<p><strong>ಹಿರೀಸಾವೆ:</strong> ಹೋಬಳಿ ಕೊಳ್ಳೇನಹಳ್ಳಿ ಗ್ರಾಮದಲ್ಲಿ ಭಕ್ತರ ಸಮ್ಮುಖದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಮಂಗಳವಾರ ಜರುಗಿತು.</p>.<p>ಕೆರೆ ಬಳಿ ಹೊಸ ನೀರಿನಲ್ಲಿ ಗಂಗೆ ಪೂಜೆ ಮಾಡಿ, ಪೆಟ್ಟಿಗೆಯಲ್ಲಿ ಇರಿಸಿದ್ದ ದೇವಿಯ ಮಣ್ಣಿ ದೀಪಗಳು ಸೇರಿ ಪರಿಕರ ಶುದ್ಧೀಕರಿಸಿದರು. ನಂತರ ಕಳಸ ಸ್ಥಾಪನೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ನಂತರ ತೇವಟಿಕೆ ಕಲಾವಿದರು ಯಲ್ಲಮ್ಮ ದೇವರ ಹಾಡು ಹೇಳುವ ಮೂಲಕ ಮೆರವಣಿಗೆ ಪ್ರಾಂರಭವಾಯಿತು. ಗ್ರಾಮದ ಹೆಬ್ಬಾಗಿಲು ಮೂಲಕ ಉತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಮಹಿಳೆಯರು ತಂಬಿಟ್ಟು ಆರತಿಯೊಂದಿಗೆ ದೇವಿ ಹಿಂದೆ ಸಾಗಿದರು.</p>.<p>ಗ್ರಾಮದ ಹನುಮಂತ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ, ಹಳ್ಳಿಯ 3 ಸ್ಥಳಗಳಲ್ಲಿ ಸಿಹಿ ಮಣವು ಹಾಕಿದರು. ನಂತರ ಎರಡು ದೇವರನ್ನು ಗುಡಿ ತುಂಬಿಸಿದರು. ದಾನಿಗಳ ಸಹಕಾರದಿಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರಾತ್ರಿ ಯಲ್ಲಮ್ಮ ದೇವಿ ಹರಿಕಥೆ ಏರ್ಪಡಿಸಲಾಗಿತ್ತು.</p>.<p>ಬುಧವಾರ ಚಿಕ್ಕಮ್ಮ ದೇವರ ಹಬ್ಬ ಆಚರಿಸಲಾಗುವುದು. ಜಾತ್ರೆ ಅಂಗವಾಗಿ ಬೆಳಿಗ್ಗೆ 10ಕ್ಕೆ ‘ಭಗೀರಥ ಕಪ್’ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಥಮ ₹20 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹7 ಸಾವಿರ ಮತ್ತು ಚತುರ್ಧ ₹5ಸಾವಿರ ಬಹುಮಾನ ನಿಗದಿಪಡಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಇಲ್ಲಿನ ಹನುಮಂತ ದೇವ ಸೇವಾ ಸಮಿತಿ ಹಾಗೂ ಭಗೀರಥ ಉಪ್ಪಾರ ಯುವಕ ಸಂಘ ಯುವಕರು ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ:</strong> ಹೋಬಳಿ ಕೊಳ್ಳೇನಹಳ್ಳಿ ಗ್ರಾಮದಲ್ಲಿ ಭಕ್ತರ ಸಮ್ಮುಖದಲ್ಲಿ ರೇಣುಕಾ ಯಲ್ಲಮ್ಮ ದೇವಿಯ ಜಾತ್ರೆ ಮಂಗಳವಾರ ಜರುಗಿತು.</p>.<p>ಕೆರೆ ಬಳಿ ಹೊಸ ನೀರಿನಲ್ಲಿ ಗಂಗೆ ಪೂಜೆ ಮಾಡಿ, ಪೆಟ್ಟಿಗೆಯಲ್ಲಿ ಇರಿಸಿದ್ದ ದೇವಿಯ ಮಣ್ಣಿ ದೀಪಗಳು ಸೇರಿ ಪರಿಕರ ಶುದ್ಧೀಕರಿಸಿದರು. ನಂತರ ಕಳಸ ಸ್ಥಾಪನೆ ಮಾಡಿ, ವಿಶೇಷ ಪೂಜೆ ಸಲ್ಲಿಸಲಾಯಿತು.</p>.<p>ನಂತರ ತೇವಟಿಕೆ ಕಲಾವಿದರು ಯಲ್ಲಮ್ಮ ದೇವರ ಹಾಡು ಹೇಳುವ ಮೂಲಕ ಮೆರವಣಿಗೆ ಪ್ರಾಂರಭವಾಯಿತು. ಗ್ರಾಮದ ಹೆಬ್ಬಾಗಿಲು ಮೂಲಕ ಉತ್ಸವ ಗ್ರಾಮದ ಪ್ರಮುಖ ಬೀದಿಯಲ್ಲಿ ಸಾಗಿತು. ಮಹಿಳೆಯರು ತಂಬಿಟ್ಟು ಆರತಿಯೊಂದಿಗೆ ದೇವಿ ಹಿಂದೆ ಸಾಗಿದರು.</p>.<p>ಗ್ರಾಮದ ಹನುಮಂತ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆಯಲ್ಲಿ, ಹಳ್ಳಿಯ 3 ಸ್ಥಳಗಳಲ್ಲಿ ಸಿಹಿ ಮಣವು ಹಾಕಿದರು. ನಂತರ ಎರಡು ದೇವರನ್ನು ಗುಡಿ ತುಂಬಿಸಿದರು. ದಾನಿಗಳ ಸಹಕಾರದಿಂದ ಭಕ್ತರಿಗೆ ಅನ್ನದಾನ ಏರ್ಪಡಿಸಲಾಗಿತ್ತು. ರಾತ್ರಿ ಯಲ್ಲಮ್ಮ ದೇವಿ ಹರಿಕಥೆ ಏರ್ಪಡಿಸಲಾಗಿತ್ತು.</p>.<p>ಬುಧವಾರ ಚಿಕ್ಕಮ್ಮ ದೇವರ ಹಬ್ಬ ಆಚರಿಸಲಾಗುವುದು. ಜಾತ್ರೆ ಅಂಗವಾಗಿ ಬೆಳಿಗ್ಗೆ 10ಕ್ಕೆ ‘ಭಗೀರಥ ಕಪ್’ ವಾಲಿಬಾಲ್ ಪಂದ್ಯಾವಳಿ ಏರ್ಪಡಿಸಲಾಗಿದೆ. ಪ್ರಥಮ ₹20 ಸಾವಿರ, ದ್ವಿತೀಯ ₹15 ಸಾವಿರ, ತೃತೀಯ ₹7 ಸಾವಿರ ಮತ್ತು ಚತುರ್ಧ ₹5ಸಾವಿರ ಬಹುಮಾನ ನಿಗದಿಪಡಿಸಲಾಗಿದೆ ಎಂದು ಗ್ರಾಮಸ್ಥರು ತಿಳಿಸಿದರು. ಇಲ್ಲಿನ ಹನುಮಂತ ದೇವ ಸೇವಾ ಸಮಿತಿ ಹಾಗೂ ಭಗೀರಥ ಉಪ್ಪಾರ ಯುವಕ ಸಂಘ ಯುವಕರು ಈ ಎಲ್ಲಾ ಕಾರ್ಯಕ್ರಮಗಳ ನೇತೃತ್ವ ವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>