<p><strong>ಹಾಸನ:</strong> ‘ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಯಾವುದೇ ನಾಯಕರು ಕೇಳಿದರೆ ಉತ್ತರ ಕೊಡಲು ಸಿದ್ದ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.</p>.<p>‘ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ಮೈತ್ರಿ ಧರ್ಮಕ್ಕೆ ಬದ್ಧರಾಗಿ ನಡೆದುಕೊಂಡಿದ್ದೇವೆ. ವರ್ಗಾವಣೆ ಸೇರಿ ಅನ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಗತ್ಯವೆನಿಸಿದರೆ ಸಮನ್ವಯ ಸಮಿತಿಯಲ್ಲಿಯೇ ವಿವರ ನೀಡುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಸಮ್ಮಿಶ್ರ ಸರ್ಕಾರ ಪತನವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಯಾರೇ ಮಾಟ ಮಂತ್ರ ಮಾಡಿಸಿದರೂ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು. ಐದು ವರ್ಷ ಪೂರೈಸಲಿದೆ. ಸರ್ಕಾರಕ್ಕೆ ಅಥವಾ ನಮ್ಮ ಕುಟುಂಬಕ್ಕೆ ಮಾಟ-ಮಂತ್ರ ಮಾಡಿಸಿದರೆ ಅದು ಅವರಿಗೇ ರಿವರ್ಸ್ ಆಗಲಿದೆ. ಹಾಗೆ ಮಾಡಲು ಹೋದವರು ಅನುಭವಿಸಿದ್ದಾರೆ. ನಮಗೆ ರಾಹುಕಾಲ-ಗುಳಿಕಾಲ ತಟ್ಟುವುದಿಲ್ಲ. ನಮ್ಮ ಕುಟುಂಬ ಈಶ್ವರನ ಮೇಲೆ ಅಪಾರ ಭಕ್ತಿ ನಂಬಿಕೆ ಇಟ್ಟಿದೆ. ಶಿವ, ಶೃಂಗೇರಿ ಶಾರದೆ ಹಾಗೂ ಗುರುಗಳ ಅನುಗ್ರಹ ಇರುವರೆಗೂ ನನಗಾಗಲೀ, ಕುಮಾರಸ್ವಾಮಿಗಾಗಲೀ, ದೇವೇಗೌಡರಿಗಾಗಲೀ ಏನೂ ಆಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ನಾನು ಮತ್ತು ಕುಮಾರಸ್ವಾಮಿ ಬದುಕಿರುವವರೆಗೆ ಜಗಳ ಮಾಡುವುದಿಲ್ಲ. ಯಾರಾದರೂ ಹೊಡೆದಾಡುತ್ತಾರೆ ಎಂದುಕೊಂಡಿದರೆ ಅದು ಅವರ ಭ್ರಮೆ. ಕುಮಾರಸ್ವಾಮಿ ಏನು ಕೆಲಸ ಹೇಳುತ್ತಾರೋ ಅದನ್ನು ಮಾಡುವೆ. ದೇವೇಗೌಡರು ನಮ್ಮ ನಾಯಕರು. ಕೊನೆವರೆಗೂ ಕುಮಾರಸ್ವಾಮಿ ಅವರಿಗೆ ಬಲಭುಜವಾಗಿ ನಿಲ್ಲುವೆ’ ಎಂದು ಅಭಯ ನೀಡಿದರು.</p>.<p>‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಮೀರಿದ ಸಂಬಂಧ ಇದೆ. ಕೆಲವರು ನನ್ನನ್ನು ಸೂಪರ್ ಸಿ.ಎಂ ಅಂತಾರೆ. ಅವರ ಮಾತಿನಂತೆ ಆದರೆ ಸಂತೋಷ. ನಾನು ಸಿ.ಎಂ ಆಕಾಂಕ್ಷಿಯಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ರಾಜ್ಯದಲ್ಲಿ ಅನೇಕರಿಗೆ ನನ್ನ ಹೆಸರು ಹೇಳದೇ ಹೋದರೆ ಹೊಟ್ಟೆ ತುಂಬುವುದಿಲ್ಲ. ಕೆಲವು ನಾಯಕರು ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ ಎಂದು ಕುಮಾರಸ್ವಾಮಿಗೆ ಧಮ್ಕಿ ಹಾಕಿದರು. ಏನಾಯ್ತು’ ಎಂದು ಹೆಸರು ಹೇಳದೆಯೇ ವಿರೋಧಿಗಳ ಕಾಲೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ‘ಕಾಂಗ್ರೆಸ್ ಮುಖಂಡರು ಮಾಡಿರುವ ಆರೋಪಕ್ಕೆ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಸೇರಿದಂತೆ ಯಾವುದೇ ನಾಯಕರು ಕೇಳಿದರೆ ಉತ್ತರ ಕೊಡಲು ಸಿದ್ದ’ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದರು.