ಮಾಣಿಕ್ಯ ಪ್ರಕಾಶನ, ಸೃಜನಶೀಲ ಸಾಹಿತ್ಯ ಮತ್ತು ಸಾಂಸ್ಕೃತಿಕ ಆಕಾಡೆಮಿ ಆಶ್ರಯದಲ್ಲಿ ವಿಜಯಪುರದ ಸಿದ್ಧಾರೂಢ ಕಟ್ಟಿಮನಿ ಅವರ ‘ಜಾಡಮಾಲಿ ಇಲ್ಲದ ನಗರ’, ಬಳ್ಳಾರಿ ಉಬ್ಬಳಗುಂಡಿ ಶಶಿಧರ ಅವರ ‘ಜೀವಸೆಲೆ’, ಕಾಸರಗೋಡು ವನಿತಾ ಅವರ ’ಪ್ರತಿಬಿಂಬ’, ಗಂಗಾವತಿ ಪತ್ತಾರದ ಲಕ್ಷ್ಮೀದೇವಿ ಅವರ ‘ಕತ್ತಲಿಗಂಟಿದ ಬೆಳಕು’, ಅಂಕೋಲ ರೇಣುಕಾ ರಮಾನಂದ ಅವರ ‘ಮೀನುಪೇಟೆಯ ತಿರುವು’, ಬಾಗಲಕೋಟೆಯ ಮಹಾಂತೇಶ್ ಪಾಟೀಲ್ ಅವರ ‘ಒಡೆದ ಬಣ್ಣದ ಚಿತ್ರಗಳು’, ಶಿವಮೊಗ್ಗದ ಅಜಿತ್ ಹೆಗಡೆ ರಚಿತ ‘ಬಿಳಿಮಲ್ಲಿಗೆಯ ಬಾವುಟ’, ಬೆಂಗಳೂರು ಮಂಜುನಾಥ್ ಸರ್ಜಾಪುರ ಅವರ ‘ತೇಲಿಹೋದ ದೋಣಿ’ ಹಾಗೂ ಹಾಸನದ ವಿನಯಚಂದ್ರ ಅವರ ‘ಮೌನಗೀತ’ ಕವನ ಸಂಕಲನಗಳನ್ನು ಸಾಹಿತಿ ಜಯಪ್ಪ ಹೊನ್ನಾಳಿ ಬಿಡುಗಡೆ ಮಾಡಿದರು.