‘ಧರ್ಮಸ್ಥಳದಿಂದ ಹಾಸನಕ್ಕೆ ಒಬ್ಬರಿಗೆ ₹ 500 ಕೊಟ್ಟು ಹಾಸನಕ್ಕೆ ಬಂದಿದ್ದೇವೆ. ಇಲ್ಲಿಂದ ಹೊಳೆನರಸೀ ಪುರಕ್ಕೆ ಹೋಗಬೇಕಿದ್ದು, ಯಾವುದೇ ಬಸ್ ವ್ಯವಸ್ಥೆ ಇಲ್ಲ. ಸಾರಿಗೆ ನೌಕರರ ಮುಷ್ಕರದಿಂದ ಸಾರ್ವಜನಿಕರಿಗೆ ತುಂಬಾ ತೊಂದರೆ ಆಗುತ್ತಿದ್ದು, ಸರ್ಕಾರ ಕೂಡಲೇ ಅವರ ಭರವಸೆ ಈಡೇರಿಸಿದರೆ ಒಳಿತು’ ಎಂದು ಹೊಳೆನರಸೀಪುರದ ಹರೀಶ್ ಮನವಿ ಮಾಡಿದರು.