ಸೋಮವಾರ, 14 ಜುಲೈ 2025
×
ADVERTISEMENT
ADVERTISEMENT

ಮಾನವ–ಆನೆ ಸಂಘರ್ಷ | ಕಾರ್ಯಪಡೆ, ಬ್ಯಾರಿಕೇಡ್‌ ಹೊರತು ಅನ್ಯ ಪರಿಹಾರವಿಲ್ಲ: ಕೇಂದ್ರ

Published : 11 ಆಗಸ್ಟ್ 2023, 7:47 IST
Last Updated : 11 ಆಗಸ್ಟ್ 2023, 7:47 IST
ಫಾಲೋ ಮಾಡಿ
Comments
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿತು
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿತು
2001–02 ರಿಂದ ಇಲ್ಲಿಯವರೆಗೆ 47 ಕಾಡಾನೆಗಳ ಸ್ಥಳಾಂತರ ನಾಲ್ಕು ಕಾಡಾನೆಗಳಿಗೆ ರೆಡಿಯೊ ಕಾಲರ್‌ ಅಳವಡಿಕೆ ಆನೆ ಕಾರ್ಯಪಡೆ ಮೂಲಕ ಚಲನವಲನದ ಮೇಲೆ ನಿಗಾ
‘ಆನೆ ಸ್ಥಳಾಂತರಕ್ಕೆ ಪ್ರಸ್ತಾವ ಸಲ್ಲಿಸಿ’
ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ನಿಯೋಗವು ಗುರುವಾರ ಉಪ ಅರಣ್ಯ ಸಂರಕ್ಷಣಾಧಿಕಾರಿಯನ್ನು ಭೇಟಿ ಮಾಡಿ ಮಲೆನಾಡಿನ ಭಾಗದಲ್ಲಿನ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸುವಲ್ಲಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದೆ. ಈ ಭಾಗದಲ್ಲಿ ಕಾಡೆಮ್ಮೆ ಕಾಡುಕೋಣಗಳ ಹಾವಳಿಯೂ ಹೆಚ್ಚಾಗಿದ್ದು ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು. ಜೊತೆಗೆ ಸೋಲಾರ್ ಬೇಲಿ ನಿರ್ಮಾಣಕ್ಕೆ ಹೆಚ್ಚಿನ ಸಹಾಯಧನ ನೀಡುವಂತೆ ಬೇಡಿಕೆ ಸಲ್ಲಿಸಲಾಯಿತು. ಹಾಸನ ಜಿಲ್ಲೆಯ ಆಲೂರು ಬೇಲೂರು ಸಕಲೇಶಪುರ ಮತ್ತು ಅರಕಲಗೂಡು ತಾಲ್ಲೂಕಿನ ಕಾಫಿ ಬೆಳೆಗಾರರಿಗೂ ಸೋಲಾರ್ ಬೇಲಿ ನಿರ್ಮಾಣಕ್ಕೆ ಸಹಾಯಧನ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯಂತೆ ಕಾಡಾನೆ ಬೆಳೆ ನಷ್ಟಕ್ಕೆ ಕಾಡಾನೆ ಬೆಳೆ ನಷ್ಟ ಪರಿಹಾರ ವಿಮೆಯನ್ನು ಜಾರಿಗೆ ತರುವಂತೆ ಬೇಡಿಕೆ ಸಲ್ಲಿಸಲಾಯಿತು. ಹಾಸನ ಜಿಲ್ಲಾ ಪ್ಲಾಂಟರ್ಸ್ ಸಂಘದ ಅಧ್ಯಕ್ಷ ಕೆ.ಎನ್. ಸುಬ್ರಹ್ಮಣ್ಯ ಪದಾಧಿಕಾರಿಗಳಾದ ಎಂ.ಬಿ. ರಾಜೀವ್ ಎಂ.ಎಸ್. ಚಂದ್ರಶೇಖರ್ ಕೆ.ಪಿ. ಕೃಷ್ಣೇಗೌಡ ಎನ್.ಈ. ಸೋಮಶೇಖರ್ ಎಚ್.ಎಂ. ರಮೇಶ್ ಕಸಬಾ ಹೋಬಳಿ ಬೆಳಗಾರರ ಸಂಘದ ಅಧ್ಯಕ್ಷ ಆರ್.ಎಂ. ಚಂದ್ರಶೇಖರ್ ಪದಾಧಿಕಾರಿಗಳಾದ ಬಿ.ಎಂ. ಮದನ್ ಕುಮಾರ್ ಕೆ.ವಿ ಮೇಘರಾಜ್ ವಿಲ್ಫಿ ಡಿಸೋಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT