<p><strong>ಸಕಲೇಶಪುರ</strong>: ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಆಗಿದೆ.</p>.<p>ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ ಆನೆಯ ಗುಂಪು ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ತಾಲ್ಲೂಕಿನ ಕಾಫಿ, ಬಾಳೆ, ಅಡಿಕೆ ತೋಟಗಳಲ್ಲಿ ದಾಂದಲೆ ನಡೆಸಿವೆ.</p>.<p>ಕೆಸಗುಲಿ ಗ್ರಾಮದ ರೈತ ಮೈಕಲ್ ಪಿಂಟೋ, ಕೆಂಚೇಗೌಡ, ಉದೇವಾರ ಎಸ್ಟೇಟ್, ಕೆಸಗುಲಿ ಎಸ್ಟೇಟ್, ದರ್ಬಾರ್ ಪೇಟೆ ಗ್ರಾಮಗಳಲ್ಲಿಯೂ ಸಹ ಮರಿಯೂ ಸೇರಿದಂತೆ ಆರು ಆನೆಗಳು ಬೀಡು ಬಿಟ್ಟಿವೆ.</p>.<p>ಮೈಕಲ್ ಅವರ ತೋಟದಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಫಿ ಗಿಡಗಳು, 200ಕ್ಕೂ ಹೆಚ್ಚು ಬಾಳೆ ಗಿಡಗಳು, ತೋಟಕ್ಕೆ ನೀರು ಹಾಯಿಸುವ ಪೈಪ್ಗಳು ಹಾಗೂ ಡ್ರಮ್ಗಳನ್ನು ತುಳಿದು ನಾಶ ಮಾಡಿವೆ.</p>.<p>ಕೆಂಚೇಗೌಡರ ತೋಟದಲ್ಲಿ 150ಕ್ಕೂ ಹೆಚ್ಚು ಕಾಫಿ, ಬಾಳೆ ಹಾಗೂ ನೀರು ಹಾಯಿಸುವ ಪೈಪ್ಲೈನ್ ತುಳಿದು ಹಾನಿ ಮಾಡಿದ್ದು, ಕೆಸಗುಲಿ ಗ್ರಾಮದಲ್ಲಿ ಸುಮಾರು ₹ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿವೆ.</p>.<p class="Subhead">ಬಣಾಲು ಗ್ರಾಮದಲ್ಲೂ ದಾಂದಲೆ: ದೇವಾಲದಕೆರೆ ಸಮೀಪದ ಬಣಾಲು ಗ್ರಾಮದ ರೈತ ದಿನೇಶ್ ಅವರ ಕಾಫಿ ತೋಟಕ್ಕೆ ಮೂರು ಕಾಡಾನೆಗಳು ನುಗ್ಗಿ ಸುಮಾರು 50ಕ್ಕೂ ಹೆಚ್ಚು ಕಾಫಿ ಗಿಡಗಳು, ಕಾಳು ಮೆಣಸು ಬಳ್ಳಿಗಳು, ಬೈನೆ ಮರಗಳನ್ನು ನಾಶ ಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ</strong>: ತಾಲ್ಲೂಕಿನ ಕೆಸಗುಲಿ ಗ್ರಾಮದಲ್ಲಿ ಕಾಡಾನೆಗಳ ದಾಳಿಯಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಆಗಿದೆ.</p>.<p>ಬೇಲೂರು ತಾಲ್ಲೂಕಿನ ಲಕ್ಕುಂದ ಗ್ರಾಮದ ಕಾಫಿ ತೋಟವೊಂದರಲ್ಲಿ ವ್ಯಕ್ತಿಯೊಬ್ಬನನ್ನು ಕೊಂದು ಹಾಕಿದ ಆನೆಯ ಗುಂಪು ಭಾನುವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆವರೆಗೆ ತಾಲ್ಲೂಕಿನ ಕಾಫಿ, ಬಾಳೆ, ಅಡಿಕೆ ತೋಟಗಳಲ್ಲಿ ದಾಂದಲೆ ನಡೆಸಿವೆ.</p>.<p>ಕೆಸಗುಲಿ ಗ್ರಾಮದ ರೈತ ಮೈಕಲ್ ಪಿಂಟೋ, ಕೆಂಚೇಗೌಡ, ಉದೇವಾರ ಎಸ್ಟೇಟ್, ಕೆಸಗುಲಿ ಎಸ್ಟೇಟ್, ದರ್ಬಾರ್ ಪೇಟೆ ಗ್ರಾಮಗಳಲ್ಲಿಯೂ ಸಹ ಮರಿಯೂ ಸೇರಿದಂತೆ ಆರು ಆನೆಗಳು ಬೀಡು ಬಿಟ್ಟಿವೆ.</p>.<p>ಮೈಕಲ್ ಅವರ ತೋಟದಲ್ಲಿ ಸುಮಾರು 50ಕ್ಕೂ ಹೆಚ್ಚು ಕಾಫಿ ಗಿಡಗಳು, 200ಕ್ಕೂ ಹೆಚ್ಚು ಬಾಳೆ ಗಿಡಗಳು, ತೋಟಕ್ಕೆ ನೀರು ಹಾಯಿಸುವ ಪೈಪ್ಗಳು ಹಾಗೂ ಡ್ರಮ್ಗಳನ್ನು ತುಳಿದು ನಾಶ ಮಾಡಿವೆ.</p>.<p>ಕೆಂಚೇಗೌಡರ ತೋಟದಲ್ಲಿ 150ಕ್ಕೂ ಹೆಚ್ಚು ಕಾಫಿ, ಬಾಳೆ ಹಾಗೂ ನೀರು ಹಾಯಿಸುವ ಪೈಪ್ಲೈನ್ ತುಳಿದು ಹಾನಿ ಮಾಡಿದ್ದು, ಕೆಸಗುಲಿ ಗ್ರಾಮದಲ್ಲಿ ಸುಮಾರು ₹ 5 ಲಕ್ಷಕ್ಕೂ ಹೆಚ್ಚು ಮೌಲ್ಯದ ಬೆಳೆ ಹಾಗೂ ಆಸ್ತಿಪಾಸ್ತಿ ಹಾನಿ ಮಾಡಿವೆ.</p>.<p class="Subhead">ಬಣಾಲು ಗ್ರಾಮದಲ್ಲೂ ದಾಂದಲೆ: ದೇವಾಲದಕೆರೆ ಸಮೀಪದ ಬಣಾಲು ಗ್ರಾಮದ ರೈತ ದಿನೇಶ್ ಅವರ ಕಾಫಿ ತೋಟಕ್ಕೆ ಮೂರು ಕಾಡಾನೆಗಳು ನುಗ್ಗಿ ಸುಮಾರು 50ಕ್ಕೂ ಹೆಚ್ಚು ಕಾಫಿ ಗಿಡಗಳು, ಕಾಳು ಮೆಣಸು ಬಳ್ಳಿಗಳು, ಬೈನೆ ಮರಗಳನ್ನು ನಾಶ ಮಾಡಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>