂಗ್ರೆಸ್ ಮುಖಂಡ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>