ಹಾಸನ: ಜಿಲ್ಲೆಯಲ್ಲಿ ಧಾರಾಕಾರ ಮಳೆಯಿಂದ ಮೂರು ಮನೆಗಳು ಕುಸಿದು ಬಿದ್ದಿವೆ.
ಸಕಲೇಶಪುರ ತಾಲ್ಲೂಕಿನ ನಾಗರ ಗ್ರಾಮದಲ್ಲಿ ಗಾಳಿ , ಮಳೆಯಿಂದ ವಿದ್ಯುತ್ ತಂತಿ ಬಿದ್ದು ನಾಲ್ಕು ಹಸುಗಳು ಸಾವನ್ನಪ್ಪಿವೆ. ಹೇಮಾವತಿ ಜಲಾಶಯದ ಒಳ ಹರಿವು 20 ಸಾವಿರ ಕ್ಯುಸೆಕ್ ಗೆ ಏರಿಕೆಯಾಗಿದೆ. ವಾಟೆಹೊಳೆ ಜಲಾಶಯ ಭರ್ತಿಯಾಗಿದೆ.
ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಸಕಲೇಶಪುರ, ಆಲೂರು ತಾಲ್ಲೂಕಿನ ಕಾಫಿ, ಅಡಿಕೆ ತೋಟ, ಭತ್ತ ದ ಗದ್ದೆ ಜಲಾವೃತಗೊಂಡಿದೆ.