‘ನಾವು ಯಾವುದೇ ಅಕ್ರಮ ಹಣ ಇರಿಸಿಕೊಂಡಿಲ್ಲ ಎಂದರೂ ಅವರಿಬ್ಬರೂ ದೇವಾಲಯ, ನಮ್ಮ ಮನೆ ಹಾಗೂ ಮತ್ತೊಬ್ಬ ಅರ್ಚಕ ರೇವಣ್ಣ ಅವರ ಮನೆಯಲ್ಲಿಯೂ ತಪಾಸಣೆ ನಡೆಸಿದರು. ಆದರೆ, ಎಲ್ಲಿಯೂ ಹಣ ದೊರಕದ್ದರಿಂದ ಆಚೆ ಬಂದ ಅವರು ಸಿಲ್ವರ್ ಬಣ್ಣದ ಇನ್ನೊವಾ ಕಾರಿನಲ್ಲಿ ತೆರಳಿದರು. ನಮ್ಮ ಮನೆಗೆ ಬಂದವರು ಐಟಿ ಅಧಿಕಾರಿಗಳಲ್ಲ ಎಂದು ಮಾಧ್ಯಮಗಳಿಂದ ಗೊತ್ತಾಯಿತು. ನಮ್ಮ ಮನೆ, ದೇಗುಲಗಳಿಗೆ ಪ್ರವೇಶಿಸಿದ ಇಬ್ಬರನ್ನು ಪತ್ತೆ ಹಚ್ಚಿ ಕ್ರಮಕೈಗೊಳ್ಳಬೇಕು’ ಎಂದು ಪ್ರಕಾಶ್ ಭಟ್ಟ ದೂರಿನಲ್ಲಿ ಕೋರಿದ್ದಾರೆ.