ಬೆಂಗಳೂರಿನಲ್ಲಿ ವೆಲ್ಡಿಂಗ್ ಕೆಲಸಮಾಡುತ್ತಿದ್ದ ಶಿಯಾನ್ ಪಾಷಾ, ಬುಧವಾರ ರಾತ್ರಿ ಬರುತ್ತೇನೆಂದು ಕರೆ ಮಾಡಿ ಮನೆಗೆ ತಿಳಿಸಿದ್ದರು. ಮಂಗಳವಾರ ರಾತ್ರಿಯೇ ಬಂಟೇನಹಳ್ಳಿ ಗ್ರಾಮದ ಮನೆಗೆ ಬಂದಿದ್ದು, ಬುಧವಾರ ತನ್ನ ಸ್ನೇಹಿತರೊಂದಿಗೆ ತಾಲ್ಲೂಕಿನ ರಾಯಾಪುರ ಸಮೀಪ ಕಾರಿನಲ್ಲಿ ಹಾಸನ ರಸ್ತೆಯಲ್ಲಿ ತೆರಳುತಿದ್ದ ಸಂದರ್ಭ ಎದುರಿನಿಂದ ಬರುತ್ತಿದ್ದ ಬಸ್ ಹಾಗೂ ಕಾರಿನ ನಡುವೆ ಅಪಘಾತ ಸಂಭವಿಸಿದೆ.