</p>.<p>‘ಸಮ್ಮಿಶ್ರ ಸರ್ಕಾರದ ಆಶಯಕ್ಕೆ ಧಕ್ಕೆ ತಂದಿಲ್ಲ. ಮೈತ್ರಿ ಧರ್ಮಕ್ಕೆ ಬದ್ಧರಾಗಿ ನಡೆದುಕೊಂಡಿದ್ದೇವೆ. ವರ್ಗಾವಣೆ ಸೇರಿ ಅನ್ಯ ಇಲಾಖೆಯಲ್ಲಿ ಹಸ್ತಕ್ಷೇಪ ಮಾಡಿಲ್ಲ. ಅಗತ್ಯವೆನಿಸಿದರೆ ಸಮನ್ವಯ ಸಮಿತಿಯಲ್ಲಿಯೇ ವಿವರ ನೀಡುತ್ತೇನೆ’ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.</p>.<p>‘ಸಮ್ಮಿಶ್ರ ಸರ್ಕಾರ ಪತನವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿ ಯಾರೇ ಮಾಟ ಮಂತ್ರ ಮಾಡಿಸಿದರೂ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯಾಗದು. ಐದು ವರ್ಷ ಪೂರೈಸಲಿದೆ. ಸರ್ಕಾರಕ್ಕೆ ಅಥವಾ ನಮ್ಮ ಕುಟುಂಬಕ್ಕೆ ಮಾಟ-ಮಂತ್ರ ಮಾಡಿಸಿದರೆ ಅದು ಅವರಿಗೇ ರಿವರ್ಸ್ ಆಗಲಿದೆ. ಹಾಗೆ ಮಾಡಲು ಹೋದವರು ಅನುಭವಿಸಿದ್ದಾರೆ. ನಮಗೆ ರಾಹುಕಾಲ-ಗುಳಿಕಾಲ ತಟ್ಟುವುದಿಲ್ಲ. ನಮ್ಮ ಕುಟುಂಬ ಈಶ್ವರನ ಮೇಲೆ ಅಪಾರ ಭಕ್ತಿ ನಂಬಿಕೆ ಇಟ್ಟಿದೆ. ಶಿವ, ಶೃಂಗೇರಿ ಶಾರದೆ ಹಾಗೂ ಗುರುಗಳ ಅನುಗ್ರಹ ಇರುವರೆಗೂ ನನಗಾಗಲೀ, ಕುಮಾರಸ್ವಾಮಿಗಾಗಲೀ, ದೇವೇಗೌಡರಿಗಾಗಲೀ ಏನೂ ಆಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.</p>.<p>‘ನಾನು ಮತ್ತು ಕುಮಾರಸ್ವಾಮಿ ಬದುಕಿರುವವರೆಗೆ ಜಗಳ ಮಾಡುವುದಿಲ್ಲ. ಯಾರಾದರೂ ಹೊಡೆದಾಡುತ್ತಾರೆ ಎಂದುಕೊಂಡಿದರೆ ಅದು ಅವರ ಭ್ರಮೆ. ಕುಮಾರಸ್ವಾಮಿ ಏನು ಕೆಲಸ ಹೇಳುತ್ತಾರೋ ಅದನ್ನು ಮಾಡುವೆ. ದೇವೇಗೌಡರು ನಮ್ಮ ನಾಯಕರು. ಕೊನೆವರೆಗೂ ಕುಮಾರಸ್ವಾಮಿ ಅವರಿಗೆ ಬಲಭುಜವಾಗಿ ನಿಲ್ಲುವೆ’ ಎಂದು ಅಭಯ ನೀಡಿದರು.</p>.<p>‘ನನ್ನ ಮತ್ತು ಸಿದ್ದರಾಮಯ್ಯ ನಡುವೆ ರಾಜಕೀಯ ಮೀರಿದ ಸಂಬಂಧ ಇದೆ. ಕೆಲವರು ನನ್ನನ್ನು ಸೂಪರ್ ಸಿ.ಎಂ ಅಂತಾರೆ. ಅವರ ಮಾತಿನಂತೆ ಆದರೆ ಸಂತೋಷ. ನಾನು ಸಿ.ಎಂ ಆಕಾಂಕ್ಷಿಯಲ್ಲ’ ಎಂದು ಸ್ಪಷ್ಟಪಡಿಸಿದರು.</p>.<p>‘ರಾಜ್ಯದಲ್ಲಿ ಅನೇಕರಿಗೆ ನನ್ನ ಹೆಸರು ಹೇಳದೇ ಹೋದರೆ ಹೊಟ್ಟೆ ತುಂಬುವುದಿಲ್ಲ. ಕೆಲವು ನಾಯಕರು ನಿಮ್ಮನ್ನು ಜೈಲಿಗೆ ಕಳಿಸುತ್ತೇವೆ ಎಂದು ಕುಮಾರಸ್ವಾಮಿಗೆ ಧಮ್ಕಿ ಹಾಕಿದರು. ಏನಾಯ್ತು’ ಎಂದು ಹೆಸರು ಹೇಳದೆಯೇ ವಿರೋಧಿಗಳ ಕಾಲೆಳೆದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>