ಜಿ.ಪಂ. ಸದಸ್ಯೆ ಉಜ್ಮಾ ರುಜ್ಮಿ ಸುದರ್ಶನ್ ಮಾತನಾಡಿ, ‘ಆನೆ ಕಾರಿಡಾರ್, ಮೀಸಲು ಅರಣ್ಯ, ಸಮಸ್ಯೆಗಳು ಈಗಾಗಲೇ ರೈತರಿಗೆ ಮಾರಕವಾಗಿವೆ. ಈಗ ಕಸ್ತೂರಿ ರಂಗನ್ ವರದಿಯಿಂದ ಹೋಬಳಿಯ 25 ಗ್ರಾಮಗಳ ಜನರು ಬೀದಿಗೆ ಬೀಳಲಿದ್ದಾರೆ. ಮಲೆನಾಡು ಭಾಗದಲ್ಲಿ ಕಾಫಿ ತೋಟ ಅಭಿವೃದ್ಧಿಪಡಿಸುವ ಬೆಳೆಗಾರರು ಪರೋಕ್ಷವಾಗಿ ಅರಣ್ಯ ಪ್ರದೇಶವನ್ನು ಹೆಚ್ಚಳಗೊಳಿಸುತ್ತಿದ್ದಾರೆ. ಆದರೆ, ರೈತರು, ಕೂಲಿಕಾರರು, ಆದಿವಾಸಿಗಳ ವಿರುದ್ಧದ ಕಾನೂನು ಜಾರಿ ಸರಿಯಲ್ಲ’ ಎಂದರು.