ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆರೆಗೆ ಕಲುಷಿತ ನೀರು: ಮೀನುಗಳ ಸಾವು

ತಾಲ್ಲೂಕಿನ ಕೊಕ್ಕನಘಟ್ಟ ಕೆರೆ
Last Updated 15 ಫೆಬ್ರುವರಿ 2021, 16:25 IST
ಅಕ್ಷರ ಗಾತ್ರ

ಹಾಸನ: ತಾಲ್ಲೂಕಿನ ಕೊಕ್ಕನಘಟ್ಟ ಕೆರೆ ನೀರು ಕಲುಷಿತಗೊಂಡು ಸೋಮವಾರ ನೂರಾರು ಮೀನುಗಳು ಮೃತಪಟ್ಟಿವೆ.

ಕೊಕ್ಕನಘಟ್ಟ ಗ್ರಾಮದ ಸಮೀಪದಲ್ಲಿರುವ ಹಿಮತ್‌ ಸಿಂಗ್‌ ಕಾ ಲೆನಿಲ್‌ ಕಾರ್ಖಾನೆಯಿಂದ ಕಲುಷಿತ ನೀರು ಕೆರೆಯನ್ನು ಸೇರುತ್ತಿದ್ದು, ಪರಿಣಾಮ ನೂರಾರು ಮೀನುಗಳು ಸಾವಿಗೀಡಾಗುತ್ತಿವೆ. ಹಿಂದೆಯೂ ಕೆರೆಗೆ ಕಲುಷಿತ ನೀರು ಬಿಡಲಾಗಿತ್ತು ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

‘ಕೆರೆ ನೀರು ಕಪ್ಪು ಬಣ್ಣಕ್ಕೆ ತಿರುಗುತ್ತಿದೆ. ಎಚ್ಚೆತ್ತುಕೊಳ್ಳದಿದ್ದರೆ ಮತ್ತಷ್ಟು ಮೀನುಗಳು ಸಾವಿಗೀಡಾಬೇಕಾಗುತ್ತವೆ.
ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಿ ಕಲುಷಿತ ನೀರು ಬಿಡದಂತೆ ಹಿಮತ್‌ಸಿಂಗ್ ಕಾ ಕಂಪನಿಗೆ ಎಚ್ಚರಿಕೆ ನೀಡಬೇಕು’ಎಂದು ಕೊಕ್ಕನಘಟ್ಟ ಗ್ರಾಮಸ್ಥರಾದ ಮಹೇಶ್, ಚಂದ್ರೇಗೌಡ, ಸತೀಶ್‌ಗೌಡ, ಲೊಕೇಶ್‌ಗೌಡ, ನಾಗೇಶ್, ಕೆ.ಎಂ. ಲೋಕೇಶ್, ಉಮೇಶ್, ಗೌಡೇಶ್, ಮಂಜುನಾಥ್, ಚಂದ್ರು ಆಗ್ರಹಿಸಿದರು.

‘ಕೆರೆಯಲ್ಲಿ ಮೀನುಗಳು ಮೃತಪಟ್ಟಿರುವ ಬಗ್ಗೆ ಮಾಹಿತಿ ಇಲ್ಲ. ಅಧಿಕಾರಿಗಳಿಂದ ಮಾಹಿತಿ ಪಡೆದು, ಕಲುಷಿತ ನೀರು ಕೆರೆ ಸೇರದಂತೆ ಕ್ರಮ ಕೈಗೊಳ್ಳಲಾಗುವುದು’ಎಂದು ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT