<p><strong>ಹಾಸನ:</strong> ಇತ್ತೀಚಿನ ಸಂಸತ್ ಅಧಿವೇಶನದ ವೇಳೆ ಅಂಗೀಕರಿಸಲಾದ ಎಲ್ಲ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಅಗ್ರಹಿಸಿ ಮುಸ್ಲಿಂ ವಿಮೆನ್ಸ್ ಯುನಿಟ್ ಜಿಲ್ಲಾ ಸಂಘಟನೆ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.</p>.<p>ಸಂಘಟನೆ ಸದಸ್ಯೆ ತಸ್ಮಾ ಫಿರ್ದೋಸ್ ಮಾತನಾಡಿ, ‘ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ ಕಾಯ್ದೆ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಸಂವಿಧಾನದ ವಿಧಿ 14, 25, 26 ಮತ್ತು 29 ರಂತೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದರು.</p>.<p>‘ಈ ಕಾಯ್ದೆ ಧರ್ಮದ ಮುಕ್ತ ಆಚರಣೆಯ ಹಕ್ಕಿಗೆ ಮತ್ತು ತಮ್ಮದೇ ಆದ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವುದರ ವಿರುದ್ಧವಾಗಿದೆ’ ಎಂದು ದೂರಿದರು. </p>.<p>‘ಕನಿಷ್ಠ 5 ವರ್ಷಗಳಿಂದ ಮುಸ್ಲಿಂ ಆಗಿಲ್ಲದಿದ್ದರೆ, ಮುಸ್ಲಿಂ ನಾಗರಿಕನು ತನ್ನ ಆಸ್ತಿಯನ್ನು ವಕ್ಫ್ಗೆ ದಾನ ಮಾಡುವ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ತಿದ್ದುಪಡಿಗಳು ಇತರ ಧಾರ್ಮಿಕ ಸಂಸ್ಥೆಗಳಿಗಿಂತ, ನಮ್ಮ ದತ್ತಿಗಳಿಗೆ ನೀಡಲಾದ ಹಕ್ಕುಗಳು ಮತ್ತು ರಕ್ಷಣೆ ಕಸಿದುಕೊಳ್ಳುವುದರಿಂದ ತಾರತಮ್ಯದಿಂದ ಕೂಡಿವೆ’ ಎಂದರು.</p>.<p>ವಕ್ಫ್ ಮಂಡಳಿಯ ಸದಸ್ಯರಾಗಲು ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಷರತ್ತು ತೆಗೆದುಹಾಕಲಾಗಿದೆ. ಈ ಬದಲಾವಣೆಗಳು ಮುಸ್ಲಿಮರು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸಲು, ನಡೆಸಲು ಮತ್ತು ನಿರ್ವಹಿಸಲು ವಂಚಿತರಾಗುವಂತೆ ಮಾಡುತ್ತಿವೆ. ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಎಲ್ಲ ವಿವಾದಾತ್ಮಕ ತಿದ್ದುಪಡಿ ರದ್ದುಗೊಳಿಸುವಂತೆ ಆಗ್ರಹಿಸಿದರು.</p>.<p>ಸಂಘಟನೆಯ ಸದಸ್ಯರಾದ ಅಫ್ಸರ್ ಸಯ್ಯದ್, ಫೈಸಿಯಾ ರೆಹಮಾನ್, ಜಹೀಲಾ ಇತರರು ಹಾಜರಿದ್ದರು.</p>.