ಸಂಪ್ರದಾಯದಂತೆ ಅಶ್ವಯುಜ ಮಾಸದ ಪೂರ್ಣಿಮೆಯ ನಂತರ ಮೊದಲ ಗುರುವಾರ ಬಾಗಿಲು ತೆರೆಯುವಮೂಲಕ ವರ್ಷಕ್ಕೆ ಒಂದು ಬಾರಿ ದರ್ಶನ ಭಾಗ್ಯ ಕರುಣಿಸುವ ಹಾಸನಾಂಬ ಜಾತ್ರಾ ಮಹೋತ್ಸವ ಮೇಲೂ ಕೊರೊನಾ ಕರಿನೆರಳು ಬೀರಿದೆ. ಹಲವು ದಶಕಗಳ ಬಳಿಕ ಐತಿಹಾಸಿಕ ಹಾಸನಾಂಬ ಉತ್ಸವ ಪೂಜೆ, ನೈವೇದ್ಯ, ಮಹಾಮಂಗಳಾರತಿ ಒಳಗೊಂಡಂತೆ ಎಲ್ಲಾ ಆಚರಣೆ ದೇವಾಲಯದ ಒಳಕ್ಕೇ ಸೀಮಿತಗೊಳ್ಳಲಿದೆ.