<p><strong>ಹಿರೀಸಾವೆ</strong>: ಹೋಬಳಿಯಲ್ಲಿ ಮಳೆಯ ಕೊರತೆ, ಹೆಚ್ಚುತ್ತಿರುವ ಉಷ್ಣಾಂಶ, ನೀರಿಲ್ಲದೇ ತರಕಾರಿ ಫಸಲು ಕುಂಠಿತವಾಗಿದ್ದು, ಭಾನುವಾರದ ಸಂತೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದವು.</p>.<p>ಬೀನ್ಸ್ ಮತ್ತು ಹಸಿ ಶುಂಠಿ ಕೆ.ಜಿ.ಗೆ ₹ 180 ರಿಂದ ₹ 200 ದಾಟಿತ್ತು. ಹೆಚ್ಚಾದ ಬೆಲೆಯಿಂದ ಒಂದು ಕೆ.ಜಿ. ಕೊಳ್ಳುವ ಗ್ರಾಹಕರು ಕಾಲು ಕೆ.ಜಿ. ಕೊಳ್ಳುವಂತಾಗಿತ್ತು. ಟೊಮ್ಯಾಟೊ ಮತ್ತು ಈರುಳ್ಳಿ ಕೆ.ಜಿ.ಗೆ ₹ 15 ರಿಂದ ₹ 30 ಇದ್ದರೆ, ಉಳಿದ ತರಕಾರಿಗಳ ಬೆಲೆ ₹ 40ಕ್ಕಿಂತ ಹೆಚ್ಚಾಗಿದೆ. ನಾಟಿ ಬೆಳ್ಳುಳ್ಳಿ ಸಹ ₹ 260 ರಿಂದ ₹ 280 ಆಗಿದೆ. ಬಹುತೇಕ ಎಲ್ಲ ರೀತಿಯ ಸೊಪ್ಪುಗಳು ₹ 10ಕ್ಕೆ ಒಂದು ಕಂತೆಯಾದರೆ, ನುಗ್ಗೆಕಾಯಿ ಕೆಜಿಗೆ ₹ 80, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ, ಗೆಡ್ಡೆಕೋಸುಗಳು ₹ 100 ರಿಂದ ₹ 120, ಆಲೂಗಡ್ಡೆ, ಬದನೆಕಾಯಿ ₹ 40, ಕ್ಯಾರೆಟ್, ಬೀಟ್ರೂಟ್ ಸೇರಿದಂತೆ ಇತರೆ ತರಕಾರಿಗಳು ಕೆಜಿಗೆ ₹ 50 ರಿಂದ ₹ 60 ಇತ್ತು.</p>.<p>ಪಚ್ಚೆ ಬಾಳೆಹಣ್ಣು ಕೆ.ಜಿ. ₹30 ರಿಂದ ₹ 40 ಮತ್ತು ಪುಟ್ಟ ಬಾಳೆಹಣ್ಣು ₹ 50 ರಿಂದ ₹ 60 ಇತ್ತು. ಸೌತೆಕಾಯಿ ₹ 50 ಕ್ಕೆ ಮೂರರಿಂದ ನಾಲ್ಕು, ನಿಂಬೆಹಣ್ಣು ₹ 20 ಕ್ಕೆ 3 ಅಥವಾ 4 ಇತ್ತು. ಸಣ್ಣ ಈರುಳ್ಳಿ ₹ 100 ಕ್ಕೆ 5 ರಿಂದ 6 ಕೆ.ಜಿ., ಉತ್ತಮ ಈರುಳ್ಳಿ ₹100ಕ್ಕೆ 4 ಕೆಜಿ ಆಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು.</p>.<p>ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು, ಸೇಬು ಕೆ.ಜಿ.ಗೆ ₹ 200, ದ್ರಾಕ್ಷಿ ₹ 80, ಕರ್ಬುಜ ₹ 50, ಮೊಸಂಬಿ ₹ 50 ರಿಂದ ₹ 60, ವಿದೇಶದ ಡ್ಯ್ರಾಗನ್ ಫ್ರೂಟ್ ಒಂದಕ್ಕೆ ₹ 100 ಎಂದು ಹಣ್ಣಿನ ವ್ಯಾಪಾರಿ ತಿಪಟೂರಿನ ಇಮ್ರಾನ್ ತಿಳಿಸಿದರು.</p>.<p>ನೀರಿನ ಕೊರತೆ ಮತ್ತು ಬಿಸಿಲಿನ ತಾಪದಿಂದಾಗಿ ತರಕಾರಿ ಫಸಲು ಉತ್ತಮವಾಗಿಲ್ಲ. ಇದರಿಂದ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದೆ ಅರಕೆರೆ </p><p><strong>–ಮಂಜು ತರಕಾರಿ ವ್ಯಾಪಾರಿ</strong></p>.<p>ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೋಲ್ಸೇಲ್ ದರವು ಒಂದು ಮೊಟ್ಟೆಗೆ ₹ 6 ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು </p><p><strong>–ಪ್ರಗತಿ ವಾಸು ಮೊಟ್ಟೆ ವ್ಯಾಪಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೀಸಾವೆ</strong>: ಹೋಬಳಿಯಲ್ಲಿ ಮಳೆಯ ಕೊರತೆ, ಹೆಚ್ಚುತ್ತಿರುವ ಉಷ್ಣಾಂಶ, ನೀರಿಲ್ಲದೇ ತರಕಾರಿ ಫಸಲು ಕುಂಠಿತವಾಗಿದ್ದು, ಭಾನುವಾರದ ಸಂತೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೆ ಏರಿದ್ದವು.