ಬಹಳಷ್ಟು ರೈತರು ಆಲೂಗಡ್ಡೆ, ತಂಬಾಕು ಬೆಳೆ ಬಿಟ್ಟು ಮುಸುಕಿನ ಜೋಳ ಬೆಳೆದಿದ್ದರು. ಹೀಗಾಗಿ ಬೆಳೆ ಪ್ರದೇಶದ ವಿಸ್ತೀರ್ಣದಲ್ಲೂ ಹೆಚ್ಚಳವಾಗಿತ್ತು. ಉತ್ತಮವಾಗಿ ಫಸಲು ಬಂದಿತ್ತು. ಆಗಸ್ಟ್ ತಿಂಗಳಿನಲ್ಲಿ ಬಿದ್ದ ಬಾರಿ ಮಳೆಗೆ 650 ಹೆಕ್ಟೇರ್ನಷ್ಟು ಮುಸುಕಿನ ಜೋಳದ ಬೆಳೆಗೆ ಹಾನಿಯಾಗಿತ್ತು. ಈಗ ಬೆಳೆಯ ಕಟಾವಿನ ಹಂತದಲ್ಲಿ ಬೀಳುತ್ತಿರುವ ಮಳೆ ರೈತರನ್ನು ಮತ್ತಷ್ಟು ಚಿಂತೆಗೆ ದೂಡಿದೆ.