ಕೆಲವರು ಇಂಥದೇ ಖಾತೆ ಬೇಕು ಅಂತ ಕೇಳುತ್ತಾರೆ. ಒಂದೇ ಖಾತೆ ಎಲ್ಲರಿಗೂ ಕೊಡಲು ಆಗುವುದೇ?. ಆಹಾರ
ಇಲಾಖೆಯಲ್ಲಿ ಕೆಲಸ ಮಾಡಿದಂತೆ ಅಬಕಾರಿ ಖಾತೆಯನ್ನು ಸಮರ್ಥವಾಗಿ ನಿಭಾಯಿಸುವೆ. ಸೋರಿಕೆ ತಡೆಗಟ್ಟಿ,ಸರ್ಕಾರಕ್ಕೆ ಆದಾಯ ತರಲಾಗುವುದು. ಬುಧವಾರ ಇಲಾಖೆ ಅಧಿಕಾರಿಗಳ ಸಭೆ ನಡೆಸಲಾಗುವುದು. ಅಧಿವೇಶನಬಳಿಕ ಪ್ರತಿ ವಲಯಕ್ಕೂ ಭೇಟಿ ನೀಡಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.