<p><strong>ಸಕಲೇಶಪುರ:</strong> ಎತ್ತಿನಹೊಳೆ ಯೋಜನೆ ಚೆಕ್ ಡ್ಯಾಂ ಕಾಮಗಾರಿ ಮಾಡಿ, ತಾಲ್ಲೂಕಿನ ಕ್ಯಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಾಡುಗದ್ದೆ ಗ್ರಾಮದ ರಸ್ತೆಯನ್ನೇ ಸಂಪೂರ್ಣ ಹಾಳು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.</p>.<p>ಕ್ಯಾನಹಳ್ಳಿ–ನೂದರಹಳ್ಳಿ ರಸ್ತೆಯ ಮಂಚಳ್ಳಿ ಬಳಿಯಿಂದ ಕಾಡುಗದ್ದೆ ಗ್ರಾಮಕ್ಕೆ ಎರಡು ಕಿ.ಮೀ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಗ್ರಾಮದಲ್ಲಿ ಸುಮಾರು 10 ವಾಸದ ಮನೆಗಳಿದ್ದು, 2 ವರ್ಷಗಳ ಹಿಂದೆ ಈ ಮನೆಗಳಿಗೆ ಸಂಪರ್ಕ ಕಲ್ಪಿಸಲು ಹಾಗೂ ಎತ್ತಿನಹೊಳೆ ಪವರ್ ಹೌಸ್ ಸಂಪರ್ಕಕ್ಕೆ ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಮಾತ್ರ ಮಾಡಿಲ್ಲ ಎನ್ನುವುದು ಜನರ ದೂರು.</p>.<p>ಹಾಲಿ ಹಾಗೂ ಹಿಂದಿನ ಶಾಸಕರು ಈ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಮಾಡಿಲ್ಲ. ಗ್ರಾಮಸ್ಥರೇ ಸೇರಿಕೊಂಡು ಮಣ್ಣಿನ ರಸ್ತೆಯ ಗುಂಡಿ ಮುಚ್ಚುವುದು ಹಾಗೂ ಚರಂಡಿ ಸೋಸುವ ಕೆಲಸ ಮಾಡಿಕೊಂಡು ಹೇಗೋ ಓಡಾಡುತ್ತಿದ್ದಾರೆ.</p>.<p>5 ವರ್ಷಗಳಿಂದ ಎತ್ತಿನಹೊಳೆ ಚೆಕ್ ಡ್ಯಾಂ ನಿರ್ಮಾಣ ಪ್ರಾರಂಭವಾಗಿದ್ದು, ಇದೇ ಕಚ್ಚಾರಸ್ತೆಯಲ್ಲಿ ಭಾರಿ ಗಾತ್ರದ ಹಿಟಾಚಿ ಯಂತ್ರಗಳು, ಟಿಪ್ಪರ್ಗಳು ಓಡಾಡುತ್ತಾ ರಸ್ತೆಯನ್ನು ಕೆಸರು ಗದ್ದೆಯಂತೆ ಮಾಡಿವೆ. ವಾಹನಳು ಚಲಿಸುವುದಿರಲಿ, ನಡೆದಾಡುವುದಕ್ಕೂ ಸಾಧ್ಯವಾಗದ ಮಟ್ಟಿಗೆ ರಸ್ತೆ ಹಾಳಾಗಿದೆ ಎನ್ನುತ್ತಾರೆ ಜನ.</p>.<p>‘ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ, ನಮ್ಮೂರಿನಿಂದ ಬಯಲುಸೀಮೆಗೆ ನೀರು ಹರಿಸುತ್ತಿದ್ದೀರಿ. ಕೇವಲ ಒಂದು ಕೋಟಿ ಖರ್ಚು ಮಾಡಿ ನಮ್ಮೂರಿನ ರಸ್ತೆಯೊಂದನ್ನು ಕಾಂಕ್ರಿಟೀಕರಣ ಮಾಡಿಕೊಡಿ ಎಂದು 5 ವರ್ಷಗಳಿಂದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ, ಶಾಸಕರಿಗೆ, ಸಚಿವರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೂ ರಸ್ತೆಯ ಕಾಮಗಾರಿ ಮಾಡಿಲ್ಲ. ನಮ್ಮ ವಾಹನಗಳಲ್ಲಿ ಅಲ್ಲ, ನಡೆದುಕೊಂಡು ಹೋಗುವುದಕ್ಕೂ ಸಹ ಸಾಧ್ಯವಾಗದ ಮಟ್ಟಿಗೆ ರಸ್ತೆ ಹಾಳಾಗಿದೆ. ಕೂಡಲೇ ಈ ರಸ್ತೆ ನಿರ್ಮಾಣ ಮಾಡಿಕೊಡಿ’ ಎಂದು ಗ್ರಾಮಸ್ಥರ ಬಿ.