</p>.<p>ಬೀನ್ಸ್ ಮತ್ತು ಹಸಿ ಶುಂಠಿ ಕೆ.ಜಿ.ಗೆ ₹ 180 ರಿಂದ ₹ 200 ದಾಟಿತ್ತು. ಹೆಚ್ಚಾದ ಬೆಲೆಯಿಂದ ಒಂದು ಕೆ.ಜಿ. ಕೊಳ್ಳುವ ಗ್ರಾಹಕರು ಕಾಲು ಕೆ.ಜಿ. ಕೊಳ್ಳುವಂತಾಗಿತ್ತು. ಟೊಮ್ಯಾಟೊ ಮತ್ತು ಈರುಳ್ಳಿ ಕೆ.ಜಿ.ಗೆ ₹ 15 ರಿಂದ ₹ 30 ಇದ್ದರೆ, ಉಳಿದ ತರಕಾರಿಗಳ ಬೆಲೆ ₹ 40ಕ್ಕಿಂತ ಹೆಚ್ಚಾಗಿದೆ. ನಾಟಿ ಬೆಳ್ಳುಳ್ಳಿ ಸಹ ₹ 260 ರಿಂದ ₹ 280 ಆಗಿದೆ. ಬಹುತೇಕ ಎಲ್ಲ ರೀತಿಯ ಸೊಪ್ಪುಗಳು ₹ 10ಕ್ಕೆ ಒಂದು ಕಂತೆಯಾದರೆ, ನುಗ್ಗೆಕಾಯಿ ಕೆಜಿಗೆ ₹ 80, ಹಸಿ ಮೆಣಸಿನಕಾಯಿ, ಕ್ಯಾಪ್ಸಿಕಂ, ಗೆಡ್ಡೆಕೋಸುಗಳು ₹ 100 ರಿಂದ ₹ 120, ಆಲೂಗಡ್ಡೆ, ಬದನೆಕಾಯಿ ₹ 40, ಕ್ಯಾರೆಟ್, ಬೀಟ್ರೂಟ್ ಸೇರಿದಂತೆ ಇತರೆ ತರಕಾರಿಗಳು ಕೆಜಿಗೆ ₹ 50 ರಿಂದ ₹ 60 ಇತ್ತು.</p>.<p>ಪಚ್ಚೆ ಬಾಳೆಹಣ್ಣು ಕೆ.ಜಿ. ₹30 ರಿಂದ ₹ 40 ಮತ್ತು ಪುಟ್ಟ ಬಾಳೆಹಣ್ಣು ₹ 50 ರಿಂದ ₹ 60 ಇತ್ತು. ಸೌತೆಕಾಯಿ ₹ 50 ಕ್ಕೆ ಮೂರರಿಂದ ನಾಲ್ಕು, ನಿಂಬೆಹಣ್ಣು ₹ 20 ಕ್ಕೆ 3 ಅಥವಾ 4 ಇತ್ತು. ಸಣ್ಣ ಈರುಳ್ಳಿ ₹ 100 ಕ್ಕೆ 5 ರಿಂದ 6 ಕೆ.ಜಿ., ಉತ್ತಮ ಈರುಳ್ಳಿ ₹100ಕ್ಕೆ 4 ಕೆಜಿ ಆಗಿದೆ ಎನ್ನುತ್ತಾರೆ ಈರುಳ್ಳಿ ವ್ಯಾಪಾರಿಗಳು.</p>.<p>ಹಣ್ಣುಗಳ ಬೆಲೆಯೂ ಹೆಚ್ಚಾಗಿದ್ದು, ಸೇಬು ಕೆ.ಜಿ.ಗೆ ₹ 200, ದ್ರಾಕ್ಷಿ ₹ 80, ಕರ್ಬುಜ ₹ 50, ಮೊಸಂಬಿ ₹ 50 ರಿಂದ ₹ 60, ವಿದೇಶದ ಡ್ಯ್ರಾಗನ್ ಫ್ರೂಟ್ ಒಂದಕ್ಕೆ ₹ 100 ಎಂದು ಹಣ್ಣಿನ ವ್ಯಾಪಾರಿ ತಿಪಟೂರಿನ ಇಮ್ರಾನ್ ತಿಳಿಸಿದರು.</p>.<p>ನೀರಿನ ಕೊರತೆ ಮತ್ತು ಬಿಸಿಲಿನ ತಾಪದಿಂದಾಗಿ ತರಕಾರಿ ಫಸಲು ಉತ್ತಮವಾಗಿಲ್ಲ. ಇದರಿಂದ ಬಹುತೇಕ ತರಕಾರಿಗಳ ಬೆಲೆ ಹೆಚ್ಚಾಗಿದೆ ಅರಕೆರೆ </p><p><strong>–ಮಂಜು ತರಕಾರಿ ವ್ಯಾಪಾರಿ</strong></p>.<p>ಮಾರುಕಟ್ಟೆಯಲ್ಲಿ ಕೋಳಿ ಮೊಟ್ಟೆ ದರವು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಹೋಲ್ಸೇಲ್ ದರವು ಒಂದು ಮೊಟ್ಟೆಗೆ ₹ 6 ಆಗಿದೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಬಹುದು </p><p><strong>–ಪ್ರಗತಿ ವಾಸು ಮೊಟ್ಟೆ ವ್ಯಾಪಾರಿ</strong></p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>