‘ವೃಷಭಾವತಿ ನದಿಯಿಲ್ಲ ಎಂದಿದ್ದ ಸರ್ಕಾರ’
‘ಬೆಂಗಳೂರು ಮಹಾನಗರದ ಚರಂಡಿ ಒಳಚರಂಡಿ ನೀರನ್ನು ಸಾಗಿಸುವ ಕೆಂಗೇರಿ ಮೋರಿ ಮೂಲ ವೃಷಭಾವತಿ ನದಿಯಾಗಿದೆ. ನದಿ ಸಂಪೂರ್ಣ ಕಲುಷಿತಗೊಂಡಿದೆ ಎಂದು ಕೋರ್ಟ್ನಲ್ಲಿ ದಾವೆ ಹೂಡಿದಾಗ ಸರ್ಕಾರ ಅಲ್ಲಿ ನದಿಯೇ ಇಲ್ಲ ಎಂದು ವಾದಿಸಿತ್ತು. ನಂತರ ನಾವು ದಾಖಲೆ ಸಮೇತ ವೃಷಭಾವತಿಯ ಮಾಹಿತಿ ನೀಡಿದಾಗ ಸರ್ಕಾರ ತಪ್ಪೊಪ್ಪಿಕೊಂಡಿತು’ ಎಂದು ನಿರ್ಮಲಾಗೌಡ ಹೇಳಿದರು. ‘ಮುಂದಿನ ಕೆಲವೇ ದಿನಗಳಲ್ಲಿ ಹಾಸನ ಜಿಲ್ಲೆಯ ಯಗಚಿ ನದಿ ಕೂಡ ಮತ್ತೊಂದು ಮೋರಿ ಆಗುವುದರಲ್ಲಿ ಯಾವುದೇ ಅನುಮಾನ ಬೇಡ. ಕಲುಷಿತ ನೀರಿನ ಸೇರ್ಪಡೆಯಿಂದ ಹೇಮಾವತಿ ಯಗಚಿ ಕಾವೇರಿ ಸೇರಿ ರಾಜ್ಯದ ಬಹುತೇಕ ನದಿಗಳು ಮೋರಿಗಳಾಗಿ ಪರಿವರ್ತನೆಯಾಗುತ್ತಿವೆ’ ಎಂದು ಕಳವಳ ವ್ಯಕ್ತಪಡಿಸಿದರು.