<p><strong>ಹಾಸನ</strong>: ಹಾಸನಾಂಬ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶುಕ್ರವಾರ ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದರು. </p>.<p>ದರ್ಶನ ಆರಂಭವಾಗಿ ವಾರ ಕಳೆದಿದ್ದು, ಈಗಾಗಲೇ 15 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶುಕ್ರವಾರ ಒಂದೇ ದಿನ 4 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನಕ್ಕೆ ಬಂದಿದ್ದರು.</p>.<p>₹1 ಸಾವಿರದ ಟಿಕೆಟ್ ಸಾಲು 2 ಕಿ.ಮೀ. ಇದ್ದರೆ, ₹ 300 ಟಿಕೆಟ್ ಸಾಲು 3 ಕಿ.ಮೀ. ದೂರದವರೆಗೂ ಇತ್ತು. ಟಿಕೆಟ್ ಪಡೆದವರು 3–4 ಗಂಟೆ ಕಾಯಬೇಕಿದ್ದು, ಸಾಮಾನ್ಯ ದರ್ಶನಕ್ಕಾಗಿ 6 ಗಂಟೆ ಕಾಯಬೇಕಿತ್ತು. ಟಿಕೆಟ್ ಖರೀದಿಗೂ ಮುಕ್ಕಾಲು ಗಂಟೆ ಸಾಲಿನಲ್ಲಿ ನಿಲ್ಲುವಂತಾಗಿತ್ತು.</p>.<p><strong>ದಿಕ್ಕು ತೋಚದ ಆಡಳಿತ</strong>: ಭಕ್ತರು ಹೆಚ್ಚುತ್ತಿರುವುದರಿಂದ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎನ್ನುವುದು ಆಡಳಿತಕ್ಕೆ ತಲೆನೋವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ನಗರದಲ್ಲಿಯೇ ವಾಸ್ತವ್ಯ ಹೂಡಿ, ಅಧಿಕಾರಿಗಳ ಜೊತೆಗೆ ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ.</p>.<p>‘ಶುಕ್ರವಾರ 3 ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದು, ದರ್ಶನಕ್ಕೆ ಕನಿಷ್ಠ 4 ಗಂಟೆ ತಗುಲುತ್ತಿದೆ. ಭಕ್ತರು ಇದನ್ನು ಅರಿತು ಯೋಜನೆ ರೂಪಿಸಬೇಕು’ ಎಂದು ಸಚಿವರು ಮನವಿ ಮಾಡಿದ್ದಾರೆ.</p>.<p>‘ಶಾಸ್ತ್ರದ ಪ್ರಕಾರ ಶನಿವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಬೇಕು. ಅದಕ್ಕಾಗಿ ಶನಿವಾರ ರಾತ್ರಿ 10 ಗಂಟೆಗೆ ದ್ವಾರ ಮುಚ್ಚಲಿದ್ದು, ಮಧ್ಯರಾತ್ರಿ 12 ಗಂಟೆಗೆ ದರ್ಶನ ಸ್ಥಗಿತಗೊಳ್ಳಲಿದೆ. ಭಾನುವಾರ ಬೆಳಿಗ್ಗೆ 6 ಗಂಟೆಗೆ ಮತ್ತೆ ಆರಂಭವಾಗಲಿದೆ. ಶನಿವಾರ ರಾತ್ರಿ ಬರುವುದನ್ನು ತಪ್ಪಿಸಿ. ಪ್ರತಿಯೊಬ್ಬರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಅಗತ್ಯ ಸಹಕಾರ ನೀಡಬೇಕು’ ಎಂದು ತಿಳಿಸಿದ್ದಾರೆ.</p>.<div><blockquote>ಹಾಸನಾಂಬೆ ಭಕ್ತರು ಹೆಚ್ಚಾಗುತ್ತಿದ್ದಾರೆ. ದರ್ಶನಕ್ಕೆ ಹೆಚ್ಚು ಹೊತ್ತು ಕಾಯಬೇಕಾಗುವುದರಿಂದ ಶಾಂತಚಿತ್ತರಾಗಿ ಸಜ್ಜಾಗಿ ಬನ್ನಿ</blockquote><span class="attribution">ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ ಹಾಸನ</span></div>.<div><blockquote>ಈಗ ಹೆಚ್ಚುವರಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸರದಿಯನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.</blockquote><span class="attribution">ಮೊಹಮ್ಮದ್ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<div><blockquote>ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಆದರೆ ಗರ್ಭಗುಡಿಯ ಬಳಿ ಮಹಿಳೆಯರೂ ವೃದ್ಧರು ಎನ್ನದೇ ಸಿಬ್ಬಂದಿ ಎಳೆದಾಡುತ್ತಾರೆ.