<p><strong>ಹಾಸನ: </strong>ಹಳೇಬೀಡು ಸಮೀಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದೇವರಹಳ್ಳಿ ಗ್ರಾಮದ ಪುಷ್ಪಾ ಬಾಯಿ (40) ಎಂಬುವರ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿ ಸಾಯಿಸಿದೆ.</p>.<p>ಪತಿಯ ಜೊತೆಗೆ ಜಮೀನಿನಲ್ಲಿ ಕೆಲಸ ಮಾಡಲು ಹೋಗಿದ್ದಾಗ, ಪ್ರತ್ಯಕ್ಷವಾದ ಸಲಗ ಕಂಡು ಪುಷ್ಪಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಬೆನ್ನಟ್ಟಿದ ಗಜ, ಸೊಂಡಿಲಿನಿಂದ ಬೀಳಿಸಿ ನಂತರ ತುಳಿದು ಸಾಯಿಸಿದೆ.</p>.<p>ಮೃತ ಮಹಿಳೆ ಪತಿ ಠಾಕೂರ್ ಸಿಂಗ್, ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.</p>.<p>ಈ ದೃಶ್ಯಾವಳಿಯನ್ನು ಅನತಿ ದೂರದಲ್ಲಿದ್ದ ಪತಿ ಹಾಗೂ ಗ್ರಾಮದ ಕೆಲವರು ಕಣ್ಣಾರೆ ಕಂಡುಕಿರುಚಿಕೊಂಡಿದ್ದಾರೆ.</p>.<p>ಇದಕ್ಕೂ ಮುನ್ನ ಸಲಗ ಕೋಡಿಹಳ್ಳಿಯಲ್ಲಿ ರಂಗೇಗೌಡರ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ ಎರಡೂ ಹಸುವಿನ ಮೇಲೂ ದಾಳಿ ನಡೆಸಿ ತುಳಿದು ಸಾಯಿಸಿದೆ.</p>.<p>ಸಮೀಪದ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣೇಗೌಡರ ಮೇಲೂ ದಾಳಿ ನಡೆಸಲು ಯತ್ನಿಸಿದಾಗ, ಅವರು ಅಲ್ಲಿಂದ ಓಡಿ ಹೋಗಿದ್ದಾರೆ.</p>.<p>‘ಸಲಗನನ್ನು ಮರಳಿ ಚಿಕ್ಕಮಗಳೂರು ಕಡೆಗೆ ಓಡಿಸಲು ಪ್ರಯತ್ನ ಮಾಡಲಾಗುವುದು, ಇಲ್ಲವಾದರೆ ರೇಡಿಯೊ ಕಾಲರ್ ಅಳವಡಿಸಿ, ಬಯಲು ಸೀಮೆ ಭಾಗದಲ್ಲೂ ಓಡಾಡುವ ಆನೆಗಳ ಚಲನ-ವಲನ ಅಧ್ಯಯನ ಮಾಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಹಳೇಬೀಡು ಸಮೀಪ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ದೇವರಹಳ್ಳಿ ಗ್ರಾಮದ ಪುಷ್ಪಾ ಬಾಯಿ (40) ಎಂಬುವರ ಮೇಲೆ ಒಂಟಿ ಸಲಗ ಏಕಾಏಕಿ ದಾಳಿ ಮಾಡಿ ಸಾಯಿಸಿದೆ.</p>.<p>ಪತಿಯ ಜೊತೆಗೆ ಜಮೀನಿನಲ್ಲಿ ಕೆಲಸ ಮಾಡಲು ಹೋಗಿದ್ದಾಗ, ಪ್ರತ್ಯಕ್ಷವಾದ ಸಲಗ ಕಂಡು ಪುಷ್ಪಾ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ. ಆದರೆ, ಬೆನ್ನಟ್ಟಿದ ಗಜ, ಸೊಂಡಿಲಿನಿಂದ ಬೀಳಿಸಿ ನಂತರ ತುಳಿದು ಸಾಯಿಸಿದೆ.</p>.<p>ಮೃತ ಮಹಿಳೆ ಪತಿ ಠಾಕೂರ್ ಸಿಂಗ್, ಕೂದಲೆಳೆ ಅಂತರದಲ್ಲಿ ಸಾವಿನ ದವಡೆಯಿಂದ ಪಾರಾಗಿದ್ದಾರೆ.</p>.<p>ಈ ದೃಶ್ಯಾವಳಿಯನ್ನು ಅನತಿ ದೂರದಲ್ಲಿದ್ದ ಪತಿ ಹಾಗೂ ಗ್ರಾಮದ ಕೆಲವರು ಕಣ್ಣಾರೆ ಕಂಡುಕಿರುಚಿಕೊಂಡಿದ್ದಾರೆ.</p>.<p>ಇದಕ್ಕೂ ಮುನ್ನ ಸಲಗ ಕೋಡಿಹಳ್ಳಿಯಲ್ಲಿ ರಂಗೇಗೌಡರ ತೋಟದ ಮನೆಯಲ್ಲಿ ಕಟ್ಟಿಹಾಕಿದ್ದ ಎರಡೂ ಹಸುವಿನ ಮೇಲೂ ದಾಳಿ ನಡೆಸಿ ತುಳಿದು ಸಾಯಿಸಿದೆ.</p>.<p>ಸಮೀಪದ ಶುಂಠಿ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಕೃಷ್ಣೇಗೌಡರ ಮೇಲೂ ದಾಳಿ ನಡೆಸಲು ಯತ್ನಿಸಿದಾಗ, ಅವರು ಅಲ್ಲಿಂದ ಓಡಿ ಹೋಗಿದ್ದಾರೆ.</p>.<p>‘ಸಲಗನನ್ನು ಮರಳಿ ಚಿಕ್ಕಮಗಳೂರು ಕಡೆಗೆ ಓಡಿಸಲು ಪ್ರಯತ್ನ ಮಾಡಲಾಗುವುದು, ಇಲ್ಲವಾದರೆ ರೇಡಿಯೊ ಕಾಲರ್ ಅಳವಡಿಸಿ, ಬಯಲು ಸೀಮೆ ಭಾಗದಲ್ಲೂ ಓಡಾಡುವ ಆನೆಗಳ ಚಲನ-ವಲನ ಅಧ್ಯಯನ ಮಾಡಲಾಗುವುದು’ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಶಿವರಾಂ ಬಾಬು ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>