ಮಂಗಳವಾರ, 22 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಳೇಬೀಡು | ಉತ್ತಮ ಮಳೆ: ಸಮೃದ್ಧ ಹತ್ತಿ ಬೆಳೆ ನಿರೀಕ್ಷೆ

ಬೆಳೆಗಾರರನ್ನು ಕಾಡುತ್ತಿರುವ ಕೂಲಿಕಾರ್ಮಿಕರ ಕೊರತೆ: ರೋಗದ ಭೀತಿ
Published : 15 ಜೂನ್ 2024, 5:16 IST
Last Updated : 15 ಜೂನ್ 2024, 5:16 IST
ಫಾಲೋ ಮಾಡಿ
Comments
ಬೇಲೂರು ತಾಲ್ಲೂಕಿನಲ್ಲಿ ಕಡಿಮೆ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ. ಬೆಳೆಗೆ ರೋಗ ಕೀಟ ಬಾಧೆ ಕಾಣಿಸಿಕೊಂಡರೆ ರೈತ ಸಂಪರ್ಕ ಕೇಂದ್ರ ಸಂಪರ್ಕಿಸಲು ಹತ್ತಿ ಬೆಳೆಗಾರರಿಗೆ ಸೂಚಿಸಲಾಗಿದೆ
- ರಂಗಸ್ವಾಮಿ ಸಹಾಯಕ ಕೃಷಿ ನಿರ್ದೇಶಕ
ಹತ್ತಿ ರೈತರ ಕೈಹಿಡಿಯುವ ಬೆಳೆ. ಕಾರ್ಮಿಕರ ಅವಲಂಬನೆ ಇಲ್ಲದೆ ಹತ್ತಿ ಬೆಳೆಯುವುದು ಕಷ್ಟ. ಶುಂಠಿ ಬೆಳೆಯಿಂದ ದಿನದ ಕೂಲಿ ಬೆಲೆ ಹೆಚ್ಚಾಗಿದೆ. ಹಣ ಕೊಟ್ಟರೂ ಕಾರ್ಮಿಕರು ಕೆಲಸಕ್ಕೆ ಬರುತ್ತಿಲ್ಲ
ರವಿ ಎಂ.ಬಿ. ಕೆ.ಮಲ್ಲಾಪುರ ರೈತ
ಹತ್ತಿ ಜೊತೆ ಸೊಂಪಾಗಿ ಬೆಳೆದ ಕಳೆ
ಭೂಮಿ ಹದವಾಗಿರುವುದರಿಂದ ಶರವೇಗದಲ್ಲಿ ಬೆಳೆಯುತ್ತಿರುವ ಕಳೆ ಹತ್ತಿ ಬೆಳೆಗಿಂತ ಎತ್ತರ ಬೆಳೆಯುತ್ತಿದೆ. ಕಳೆ ನಿಯಂತ್ರಣ ರೈತರಿಗೆ ಸವಾಲಾಗಿದೆ. ಕುಂಟೆ ಹೊಡೆಯಲು ಮಳೆ ಬಿಡುವು ಕೊಡುತ್ತಿಲ್ಲ. ಕುಂಟೆ ಹೊಡೆದಾಗ ಕಳೆ ಹೊರ ಬರುತ್ತದೆ. ಗಿಡಗಳ ಬುಡಕ್ಕೆ ಮಣ್ಣು ದೊರಕುತ್ತದೆ. ಗುಂಟೆ ಲೆಕ್ಕದಲ್ಲಿ ಹತ್ತಿ ಬೆಳೆದವರು ಕುಡುಗೋಲಿನಿಂದ ಕಳೆ ತೆಗೆಯಬಹುದು. ಎಕರೆಗಟ್ಟಲೆ ಹತ್ತಿ ಬೆಳೆದವರು ಕೈಕೆಲಸದಲ್ಲಿ ಕಳೆ ತೆಗೆಯುವುದು ಸುಲಭ ಸಾಧ್ಯವಾಗಿಲ್ಲ ಎಂದು ರೈತ ಮಲ್ಲಾಪುರ ರವಿ ಎಂ.ಬಿ. ತಿಳಿಸಿದರು
ಎಕರೆಗೆ ₹30 ಸಾವಿರ ವೆಚ್ಚ
4 ತಿಂಗಳ ಮುಂಗಾರು ಹಂಗಾಮಿನ ಹತ್ತಿ ಬೆಳೆಯಲು ಕಾರ್ಮಿಕರನ್ನು ಅವಲಂಬಿಸಬೇಕು. ಮನೆ ಮಂದಿ ಹೊಲಕ್ಕೆ ಇಳಿದು ಕೆಲಸ ಮಾಡಿದರೆ ₹ 20 ಸಾವಿರ ವೆಚ್ಚದಲ್ಲಿ 1 ಎಕರೆಯಲ್ಲಿ ಹತ್ತಿ ಬೆಳೆಯಬಹುದು. ಕಾರ್ಮಿಕರನ್ನು ಅವಲಂಬಿಸಿದರೆ ಹೆಚ್ಚುವರಿ ₹10ಸಾವಿರ ಹೊಂದಿಸಬೇಕು. ಒಟ್ಟು ₹30ಸಾವಿರ ವೆಚ್ಚ ಮಾಡಿ ಹತ್ತಿ ಬೆಳೆದ ಜಮೀನಿನಲ್ಲಿ ಸಮರ್ಪಕ ಫಸಲು ಬಂದರೆ ರೈತರಿಗೆ ನಷ್ಟ ಆಗುವುದಿಲ್ಲ ಎನ್ನುತ್ತಾರೆ ರೈತರು. ಹಳೇಬೀಡು ಭಾಗದಲ್ಲಿ ಹತ್ತಿ ಬೆಳೆಯಿಂದ ಒಂದು ಎಕರೆಗೆ ₹ 1.5 ಲಕ್ಷದವರೆಗೂ ಸಂಪಾದಿಸಲು ಅವಕಾಶವಿದೆ. ಒಂದು ಕಾಲದಲ್ಲಿ ಹತ್ತಿ ಬೆಳೆ ಪ್ರಮುಖ ವಾಣಿಜ್ಯ ಬೆಳೆಯಾಗಿತ್ತು. 3-4 ವರ್ಷದ ಹತ್ತಿ ಬೆಳೆ ಆದಾಯ ಸಂಗ್ರಹಿಸಿ ಕೆಲವರು ಮನೆ ಮಾಡಿಕೊಳ್ಳುತ್ತಿದ್ದರು. ವಿವಾಹ ಮೊದಲಾದ ಶುಭಕಾರ್ಯಗಳನ್ನು ನೆಮ್ಮದಿಯಾಗಿ ನಿರ್ವಹಿಸುತ್ತಿದ್ದರು. ಕೂಲಿ ಕಾರ್ಮಿಕರ ಕೊರತೆಯಿಂದ ರೈತರು ಹತ್ತಿ ಬೆಳೆಯಿಂದ ಹಿಂದೆ ಸರಿದಿದ್ದಾರೆ ಎನ್ನುತ್ತಾರೆ ನರಸೀಪುರದ ರೈತ ಬೀರೇಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT