<p><strong>ಹೊಳೆನರಸೀಪುರ: </strong>ತಾಲ್ಲೂಕಿನಲ್ಲಿ ದಿನೇ ದಿನೇ ಮಳೆ ಹೆಚ್ಚಾಗಿದ್ದು ಜಮೀನಿನಲ್ಲಿ ತರಕಾರಿ ಕೊಳೆಯುತ್ತಿರುವುದರಿಂದ ಮಾರುಕಟ್ಟೆ ಸರಬರಾಜಿನಲ್ಲಿ ತೀವ್ರ ಕುಸಿತ ಕಂಡಿದ್ದು ತರಕಾರಿ ಹಾಗೂ ಹೂವಿನ ಬೆಲೆ ಗಗನಕ್ಕೇರಿದೆ.</p>.<p>ಇಲ್ಲಿಯವರೆಗೂ ₹ 40ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ನುಗ್ಗೇಕಾಯಿ, ₹ 160ಕ್ಕೆ ಏರಿದ್ದರೆ, ₹ 20ಕ್ಕೆ ಕೆ.ಜಿ. ಮಾರಾಟ ಆಗುತ್ತಿದ್ದ ಟೊಮೆಟೊ ₹ 80ಕ್ಕೆ ಏರಿದೆ. ಅತಿ ಕಡಿಮೆಗೆ ಅಂದರೆ ₹ 20 ರಿಂದ ₹ 30ಕ್ಕೆ ಕೆ.ಜಿ ಮಾರಾಟವಾಗುತ್ತಿದ್ದ ದಪ್ಪಮೆಣಸಿನಕಾಯಿ ₹ 150ಕ್ಕೆ ಏರಿದೆ.</p>.<p>₹ 20ಕ್ಕೆ ಒಂದು ಮಾರಾಟ ಆಗುತ್ತಿದ್ದ ಹೂಕೋಸಿನ ಬೆಲೆಯೂ ₹ 50 ಆಗಿದೆ. ₹ 20ಕ್ಕೆ ಕೆ.ಜಿ ಇದ್ದ ಈರುಳ್ಳಿ ₹ 50ಕ್ಕೆ ಏರಿದೆ. ಇದೇ ರೀತಿ ಸೊಪ್ಪಿನ ಬೆಲೆಯೂ ಬಹಳ ಹೆಚ್ಚಾಗಿದ್ದು ₹ 2, 3ಕ್ಕೆ ಮಾರಾಟವಾಗುತ್ತಿದ್ದವು ₹ 10 ಆಗಿದೆ. ಮೆಂತೆ ಸೊಪ್ಪು ₹ 15ಕ್ಕೆ ಒಂದು ಕಟ್ಟು ಆಗಿದೆ. ₹ 40ರಿಂದ 50ಕ್ಕೆ ಮಾರು ಮಾರಾಟ ಆಗುತ್ತಿದ್ದ ಕನಕಾಂಬರ ಹಾಗೂ ಮಲ್ಲಿಗೆ ಹೂವು ₹ 200 ಆಗಿದೆ. ಹೂವಿನ ಬೆಲೆ ಹೆಚ್ಚಾಗಲು ಮಳೆ ಮೂಲ ಕಾರಣವಾಗಿದೆ. ಆದರೆ, ಬೆಳಗಾದರೆ ತುಳಸಿ ವಿವಾಹ ಇರುವುದರಿಂದ ನಾಳೆ ಹೂವಿನ ಬೆಲೆ ಎಷ್ಟಾಗುವುದೋ ಆ ದೇವರೇ ಬಲ್ಲ ಎನ್ನುವಂತಾಗಿದೆ.</p>.<p>ಮಳೆಯಿಂದಾಗಿ ಒಂದೆಡೆ ತರಕಾರಿ, ಹೂವು ಬಾರದಿರುವುದರಿಂದ ತುಟ್ಟಿಯಾಗಿದ್ದರೆ, ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವದರಿಂದ ವ್ಯಾಪಾರಸ್ಥರು ಲಾಭವೂ ಕಡಿಮೆಯಾಗಿ, ಖರೀದಿಸಿದ ಮಾಲು ಖರ್ಚಾದರೆ ಸಾಕು ಎನ್ನುತ್ತಿದ್ದಾರೆ.</p>.<p>ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ತರಕಾರಿ ಬಾರದ ಕಾರಣ ಬರುವ ತರಕಾರಿಗೆ ಬೆಲೆ ತೀವ್ರವಾಗಿ ಹೆಚ್ಚಾಗಿದೆ ಎನ್ನುತ್ತಾರೆ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಅವ್ವಯ್ಯಕ್ಕ, ಅಶೋಕ, ಸ್ವಾಮಿ.</p>.<p>‘ನಾವು ಹಾಸ್ಟೆಲ್ಗಳಿಗೆ ₹ 100ಕ್ಕೆ 3 ಕೆ.ಜಿ. ವಿವಿಧ ಬಗೆಯ ತರಕಾರಿ ಕೊಳ್ಳುತ್ತಿದ್ದೆವು. ಈಗ ಸಾಧ್ಯ ಆಗುತ್ತಿಲ್ಲ. ತರಕಾರಿ ಬೆಲೆ ಇಷ್ಟಾದರೆ ಸರ್ಕಾರ ನೀಡುವ ದರಕ್ಕೆ ತರಕಾರಿ ತೆಗೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಆದ್ದರಿಂದ 3 ಕೆ.ಜಿ. ತರಕಾರಿ ಬಳಸುವ ಜಾಗದಲ್ಲಿ 1 ಕೆ.ಜಿ ತರಕಾರಿ ಬಳಸಿ ಅಡುಗೆ ಮಾಡಿ ಬಡಸಬೇಕಾದ ಅನಿವಾರ್ಯತೆ ಇದೆ’ ಎಂದು ಸರ್ಕಾರಿ ಹಾಸ್ಟೆಲ್ನ ಅಡುಗೆಯವರು ಸಮಸ್ಯೆ ಹೇಳಿದರು.</p>.<p>ಇನ್ನು ಹೋಟೆಲ್ಗಳ ಇಡ್ಲಿ ಸಾಂಬಾರ್, ಅನ್ನ ಸಾಂಬಾರ್ನಲ್ಲಿ ಬೇರೆ ತರಕಾರಿ ಕಾಣದಾಗಿದೆ. ಆಲೂಗೆಡ್ಡೆ, ಬದನೆಕಾಯಿ, ಬೀನ್ಸ್ 1 ಕೆಜಿಗೆ ₹ 40ರ ಆಸುಪಾಸಿನಲ್ಲಿದ್ದು ಎಲ್ಲ ಹೋಟೆಲ್ಗಳಲ್ಲಿ ಈ ತರಕಾರಿಗಳು ಮಾತ್ರ ಹೆಚ್ಚಾಗಿ ಬಳಕೆ ಆಗುತ್ತಿದೆ.</p>.<p>ಇದುವರೆಗೂ ಬಳಸಿದ ನ್ಯೂಸ್ ಪೇಪರ್ 1 ಕೆ.ಜಿಗೆ ₹ 12 ರಿಂದ ₹ 13 ಕ್ಕೆ ಮಾರಾಟವಾಗುತ್ತಿದ್ದು ಈಗ ಕೆಲವು ದಿನಗಳಿಂದ ₹ 28ರಿಂದ ₹ 30ಕ್ಕೆ ಮಾರಾಟವಾಗುತ್ತಿದ್ದು ದಿನಪತ್ರಿಕೆಗಳನ್ನು ಕೊಂಡು ಓದುವವರಿಗೆ ಓದಿದ ನಂತರವೂ ಉತ್ತಮ ಬೆಲೆ ಸಿಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಳೆನರಸೀಪುರ: </strong>ತಾಲ್ಲೂಕಿನಲ್ಲಿ ದಿನೇ ದಿನೇ ಮಳೆ ಹೆಚ್ಚಾಗಿದ್ದು ಜಮೀನಿನಲ್ಲಿ ತರಕಾರಿ ಕೊಳೆಯುತ್ತಿರುವುದರಿಂದ ಮಾರುಕಟ್ಟೆ ಸರಬರಾಜಿನಲ್ಲಿ ತೀವ್ರ ಕುಸಿತ ಕಂಡಿದ್ದು ತರಕಾರಿ ಹಾಗೂ ಹೂವಿನ ಬೆಲೆ ಗಗನಕ್ಕೇರಿದೆ.</p>.<p>ಇಲ್ಲಿಯವರೆಗೂ ₹ 40ಕ್ಕೆ ಮಾರಾಟವಾಗುತ್ತಿದ್ದ ಕೆ.ಜಿ ನುಗ್ಗೇಕಾಯಿ, ₹ 160ಕ್ಕೆ ಏರಿದ್ದರೆ, ₹ 20ಕ್ಕೆ ಕೆ.ಜಿ. ಮಾರಾಟ ಆಗುತ್ತಿದ್ದ ಟೊಮೆಟೊ ₹ 80ಕ್ಕೆ ಏರಿದೆ. ಅತಿ ಕಡಿಮೆಗೆ ಅಂದರೆ ₹ 20 ರಿಂದ ₹ 30ಕ್ಕೆ ಕೆ.ಜಿ ಮಾರಾಟವಾಗುತ್ತಿದ್ದ ದಪ್ಪಮೆಣಸಿನಕಾಯಿ ₹ 150ಕ್ಕೆ ಏರಿದೆ.</p>.<p>₹ 20ಕ್ಕೆ ಒಂದು ಮಾರಾಟ ಆಗುತ್ತಿದ್ದ ಹೂಕೋಸಿನ ಬೆಲೆಯೂ ₹ 50 ಆಗಿದೆ. ₹ 20ಕ್ಕೆ ಕೆ.ಜಿ ಇದ್ದ ಈರುಳ್ಳಿ ₹ 50ಕ್ಕೆ ಏರಿದೆ. ಇದೇ ರೀತಿ ಸೊಪ್ಪಿನ ಬೆಲೆಯೂ ಬಹಳ ಹೆಚ್ಚಾಗಿದ್ದು ₹ 2, 3ಕ್ಕೆ ಮಾರಾಟವಾಗುತ್ತಿದ್ದವು ₹ 10 ಆಗಿದೆ. ಮೆಂತೆ ಸೊಪ್ಪು ₹ 15ಕ್ಕೆ ಒಂದು ಕಟ್ಟು ಆಗಿದೆ. ₹ 40ರಿಂದ 50ಕ್ಕೆ ಮಾರು ಮಾರಾಟ ಆಗುತ್ತಿದ್ದ ಕನಕಾಂಬರ ಹಾಗೂ ಮಲ್ಲಿಗೆ ಹೂವು ₹ 200 ಆಗಿದೆ. ಹೂವಿನ ಬೆಲೆ ಹೆಚ್ಚಾಗಲು ಮಳೆ ಮೂಲ ಕಾರಣವಾಗಿದೆ. ಆದರೆ, ಬೆಳಗಾದರೆ ತುಳಸಿ ವಿವಾಹ ಇರುವುದರಿಂದ ನಾಳೆ ಹೂವಿನ ಬೆಲೆ ಎಷ್ಟಾಗುವುದೋ ಆ ದೇವರೇ ಬಲ್ಲ ಎನ್ನುವಂತಾಗಿದೆ.</p>.<p>ಮಳೆಯಿಂದಾಗಿ ಒಂದೆಡೆ ತರಕಾರಿ, ಹೂವು ಬಾರದಿರುವುದರಿಂದ ತುಟ್ಟಿಯಾಗಿದ್ದರೆ, ಗ್ರಾಹಕರ ಸಂಖ್ಯೆ ಕಡಿಮೆಯಾಗಿರುವದರಿಂದ ವ್ಯಾಪಾರಸ್ಥರು ಲಾಭವೂ ಕಡಿಮೆಯಾಗಿ, ಖರೀದಿಸಿದ ಮಾಲು ಖರ್ಚಾದರೆ ಸಾಕು ಎನ್ನುತ್ತಿದ್ದಾರೆ.</p>.<p>ಬೆಳೆದ ಬೆಳೆ ಕೈಗೆ ಸಿಗುತ್ತಿಲ್ಲ ಎಂದು ರೈತರು ಕಂಗಾಲಾಗಿದ್ದಾರೆ. ಮಾರುಕಟ್ಟೆಗೆ ಅಗತ್ಯಕ್ಕೆ ತಕ್ಕಷ್ಟು ತರಕಾರಿ ಬಾರದ ಕಾರಣ ಬರುವ ತರಕಾರಿಗೆ ಬೆಲೆ ತೀವ್ರವಾಗಿ ಹೆಚ್ಚಾಗಿದೆ ಎನ್ನುತ್ತಾರೆ ತರಕಾರಿ ಮಾರುಕಟ್ಟೆಯ ವ್ಯಾಪಾರಿ ಅವ್ವಯ್ಯಕ್ಕ, ಅಶೋಕ, ಸ್ವಾಮಿ.</p>.<p>‘ನಾವು ಹಾಸ್ಟೆಲ್ಗಳಿಗೆ ₹ 100ಕ್ಕೆ 3 ಕೆ.ಜಿ. ವಿವಿಧ ಬಗೆಯ ತರಕಾರಿ ಕೊಳ್ಳುತ್ತಿದ್ದೆವು. ಈಗ ಸಾಧ್ಯ ಆಗುತ್ತಿಲ್ಲ. ತರಕಾರಿ ಬೆಲೆ ಇಷ್ಟಾದರೆ ಸರ್ಕಾರ ನೀಡುವ ದರಕ್ಕೆ ತರಕಾರಿ ತೆಗೆದುಕೊಳ್ಳಲು ಸಾಧ್ಯ ಆಗುವುದಿಲ್ಲ. ಆದ್ದರಿಂದ 3 ಕೆ.ಜಿ. ತರಕಾರಿ ಬಳಸುವ ಜಾಗದಲ್ಲಿ 1 ಕೆ.ಜಿ ತರಕಾರಿ ಬಳಸಿ ಅಡುಗೆ ಮಾಡಿ ಬಡಸಬೇಕಾದ ಅನಿವಾರ್ಯತೆ ಇದೆ’ ಎಂದು ಸರ್ಕಾರಿ ಹಾಸ್ಟೆಲ್ನ ಅಡುಗೆಯವರು ಸಮಸ್ಯೆ ಹೇಳಿದರು.</p>.<p>ಇನ್ನು ಹೋಟೆಲ್ಗಳ ಇಡ್ಲಿ ಸಾಂಬಾರ್, ಅನ್ನ ಸಾಂಬಾರ್ನಲ್ಲಿ ಬೇರೆ ತರಕಾರಿ ಕಾಣದಾಗಿದೆ. ಆಲೂಗೆಡ್ಡೆ, ಬದನೆಕಾಯಿ, ಬೀನ್ಸ್ 1 ಕೆಜಿಗೆ ₹ 40ರ ಆಸುಪಾಸಿನಲ್ಲಿದ್ದು ಎಲ್ಲ ಹೋಟೆಲ್ಗಳಲ್ಲಿ ಈ ತರಕಾರಿಗಳು ಮಾತ್ರ ಹೆಚ್ಚಾಗಿ ಬಳಕೆ ಆಗುತ್ತಿದೆ.</p>.<p>ಇದುವರೆಗೂ ಬಳಸಿದ ನ್ಯೂಸ್ ಪೇಪರ್ 1 ಕೆ.ಜಿಗೆ ₹ 12 ರಿಂದ ₹ 13 ಕ್ಕೆ ಮಾರಾಟವಾಗುತ್ತಿದ್ದು ಈಗ ಕೆಲವು ದಿನಗಳಿಂದ ₹ 28ರಿಂದ ₹ 30ಕ್ಕೆ ಮಾರಾಟವಾಗುತ್ತಿದ್ದು ದಿನಪತ್ರಿಕೆಗಳನ್ನು ಕೊಂಡು ಓದುವವರಿಗೆ ಓದಿದ ನಂತರವೂ ಉತ್ತಮ ಬೆಲೆ ಸಿಗುತ್ತಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>