<div><blockquote>ಸರ್ಕಾರವು ವಕ್ಫ್ ಭೂಮಿಯನ್ನು ಅತಿಕ್ರಮಿಸಿದ್ದರೆ ಈಗ ಅವರು ಮಾಲೀಕರಾಗಬಹುದು. ವಿವಾದವನ್ನು ನಿರ್ಧರಿಸುವ ಅಧಿಕಾರವು ಗೊತ್ತುಪಡಿಸಿದ ಅಧಿಕಾರಿಯ ಪರವಾಗಿ ಹೋಗುತ್ತದೆ </blockquote><span class="attribution">ತಸ್ಮಾ ಫಿರ್ದೋಸ್ ಸಂಘಟನೆ ಸದಸ್ಯೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಇತ್ತೀಚಿನ ಸಂಸತ್ ಅಧಿವೇಶನದ ವೇಳೆ ಅಂಗೀಕರಿಸಲಾದ ಎಲ್ಲ ವಿವಾದಾತ್ಮಕ ತಿದ್ದುಪಡಿಗಳನ್ನು ರದ್ದುಗೊಳಿಸುವಂತೆ ಅಗ್ರಹಿಸಿ ಮುಸ್ಲಿಂ ವಿಮೆನ್ಸ್ ಯುನಿಟ್ ಜಿಲ್ಲಾ ಸಂಘಟನೆ ಸದಸ್ಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.</p>.<p>ಸಂಘಟನೆ ಸದಸ್ಯೆ ತಸ್ಮಾ ಫಿರ್ದೋಸ್ ಮಾತನಾಡಿ, ‘ಇತ್ತೀಚೆಗೆ ಅಂಗೀಕರಿಸಲಾದ ವಕ್ಫ್ ಕಾಯ್ದೆ ತಿದ್ದುಪಡಿಗಳು ತಾರತಮ್ಯದಿಂದ ಕೂಡಿದ್ದು, ಸಂವಿಧಾನದ ವಿಧಿ 14, 25, 26 ಮತ್ತು 29 ರಂತೆ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ’ ಎಂದರು.</p>.<p>‘ಈ ಕಾಯ್ದೆ ಧರ್ಮದ ಮುಕ್ತ ಆಚರಣೆಯ ಹಕ್ಕಿಗೆ ಮತ್ತು ತಮ್ಮದೇ ಆದ ಧಾರ್ಮಿಕ ಸಂಸ್ಥೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವುದರ ವಿರುದ್ಧವಾಗಿದೆ’ ಎಂದು ದೂರಿದರು. </p>.<p>‘ಕನಿಷ್ಠ 5 ವರ್ಷಗಳಿಂದ ಮುಸ್ಲಿಂ ಆಗಿಲ್ಲದಿದ್ದರೆ, ಮುಸ್ಲಿಂ ನಾಗರಿಕನು ತನ್ನ ಆಸ್ತಿಯನ್ನು ವಕ್ಫ್ಗೆ ದಾನ ಮಾಡುವ ಸ್ವಾತಂತ್ರ್ಯವನ್ನು ಇದು ಉಲ್ಲಂಘಿಸುತ್ತದೆ. ಈ ತಿದ್ದುಪಡಿಗಳು ಇತರ ಧಾರ್ಮಿಕ ಸಂಸ್ಥೆಗಳಿಗಿಂತ, ನಮ್ಮ ದತ್ತಿಗಳಿಗೆ ನೀಡಲಾದ ಹಕ್ಕುಗಳು ಮತ್ತು ರಕ್ಷಣೆ ಕಸಿದುಕೊಳ್ಳುವುದರಿಂದ ತಾರತಮ್ಯದಿಂದ ಕೂಡಿವೆ’ ಎಂದರು.</p>.<p>ವಕ್ಫ್ ಮಂಡಳಿಯ ಸದಸ್ಯರಾಗಲು ಮುಸ್ಲಿಮರಿಗೆ ಮಾತ್ರ ಅವಕಾಶ ಎಂಬ ಷರತ್ತು ತೆಗೆದುಹಾಕಲಾಗಿದೆ. ಈ ಬದಲಾವಣೆಗಳು ಮುಸ್ಲಿಮರು ತಮ್ಮದೇ ಆದ ಸಂಸ್ಥೆಗಳನ್ನು ಸ್ಥಾಪಿಸಲು, ನಡೆಸಲು ಮತ್ತು ನಿರ್ವಹಿಸಲು ವಂಚಿತರಾಗುವಂತೆ ಮಾಡುತ್ತಿವೆ. ಲೋಕಸಭೆ ಮತ್ತು ರಾಜ್ಯಸಭೆ ಅಂಗೀಕರಿಸಿದ ಎಲ್ಲ ವಿವಾದಾತ್ಮಕ ತಿದ್ದುಪಡಿ ರದ್ದುಗೊಳಿಸುವಂತೆ ಆಗ್ರಹಿಸಿದರು.</p>.<p>ಸಂಘಟನೆಯ ಸದಸ್ಯರಾದ ಅಫ್ಸರ್ ಸಯ್ಯದ್, ಫೈಸಿಯಾ ರೆಹಮಾನ್, ಜಹೀಲಾ ಇತರರು ಹಾಜರಿದ್ದರು.</p>.<div><blockquote>ಸರ್ಕಾರವು ವಕ್ಫ್ ಭೂಮಿಯನ್ನು ಅತಿಕ್ರಮಿಸಿದ್ದರೆ ಈಗ ಅವರು ಮಾಲೀಕರಾಗಬಹುದು. ವಿವಾದವನ್ನು ನಿರ್ಧರಿಸುವ ಅಧಿಕಾರವು ಗೊತ್ತುಪಡಿಸಿದ ಅಧಿಕಾರಿಯ ಪರವಾಗಿ ಹೋಗುತ್ತದೆ </blockquote><span class="attribution">ತಸ್ಮಾ ಫಿರ್ದೋಸ್ ಸಂಘಟನೆ ಸದಸ್ಯೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>