ಹಾಸನ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಹುಟ್ಟುಹಬ್ಬದ ಅಂಗವಾಗಿ ಗುರುವಾರ ಬಿಜೆಪಿ ಜಿಲ್ಲಾ ಘಟಕದಿಂದ ನಗರದ ಸಾಲಗಾಮೆ ರಸ್ತೆಯ ಸಾಯಿಬಾಬ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಭಕ್ತರಿಗೆ ಹಣ್ಣು ವಿತರಿಸಲಾಯಿತು.
ಹೇಮಾವತಿ ಪ್ರತಿಮೆ ಬಳಿ ಮೋದಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ, ಸಿಹಿ ವಿತರಿಸಿದರು. ಬಳಿಕ ಸರ್ಕಾರಿ ಆಸ್ಪತ್ರೆಗೆ ತೆರಳಿ ನವಜಾತ ಶಿಶುವಿನ ತಾಯಂದರಿಗೆ ಸೇಬು ಹಣ್ಣುಗಳನ್ನು ವಿತರಿಸಲಾಯಿತು. ಕೋವಿಡ್ ಆಸ್ಪತ್ರೆ ರೋಗಿಗಳಿಗೆ ವಿತರಿಸುವಂತೆ ವಿಭಾಗದ ಮೇಲ್ವಿಚಾರಕ ಡಾ. ಪ್ರವೀಣ್ ಅವರಿಗೆ ಹಣ್ಣಿನ ಬುಟ್ಟಿ ನೀಡಲಾಯಿತು.
ಹುಡಾ ಅಧ್ಯಕ್ಷ ಲಲಾಟ್ ಮೂರ್ತಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ವೇಣುಗೋಪಾಲ್, ಮಹಿಳಾ ಮುಖಂಡರಾದ ರತ್ನ ಪ್ರಕಾಶ, ಲಾವಣ್ಯ, ಸವಿತಾ ಕೃಷ್ಣಮೂರ್ತಿ, ಕಾಮಿನಿ, ನಗರಸಭಾ ಸದಸ್ಯರಾದ ಮೋಹನ್, ಕೃಷ್ಣಮೂರ್ತಿ, ಮಹೇಶ್ ಹಾಗೂ ಮುಖಂಡರಾದ ರೂಪೇಶ, ಮೋಹನ್ ಕುಮಾರ್, ಲೋಹಿತ್ ಠಾಣೆ, ಅನಂತ್, ಕೃಷ್ಣಕುಮಾರ್ ಹಾಜರಿದ್ದರು.