</blockquote><span class="attribution"> ರಾಧಿಕಾ ಶೆಣೈ, ತುಮಕೂರಿನ ನಿವಾಸಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ</strong>: ಹಾಸನಾಂಬ ದರ್ಶನಕ್ಕೆ ಬರುತ್ತಿರುವ ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಶುಕ್ರವಾರ ನಿರೀಕ್ಷೆಗೂ ಮೀರಿ ಭಕ್ತರು ಬಂದಿದ್ದರು. </p>.<p>ದರ್ಶನ ಆರಂಭವಾಗಿ ವಾರ ಕಳೆದಿದ್ದು, ಈಗಾಗಲೇ 15 ಲಕ್ಷಕ್ಕೂ ಅಧಿಕ ಭಕ್ತರು ದೇವಿಯ ದರ್ಶನ ಪಡೆದಿದ್ದಾರೆ. ಶುಕ್ರವಾರ ಒಂದೇ ದಿನ 4 ಲಕ್ಷಕ್ಕೂ ಹೆಚ್ಚು ಭಕ್ತರು ದೇವಿಯ ದರ್ಶನಕ್ಕೆ ಬಂದಿದ್ದರು.</p>.<p>₹1 ಸಾವಿರದ ಟಿಕೆಟ್ ಸಾಲು 2 ಕಿ.ಮೀ. ಇದ್ದರೆ, ₹ 300 ಟಿಕೆಟ್ ಸಾಲು 3 ಕಿ.ಮೀ. ದೂರದವರೆಗೂ ಇತ್ತು. ಟಿಕೆಟ್ ಪಡೆದವರು 3–4 ಗಂಟೆ ಕಾಯಬೇಕಿದ್ದು, ಸಾಮಾನ್ಯ ದರ್ಶನಕ್ಕಾಗಿ 6 ಗಂಟೆ ಕಾಯಬೇಕಿತ್ತು. ಟಿಕೆಟ್ ಖರೀದಿಗೂ ಮುಕ್ಕಾಲು ಗಂಟೆ ಸಾಲಿನಲ್ಲಿ ನಿಲ್ಲುವಂತಾಗಿತ್ತು.</p>.<p><strong>ದಿಕ್ಕು ತೋಚದ ಆಡಳಿತ</strong>: ಭಕ್ತರು ಹೆಚ್ಚುತ್ತಿರುವುದರಿಂದ ಯಾವ ರೀತಿಯ ವ್ಯವಸ್ಥೆ ಮಾಡಬೇಕು ಎನ್ನುವುದು ಆಡಳಿತಕ್ಕೆ ತಲೆನೋವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ನಗರದಲ್ಲಿಯೇ ವಾಸ್ತವ್ಯ ಹೂಡಿ, ಅಧಿಕಾರಿಗಳ ಜೊತೆಗೆ ನಿರಂತರ ಸಮಾಲೋಚನೆ ನಡೆಸುತ್ತಿದ್ದಾರೆ.</p>.<p>‘ಶುಕ್ರವಾರ 3 ಲಕ್ಷಕ್ಕೂ ಅಧಿಕ ಭಕ್ತರು ಬಂದಿದ್ದು, ದರ್ಶನಕ್ಕೆ ಕನಿಷ್ಠ 4 ಗಂಟೆ ತಗುಲುತ್ತಿದೆ. ಭಕ್ತರು ಇದನ್ನು ಅರಿತು ಯೋಜನೆ ರೂಪಿಸಬೇಕು’ ಎಂದು ಸಚಿವರು ಮನವಿ ಮಾಡಿದ್ದಾರೆ.</p>.<p>‘ಶಾಸ್ತ್ರದ ಪ್ರಕಾರ ಶನಿವಾರ ರಾತ್ರಿ ವಿಶೇಷ ಪೂಜೆ ಸಲ್ಲಿಸಬೇಕು. ಅದಕ್ಕಾಗಿ ಶನಿವಾರ ರಾತ್ರಿ 10 ಗಂಟೆಗೆ ದ್ವಾರ ಮುಚ್ಚಲಿದ್ದು, ಮಧ್ಯರಾತ್ರಿ 12 ಗಂಟೆಗೆ ದರ್ಶನ ಸ್ಥಗಿತಗೊಳ್ಳಲಿದೆ. ಭಾನುವಾರ ಬೆಳಿಗ್ಗೆ 6 ಗಂಟೆಗೆ ಮತ್ತೆ ಆರಂಭವಾಗಲಿದೆ. ಶನಿವಾರ ರಾತ್ರಿ ಬರುವುದನ್ನು ತಪ್ಪಿಸಿ. ಪ್ರತಿಯೊಬ್ಬರಿಗೂ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರು ಅಗತ್ಯ ಸಹಕಾರ ನೀಡಬೇಕು’ ಎಂದು ತಿಳಿಸಿದ್ದಾರೆ.</p>.<div><blockquote>ಹಾಸನಾಂಬೆ ಭಕ್ತರು ಹೆಚ್ಚಾಗುತ್ತಿದ್ದಾರೆ. ದರ್ಶನಕ್ಕೆ ಹೆಚ್ಚು ಹೊತ್ತು ಕಾಯಬೇಕಾಗುವುದರಿಂದ ಶಾಂತಚಿತ್ತರಾಗಿ ಸಜ್ಜಾಗಿ ಬನ್ನಿ</blockquote><span class="attribution">ಕೆ.ಎಸ್. ಲತಾಕುಮಾರಿ ಜಿಲ್ಲಾಧಿಕಾರಿ ಹಾಸನ</span></div>.<div><blockquote>ಈಗ ಹೆಚ್ಚುವರಿ ಬ್ಯಾರಿಕೇಡ್ ಅಳವಡಿಸಲಾಗಿದೆ. ಸರದಿಯನ್ನು ನಿಯಂತ್ರಿಸಲು ಹೆಚ್ಚುವರಿ ಸಿಬ್ಬಂದಿಯನ್ನೂ ನಿಯೋಜಿಸಲಾಗಿದೆ.</blockquote><span class="attribution">ಮೊಹಮ್ಮದ್ ಸುಜೀತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ</span></div>.<div><blockquote>ಜಿಲ್ಲಾಡಳಿತ ಉತ್ತಮ ವ್ಯವಸ್ಥೆ ಮಾಡಿದೆ. ಆದರೆ ಗರ್ಭಗುಡಿಯ ಬಳಿ ಮಹಿಳೆಯರೂ ವೃದ್ಧರು ಎನ್ನದೇ ಸಿಬ್ಬಂದಿ ಎಳೆದಾಡುತ್ತಾರೆ.</blockquote><span class="attribution"> ರಾಧಿಕಾ ಶೆಣೈ, ತುಮಕೂರಿನ ನಿವಾಸಿ </span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>