ಸಾಹಿತಿ ಉದಯ ರವಿ ಮಾತನಾಡಿ, ಗಿಡ, ಮರಗಳು ಕೇವಲ ಹಸಿರಲ್ಲ, ಸಕಲ ಜೀವರಾಶಿಗೆ ಉಸಿರು ನೀಡುವ ಸಂಜೀವಿನಿ ಇದ್ದಂತೆ. ವಾತಾವರಣದಲ್ಲಿ ವಾಯುಮಾಲಿನ್ಯ ತಡೆಗಟ್ಟಿ, ಭೂಮಿಯಲ್ಲಿ ನೀರು ಹಿಡಿದಿಡುವ ಮಳೆಯನ್ನು ಭೂಮಿಗೆ ಆಕರ್ಷಿಸುವ ಕೆಲಸ ಮಾಡುವುದರಿಂದ ಹೆಚ್ಚು ಗಿಡ ನೆಟ್ಟು ಪರಿಸರ ಸಂರಕ್ಷಿಸಬೇಕು ಎಂದು ಕರೆ ನೀಡಿದರು.