‘ಹಾಸನ ಆಗಲಿಲ್ಲ ಅಂತ ಅವರು ಕೊಡಗಿಗೆ ಹೋಗಿದ್ದಾರೆ. ಆದರೆ, ನಾನು ಯಾವತ್ತು ಹಾಸನ ಬಿಟ್ಟು ಓಡಿ
ಹೋಗಿಲ್ಲ. ಇಲ್ಲೇ ಇದ್ದೀನಿ, ಸಮಯ ಸಿಕ್ಕಾಗಲೆಲ್ಲಾ ಪಕ್ಷ ಬದಲಿಸುತ್ತಿರುವುದು ನಾನಲ್ಲ. ನಾನು ಸಾಯೋವರೆಗೂ ಬಿಜಪಿಯಲ್ಲೇ ಇರುತ್ತೇನೆ.ಇವತ್ತು ಈ ಪಕ್ಷ, ನಾಳೆ ಇನ್ನೊಂದು ಪಕ್ಷಕ್ಕೆ ಹೋಗುವವರ ಬಗ್ಗೆ ನಾನು ಮಾತನಾಡುವುದಿಲ್ಲ. ಈ ಬಗ್ಗೆ ಜನರೇ ಚರ್ಚೆ ಮಾಡಲಿ. ಕೊಡಗಿನಲ್ಲಿ ಏಕೆ ಮಂಥರ್ಗೌಡ ಸೋತರು’ ಎಂದು ಮಾರ್ಮಿಕವಾಗಿ ಪ್ರಶ್ನಿಸಿದರು.