ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವೃದ್ಧ, ಯುವಕನ ರಕ್ಷಣೆ

Last Updated 17 ಆಗಸ್ಟ್ 2021, 1:16 IST
ಅಕ್ಷರ ಗಾತ್ರ

ಕೊಣನೂರು: ಕಾವೇರಿ ನದಿಗೆ ಬಿದ್ದ ವೃದ್ಧ ಹಾಗೂ ಅವರನ್ನು ಪಾರು ಮಾಡಲು ಹೋಗಿನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಯುವಕನನ್ನು ರಕ್ಷಿಸಲಾಗಿದೆ.

ಭಾನುವಾರ ಸಂಜೆ ಚಿಕ್ಕ ಅರಕಲಗೂಡು ಗ್ರಾಮದ ದಾಸೇಗೌಡ (94) ಎಂಬುವರು ಪಟ್ಟಣದ ಬಳಿ ಕಾವೇರಿ ನದಿಯಲ್ಲಿ ಮುಳುಗಿ ರಕ್ಷಣೆಗೆ ಕೂಗಿಕೊಂಡಿದ್ದಾರೆ. ಅಲ್ಲಿದ್ದಹಾಸನದ 23 ವರ್ಷದ ನವೀನ್‌ ರಕ್ಷಿಸಲು ನೀರಿಗೆ ಹಾರಿದ್ದಾರೆ. ಅವರೂ ನೀರಿನ ಸೆಳೆತಕ್ಕೆ ಕೊಚ್ಚಿಕೊಂಡು ಹೋಗುತ್ತಿದ್ದಾಗ ಜನರು ಚೀರಾಟ ನಡೆಸಿದ್ದಾರೆ.

ತೂಗು ಸೇತುವೆ ಬಳಿ ಛಾಯಾಗ್ರಹಣ ಮಾಡುತ್ತಿದ್ದ ಮೈಸೂರಿನ ನ್ಯಾಷನಲ್ ಅಕಾಡೆಮಿ ಆಫ್ ರುಡ್‌ಸೆಟ್‌ನ ಗಿರಿ ಮಂಜು, ನದಿಯಲ್ಲಿ ಈಜಿ ದಾಸೇಗೌಡ ಮತ್ತು ನವೀನ್‌ ಅವರನ್ನು ರಕ್ಷಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT