ಶ್ರವಣಬೆಳಗೊಳ: ಚಂದ್ರಗಿರಿಯ ಚಿಕ್ಕಬೆಟ್ಟದಲ್ಲಿರುವ ಅಂತರಾಳ ಪಾರ್ಶ್ವನಾಥ ಸ್ವಾಮಿಗೆ ಪುಷ್ಯ ಮಾಸದ ಶುದ್ಧ ಬಹುಳ ಪಂಚಮಿ ಪ್ರಯುಕ್ತ ಧಾರ್ಮಿಕ ವಿಧಿವಿಧಾನಗಳು ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ ನೇತೃತ್ವದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿದವು.
16 ಅಡಿ ಎತ್ತರದ 7 ಹೆಡೆಯ ಸರ್ಪದ ಸುಂದರ ಅಂತರಾಳ ಪಾರ್ಶ್ವನಾಥ ಸ್ವಾಮಿಯ ಸನ್ನಿಧಿಯಲ್ಲಿ ಮಂಗಳ ಕಲಶ ಸ್ಥಾಪಿಸಲಾಗಿತ್ತು. ನಂತರ ಜಲ, ಬೆಣ್ಣೆ, ಕ್ಷೀರ, ಅರಿಸಿನಗಳಿಂದ ಮಹಾಭಿಷೇಕ ನಡೆಸಿ ಪುಷ್ಪವೃಷ್ಟಿ ಮಾಡಲಾಯಿತು.
ಶಾಂತಿಧಾರದೊಂದಿಗೆ ವಿವಿಧ ನೈವೇದ್ಯಗಳನ್ನು ಅರ್ಪಿಸಿ ಅಷ್ಟವಿಧಾರ್ಚನೆಯೊಂದಿಗೆ ಮಹಾಮಂಗಳಾರತಿ ಮಾಡಲಾಯಿತು.