ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಟಿ ದಾಳಿ: ದೂರು ದಾಖಲಿಸಿದ ಅರ್ಚಕ

Last Updated 13 ಏಪ್ರಿಲ್ 2019, 8:58 IST
ಅಕ್ಷರ ಗಾತ್ರ

ಹಾಸನ: ಹೊಳೆನರಸೀಪುರ ತಾಲ್ಲೂಕಿನ ಹರದನಹಳ್ಳಿಯ ದೇವೇಶ್ವರ ದೇಗುಲದ ಅರ್ಚಕರ ನಿವಾಸಗಳಲ್ಲಿ ಶುಕ್ರವಾರ ಐಟಿ ಅಧಿಕಾರಿಗಳ ಸೋಗಿನಲ್ಲಿ ಇಬ್ಬರು ಅಪರಿಚಿತರು ತಪಾಸಣೆ ಕೈಗೊಂಡ ಸಂಬಂಧ ಅರ್ಚಕ ಪ್ರಕಾಶ್‌ ಭಟ್ಟ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ದೂರು ಆಧರಿಸಿ ಪೊಲೀಸರು ಇಬ್ಬರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

‘ಬೆಳಗ್ಗೆ 11 ಗಂಟೆಯಲ್ಲಿ ನಮ್ಮ ಮನೆಗೆ ಬಂದ ಇಬ್ಬರು ಅಪರಿಚಿತರು, ತಾವು ಐಟಿ ಹಾಗೂ ಚುನಾವಣಾ ಅಧಿಕಾರಿಗಳು ಎಂದು ಹೇಳಿಕೊಂಡರು. ಚುನಾವಣೆಯಲ್ಲಿ ಮತದಾರರಿಗೆ ಹಣ ಹಂಚಲು ಅಕ್ರಮವಾಗಿ ಹಣ ಸಂಗ್ರಹಿಸಿಟ್ಟಿರುವ ಮಾಹಿತಿ ಹಿನ್ನಲೆಯಲ್ಲಿ ದೇಗುಲ ಹಾಗೂ ಮನೆಯಲ್ಲಿ ತಪಾಸಣೆ ನಡೆಸಬೇಕು ಎಂದರು. ಇಬ್ಬರಲ್ಲಿ ಒಬ್ಬರು ಕನ್ನಡ ಮತ್ತು ಮತ್ತೊಬ್ಬರು ಹಿಂದಿಯಲ್ಲಿ ಮಾತನಾಡಿದರು. ಮೊಬೈಲ್‌ ಸಹ ಕಸಿದುಕೊಂಡಿದ್ದರು’.

‘ನಾವು ಯಾವುದೇ ಅಕ್ರಮ ಹಣ ಇರಿಸಿಕೊಂಡಿಲ್ಲ ಎಂದರೂ ಅವರಿಬ್ಬರೂ ದೇವಾಲಯ, ನಮ್ಮ ಮನೆ ಹಾಗೂ ಮತ್ತೊಬ್ಬ ಅರ್ಚಕ ರೇವಣ್ಣ ಅವರ ಮನೆಯಲ್ಲಿಯೂ ತಪಾಸಣೆ ನಡೆಸಿದರು. ಆದರೆ, ಎಲ್ಲಿಯೂ ಹಣ ದೊರಕದ್ದರಿಂದ ಆಚೆ ಬಂದ ಅವರು ಸಿಲ್ವರ್‌ ಬಣ್ಣದ ಇನ್ನೊವಾ ಕಾರಿನಲ್ಲಿ ತೆರಳಿದರು. ನಮ್ಮ ಮನೆಗೆ ಬಂದವರು ಐಟಿ ಅಧಿಕಾರಿಗಳಲ್ಲ ಎಂದು ಮಾಧ್ಯಮಗಳಿಂದ ಗೊತ್ತಾಯಿತು. ನಮ್ಮ ಮನೆ, ದೇಗುಲಗಳಿಗೆ ಪ್ರವೇಶಿಸಿದ ಇಬ್ಬರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು’ ಎಂದು ಪ್ರಕಾಶ್‌ ಭಟ್ಟ ದೂರಿನಲ್ಲಿ ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT