ಇಲ್ಲಿಯ ಮಿನಿ ವಿಧಾನಸೌಧದಲ್ಲಿ ಮಂಗಳವಾರ ಅತಿವೃಷ್ಟಿ ಸಂಬಂಧ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಹಾಸನದಿಂದ ಸಕಲೇಶಪುರಕ್ಕೆ30 ನಿಮಿಷದಲ್ಲಿ ಪ್ರಯಾಣ ಮಾಡಬಹುದು. ಆದರೆ, ರಸ್ತೆ ಸರಿಯಿಲ್ಲದೆ 2 ಗಂಟೆ ಬೇಕಾಗಿದೆ. ಇನ್ನು ಸಕಲೇಶಪುರದಿಂದ ಮಾರನಹಳ್ಳಿವರೆಗೆ ರಸ್ತೆಯೇ ಕಾಣಿಸದಷ್ಟು ಗುಂಡಿಗಳಿವೆ. ಗರ್ಭಿಣಿಯರಂತೂ ಈ ರಸ್ತೆಯಲ್ಲಿ ಪ್ರಯಾಣ ಮಾಡುವುದಕ್ಕೆ ಸಾಧ್ಯವೇ ಇಲ್ಲ. ನಿತ್ಯ ಹತ್ತಾರು ವಾಹನಗಳು ಕೆಟ್ಟು ನಿಲ್ಲುತ್ತವೆ. ಮಳೆ ನೀರು ರಸ್ತೆಯಲ್ಲಿ ಕಳ್ಳದಂತೆ ಹರಿಯುತ್ತದೆ. ಹೇಗೆ ದುರಸ್ತಿ ಮಾಡುತ್ತಾರೋ ಗೊತ್ತಿಲ್ಲ, ಒಂದು ವಾರದೊಳಗೆ ಗುಂಡಿಮುಕ್ತ ಹಾಗೂ ರಸ್ತೆಯಲ್ಲಿ ನೀರು ಹರಿಯದಂತೆ ಕ್ರಮ ಕೈಗೊಳ್ಳಿ’ ಎಂದು ಎಚ್ಚರಿಕೆ ನೀಡಿದರು.