ಎಲ್. ಕಾರ್ಯಪ್ಪ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸಕಲೇಶಪುರ:</strong> ಎತ್ತಿನಹೊಳೆ ಯೋಜನೆ ಚೆಕ್ ಡ್ಯಾಂ ಕಾಮಗಾರಿ ಮಾಡಿ, ತಾಲ್ಲೂಕಿನ ಕ್ಯಾನಹಳ್ಳಿ ಪಂಚಾಯಿತಿ ವ್ಯಾಪ್ತಿಯ ಕಾಡುಗದ್ದೆ ಗ್ರಾಮದ ರಸ್ತೆಯನ್ನೇ ಸಂಪೂರ್ಣ ಹಾಳು ಮಾಡಲಾಗಿದೆ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.</p>.<p>ಕ್ಯಾನಹಳ್ಳಿ–ನೂದರಹಳ್ಳಿ ರಸ್ತೆಯ ಮಂಚಳ್ಳಿ ಬಳಿಯಿಂದ ಕಾಡುಗದ್ದೆ ಗ್ರಾಮಕ್ಕೆ ಎರಡು ಕಿ.ಮೀ. ರಸ್ತೆ ಸಂಪೂರ್ಣ ಕೆಸರು ಗದ್ದೆಯಂತಾಗಿದೆ. ಗ್ರಾಮದಲ್ಲಿ ಸುಮಾರು 10 ವಾಸದ ಮನೆಗಳಿದ್ದು, 2 ವರ್ಷಗಳ ಹಿಂದೆ ಈ ಮನೆಗಳಿಗೆ ಸಂಪರ್ಕ ಕಲ್ಪಿಸಲು ಹಾಗೂ ಎತ್ತಿನಹೊಳೆ ಪವರ್ ಹೌಸ್ ಸಂಪರ್ಕಕ್ಕೆ ಕಿರು ಸೇತುವೆ ನಿರ್ಮಾಣ ಮಾಡಲಾಗಿದೆ. ಆದರೆ ರಸ್ತೆ ಮಾತ್ರ ಮಾಡಿಲ್ಲ ಎನ್ನುವುದು ಜನರ ದೂರು.</p>.<p>ಹಾಲಿ ಹಾಗೂ ಹಿಂದಿನ ಶಾಸಕರು ಈ ಗ್ರಾಮದ ರಸ್ತೆಯನ್ನು ಅಭಿವೃದ್ಧಿ ಮಾಡಿಲ್ಲ. ಗ್ರಾಮಸ್ಥರೇ ಸೇರಿಕೊಂಡು ಮಣ್ಣಿನ ರಸ್ತೆಯ ಗುಂಡಿ ಮುಚ್ಚುವುದು ಹಾಗೂ ಚರಂಡಿ ಸೋಸುವ ಕೆಲಸ ಮಾಡಿಕೊಂಡು ಹೇಗೋ ಓಡಾಡುತ್ತಿದ್ದಾರೆ.</p>.<p>5 ವರ್ಷಗಳಿಂದ ಎತ್ತಿನಹೊಳೆ ಚೆಕ್ ಡ್ಯಾಂ ನಿರ್ಮಾಣ ಪ್ರಾರಂಭವಾಗಿದ್ದು, ಇದೇ ಕಚ್ಚಾರಸ್ತೆಯಲ್ಲಿ ಭಾರಿ ಗಾತ್ರದ ಹಿಟಾಚಿ ಯಂತ್ರಗಳು, ಟಿಪ್ಪರ್ಗಳು ಓಡಾಡುತ್ತಾ ರಸ್ತೆಯನ್ನು ಕೆಸರು ಗದ್ದೆಯಂತೆ ಮಾಡಿವೆ. ವಾಹನಳು ಚಲಿಸುವುದಿರಲಿ, ನಡೆದಾಡುವುದಕ್ಕೂ ಸಾಧ್ಯವಾಗದ ಮಟ್ಟಿಗೆ ರಸ್ತೆ ಹಾಳಾಗಿದೆ ಎನ್ನುತ್ತಾರೆ ಜನ.</p>.<p>‘ಎತ್ತಿನಹೊಳೆ ಯೋಜನೆಗೆ ಸಾವಿರಾರು ಕೋಟಿ ರೂಪಾಯಿ ಖರ್ಚು ಮಾಡಿ, ನಮ್ಮೂರಿನಿಂದ ಬಯಲುಸೀಮೆಗೆ ನೀರು ಹರಿಸುತ್ತಿದ್ದೀರಿ. ಕೇವಲ ಒಂದು ಕೋಟಿ ಖರ್ಚು ಮಾಡಿ ನಮ್ಮೂರಿನ ರಸ್ತೆಯೊಂದನ್ನು ಕಾಂಕ್ರಿಟೀಕರಣ ಮಾಡಿಕೊಡಿ ಎಂದು 5 ವರ್ಷಗಳಿಂದ ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳಿಗೆ, ಶಾಸಕರಿಗೆ, ಸಚಿವರಿಗೆ ಮನವಿ ಸಲ್ಲಿಸುತ್ತಲೇ ಬಂದಿದ್ದೇವೆ. ಆದರೂ ರಸ್ತೆಯ ಕಾಮಗಾರಿ ಮಾಡಿಲ್ಲ. ನಮ್ಮ ವಾಹನಗಳಲ್ಲಿ ಅಲ್ಲ, ನಡೆದುಕೊಂಡು ಹೋಗುವುದಕ್ಕೂ ಸಹ ಸಾಧ್ಯವಾಗದ ಮಟ್ಟಿಗೆ ರಸ್ತೆ ಹಾಳಾಗಿದೆ. ಕೂಡಲೇ ಈ ರಸ್ತೆ ನಿರ್ಮಾಣ ಮಾಡಿಕೊಡಿ’ ಎಂದು ಗ್ರಾಮಸ್ಥರ ಬಿ.ಎಲ್. ಕಾರ್ಯಪ್ಪ ಒತ್ತಾಯಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>