‘ಅರಸೀಕೆರೆ ನಗರದಲ್ಲಿರುವ ಅಂಚೆ ವಸ್ತು ಭಂಡಾರವನ್ನು ಬೆಂಗಳೂರಿಗೆ ವರ್ಗಾಯಿಸುತ್ತಿರುವುದು ಸೂಕ್ತವಲ್ಲ. ಭಾರತೀಯ ಅಂಚೆ ವಸ್ತು ಭಂಡಾರ ರಾಜ್ಯದಲ್ಲಿ ಹುಬ್ಬಳ್ಳಿ, ಅರಸೀಕೆರೆ ಮತ್ತು ಬೆಂಗಳೂರುಗಳಲ್ಲಿ 3 ವಿಭಾಗಗಳ ಶಾಖೆಯನ್ನು ಸ್ಥಾಪಿಸಿದ್ದು ಅರಸೀಕೆರೆ ಅಂಚೆ ವಸ್ತು ಭಂಡಾರದಿಂದ ರಾಜ್ಯದ ಮಂಗಳೂರು, ಉಡುಪಿ, ದಾವಣಗೆರೆ, ಮಂಡ್ಯ., ಮೈಸೂರು , ನಂಜನಗೂಡು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ದಕ್ಷಿಣ ಸೇರಿದಂತೆ ರಾಜ್ಯದ 14 ವಿಭಾಗಗಳಿಗೆ ಅಂಚೆ ಸೇವೆಯ ಜತೆಗೆ ಅಗತ್ಯವಿರುವ ಸರಕುಗಳನ್ನು ಅರಸೀಕೆರೆ ಅಂಚೆ ವಸ್ತು ಭಂಡಾರ ಸೇವಾ ಕೇಂದ್ರದಿಂದ ಸೇವೆ ಸಲ್ಲಿಸುತ್ತಿದೆ. ಈ ನಿಟ್ಟಿನಲ್ಲಿ ಯಾವುದೇ ಕಾರಣಕ್ಕೂ ಅರಸೀಕೆರೆ ಅಂಚೆ ವಸ್ತು ಭಂಡಾರ ಸೇವಾ ಕೇಂದ್ರವನ್ನು ಬೇರೆಡೆಗೆ ವರ್ಗಾಯಿಸದೇ ಅರಸೀಕೆರೆ ನಗರದಲ್ಲೇ ಉಳಿಯುವಂತೆ ಕ್ರಮ ಕೈಗೊಳ್ಳಬೇಕು’ ಎಂದು ಮನವಿ ಸಲ್ಲಿಸಿದರು.