ಹೊಳೆನರಸೀಪುರ ತಾಲ್ಲೂಕಿನ ಎಲೆಚಾಗಹಳ್ಳಿ ಗ್ರಾಮದಲ್ಲಿ ಶುಂಠಿ, ಬಾಳೆ, ಅಡಿಕೆ ಬೆಳೆ ಪ್ರವೇಶ ನೀರಿನಲ್ಲಿ ಮುಳುಗಿದೆ. ಜೋರು ಮಳೆಗೆ ಹಿರೀಸಾವೆ ದೊಡ್ಡ ಕೆರೆ ತುಂಬಿ ಹರಿದ ಹಿನ್ನೆಲೆ ಸಂತಸಗೊಂಡ ಸ್ಥಳೀಯರು, ಕೋಡಿ ಬಿದ್ದು ಹರಿಯುತ್ತಿರುವ ನೀರಿನ ಮಧ್ಯೆಯೇ ಕುರಿ ಮತ್ತು ಮೇಕೆಯನ್ನು ಬಲಿಕೊಟ್ಟು ಸಂಭ್ರಮಾಚರಣೆ ಮಾಡಿದರು.ಕಳೆದ ಎರಡೂವರೆ ದಶಕದ ಬಳಿಕ ಮೊದಲ ಬಾರಿಗೆ ಒಡಲು ತುಂಬಿಕೊಂಡ ಸಂತಸದಲ್ಲಿ ಕೊಳ್ಳೇನಹಳ್ಳಿ ರೈತರು ಒಟ್ಟಾಗಿ ಸೇರಿ ಪ್ರಾಣಿ ಬಲಿಕೊಟ್ಟು ಹಬ್ಬ ಮಾಡಿ ಖುಷಿಪಟ್ಟರು.