ರೈತರು ಹಳ್ಳಿಕಾರ ತಳಿಯ ಎತ್ತಗಳನ್ನು ಸಾಕಿ, ಜಾತ್ರೆಯಲ್ಲಿ ಪ್ರದರ್ಶನ ಮಾಡುತ್ತಾರೆ. ತಾಲ್ಲೂಕು ಆಡಳಿತದಿಂದ ಉತ್ತಮ ರಾಸುಗಳನ್ನು ಆಯ್ಕೆ ಮಾಡಿ, ಬಹುಮಾನ ನೀಡುವ ಪದ್ಧತಿ ಇದುವರೆಗೆ ಇತ್ತು. ಆದರೆ ₹1 ಲಕ್ಷದಿಂದ ₹10 ಲಕ್ಷ ಬೆಲೆಯ ರಾಸುಗಳನ್ನು ಸಾಕಿ, ಜಾತ್ರೆಯಲ್ಲಿ ಪ್ರದರ್ಶನ ಮಾಡುತ್ತೇವೆ, ಆದರೆ ₹1 ಸಾವಿರ, ₹2 ಸಾವಿರ ಬೆಲೆ ವಸ್ತುಗಳನ್ನು ಬಹುಮಾನವಾಗಿ ನೀಡುತ್ತಾರೆ ಎಂದು ರೈತರು ಅಸಮಾಧನಗೊಂಡು, ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ.