<p><strong>ಹಿರೀಸಾವೆ</strong>: ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆದ ಎಲ್ಲರಿಗೂ ಉದ್ಯೋಗ ಸಿಗುವುದು ಕಷ್ಟ, ಜೀವನ ನಡೆಸಲು, ವ್ಯಾಪಾರ ಸೇರಿದಂತೆ ಇತರೆ ಉದ್ಯಮಗಳನ್ನು ಅವಲಿಂಬಿಸಬೇಕಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಮಧು ಶನಿವಾರ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.</p>.<p>ಮುಖಂಡ ರವಿಕುಮಾರ್ ಮಾತನಾಡಿ, ಎಷ್ಟೇ ಆದಾಯ ಬಂದರು ಲೆಕ್ಕಾಚಾರದ ಜೀವನ ನಡೆಸುವುದು ಬಹಳ ಮುಖ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್ ಮಾತನಾಡಿ, ಮೊದಲು ಸಂತೆಗೆ ಹೋಗುವಾಗ ಕೈ ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದೆವು, ಆದರೆ ಈಗ ಪ್ಲಾಸ್ಟಿಕ್ ಕವರ್, ಬ್ಯಾಗ್ ಬಳಕೆಯಾಗುತ್ತಿದ್ದೆ. ಇದಕ್ಕೆ ಕಡಿವಾಣ ಹಾಕಿ, ಕೈ ಚೀಲ ಬಳಕೆ ಮಾಡಿ ಎಂದರು.</p>.<p>ಪಿಎಸಿಸಿಬಿ ಅಧ್ಯಕ್ಷ ಮಹೇಶ ತಮ್ಮ ಜನ್ಮದಿನಾಚರಣೆ ಪ್ರಯುಕ್ತ ಐದು ಗ್ರೀನ್ ಬೋರ್ಡ್ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಮುಖಂಡ ವೆಂಕಟೇಶ್, ಶಾಲೆಯ ಶಿಕ್ಷಕ ಹಿರಿಯಣ್ಣಗೌಡ ಮಾತನಾಡಿದರು. ಶಾಲೆಯ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ತರಕಾರಿ, ತಿಂಡಿ, ಗೃಹಬಳಕೆಯ ಪರಿಕರಗಳುನ್ನು ವ್ಯಾಪಾರ ಮಾಡಿದರು, ಶಿಕ್ಷಕರು ಮಕ್ಕಳ ಸಂತೆಯ ನೇತೃತ್ವ ವಹಿಸಿದ್ದರು.</p>
<p><strong>ಹಿರೀಸಾವೆ</strong>: ಮುಂದಿನ ದಿನಗಳಲ್ಲಿ ಶಿಕ್ಷಣ ಪಡೆದ ಎಲ್ಲರಿಗೂ ಉದ್ಯೋಗ ಸಿಗುವುದು ಕಷ್ಟ, ಜೀವನ ನಡೆಸಲು, ವ್ಯಾಪಾರ ಸೇರಿದಂತೆ ಇತರೆ ಉದ್ಯಮಗಳನ್ನು ಅವಲಿಂಬಿಸಬೇಕಿದೆ ಎಂದು ಎಸ್ಡಿಎಂಸಿ ಅಧ್ಯಕ್ಷ ಮಧು ಶನಿವಾರ ಹೇಳಿದರು.</p>.<p>ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಏರ್ಪಡಿಸಿದ್ದ ಮಕ್ಕಳ ಸಂತೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಮಕ್ಕಳಲ್ಲಿ ಸಣ್ಣ ವಯಸ್ಸಿನಲ್ಲಿ ವ್ಯವಹಾರ ಜ್ಞಾನವನ್ನು ಬೆಳೆಸವ ಉದ್ದೇಶದಿಂದ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.</p>.<p>ಮುಖಂಡ ರವಿಕುಮಾರ್ ಮಾತನಾಡಿ, ಎಷ್ಟೇ ಆದಾಯ ಬಂದರು ಲೆಕ್ಕಾಚಾರದ ಜೀವನ ನಡೆಸುವುದು ಬಹಳ ಮುಖ್ಯ ಎಂದರು. ಕನ್ನಡ ಸಾಹಿತ್ಯ ಪರಿಷತ್ ಹೋಬಳಿ ಘಟಕದ ಅಧ್ಯಕ್ಷ ಪ್ರಮೋದ್ ಮಾತನಾಡಿ, ಮೊದಲು ಸಂತೆಗೆ ಹೋಗುವಾಗ ಕೈ ಚೀಲವನ್ನು ತೆಗೆದುಕೊಂಡು ಹೋಗುತ್ತಿದ್ದೆವು, ಆದರೆ ಈಗ ಪ್ಲಾಸ್ಟಿಕ್ ಕವರ್, ಬ್ಯಾಗ್ ಬಳಕೆಯಾಗುತ್ತಿದ್ದೆ. ಇದಕ್ಕೆ ಕಡಿವಾಣ ಹಾಕಿ, ಕೈ ಚೀಲ ಬಳಕೆ ಮಾಡಿ ಎಂದರು.</p>.<p>ಪಿಎಸಿಸಿಬಿ ಅಧ್ಯಕ್ಷ ಮಹೇಶ ತಮ್ಮ ಜನ್ಮದಿನಾಚರಣೆ ಪ್ರಯುಕ್ತ ಐದು ಗ್ರೀನ್ ಬೋರ್ಡ್ಗಳನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಪರಮೇಶ್, ಮುಖಂಡ ವೆಂಕಟೇಶ್, ಶಾಲೆಯ ಶಿಕ್ಷಕ ಹಿರಿಯಣ್ಣಗೌಡ ಮಾತನಾಡಿದರು. ಶಾಲೆಯ ಮಕ್ಕಳು ಪೋಷಕರ ಮಾರ್ಗದರ್ಶನದಲ್ಲಿ ತರಕಾರಿ, ತಿಂಡಿ, ಗೃಹಬಳಕೆಯ ಪರಿಕರಗಳುನ್ನು ವ್ಯಾಪಾರ ಮಾಡಿದರು, ಶಿಕ್ಷಕರು ಮಕ್ಕಳ ಸಂತೆಯ ನೇತೃತ್ವ ವಹಿಸಿದ್ದರು.</p>