ಪಠ್ಯ ಪುಸ್ತಕಗಳಲ್ಲಿ ಹೊಸ ವಿಷಯ ಸೇರ್ಪಡೆ ವಿಚಾರ ಕುರಿತು ಪ್ರತಿಕ್ರಿಯಿಸಿದಸ್ವಾಮೀಜಿ, ‘ಕಾಲಕಾಲಕ್ಕೆ ಹೊಸ ವಿಚಾರಗಳನ್ನು ಸೇರ್ಪಡೆಗೊಳಿಸುವುದು ತಪ್ಪಲ್ಲ. ಭಗತ ಸಿಂಗ್ ವಿಚಾರವನ್ನು ತೆಗೆದು ಹಾಕಿಲ್ಲ, ಅದು ಬರಿ ವದಂತಿ ಎಂದು ಮಾಧ್ಯಮದಲ್ಲಿ ನೋಡಿದ್ದೇನೆ. ಇದ್ದಂತಹ ಯಾವುದೇ ಪಠ್ಯ ವಿಷಯಗಳನ್ನೂ ತೆಗೆದು ಹಾಕಿಲ್ಲ, ಹೊಸ ಭಾಗವನ್ನು ಸೇರ್ಪಡೆಗೊಳಿಸಿದ್ದೇವೆ ಎಂದು ಸಚಿವರೇ ಹೇಳಿದ್ದಾರೆ. ಹೀಗಿದ್ದರೂ, ಸುಖಾ ಸುಮ್ಮನೆ ಸಮಾಜದಲ್ಲಿ ಗುಲ್ಲು ಎಬ್ಬುಸುವಂತಹದ್ದು ಒಳ್ಳೆಯದಲ್ಲ’ ಎಂದು ನುಡಿದರು.