<p>ಅರಕಲಗೂಡು: ಪಟ್ಟಣದಲ್ಲಿ ಯುಗಾದಿ ಹಬ್ಬದ ದಿನವೇ ರಾಮನವಮಿ ಕಾರ್ಯ ಕ್ರಮಗಳು ಚಾಲನೆಗೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ರಾಮೋತ್ಸವ ಮೆರುಗು ನೀಡುತ್ತದೆ.</p>.<p>ಕೋಟೆ ಐತಿಹಾಸಿಕ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಸಂಜೆ ಪಂಚಾಂಗ ಶ್ರವಣ, ಪೂಜೆ, ಪಾನಕ ಪನಿವಾರಗಳ ವಿತರಣೆ ನಡೆಯುತ್ತದೆ. ಪಟ್ಟಣದ ಕೋಟೆ ಕೋದಂಡ ರಾಮ ದೇವಾಲಯದಲ್ಲಿ ಯುಗಾದಿ ದಿನದಿಂದ ರಾಮೋತ್ಸವ ಕಾರ್ಯಕ್ರಮಗಳು ಚಾಲನೆ ಗೊಳ್ಳುತ್ತವೆ. ಇದು ಹಬ್ಬದ ಸಡಗರ ಹೆಚ್ಚಿಸಿದೆ.</p>.<p>ರಾಮನವಮಿಯಂದು ರಥೋತ್ಸವ ಹಾಗೂ ದಶಮಿಯಂದು ಶ್ರೀರಾಮ ಪಟ್ಟಾಭಿಷೇಕ ನಡೆಯುತ್ತದೆ. ಇದರ ಹಿನ್ನೆಲೆಯಲ್ಲಿ ಪ್ರತಿದಿನ ದೇವಾಲಯದಲ್ಲಿ ವಿಶೇಷ ಪೂಜೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಗೊಳ್ಳುತ್ತವೆ. ಹೊರ ಊರುಗಳಲ್ಲಿ ನೆಲೆಸಿರುವ ಇಲ್ಲಿನವರು ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ.</p>.<p>ಹಬ್ಬದ ದಿನದಂದು ಬೆಳಿಗ್ಗೆ ಮನೆಗಳಿಗೆ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿ, ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ದೇವರಿಗೆ ಪೂಜೆ ಸಲ್ಲಿಸಿ, ಬೇವು, ಬೆಲ್ಲ ಸವಿಯುವುದು ವಾಡಿಕೆ.</p>.<p>ಮಧ್ಯಾಹ್ನ ನೆಂಟರಿಷ್ಟರೊಡಗೂಡಿ ಹೋಳಿಗೆ ಊಟ ಮಾಡಿ ಸಂಜೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪಂಚಾಂಗ ಶ್ರವಣ ಆಲಿಸಿ ಮಳೆ, ಬೆಳೆ, ವರ್ಷದ ಭವಿಷ್ಯ ತಿಳಿಯುವ ಮೂಲಕ ಹಬ್ಬದ ಆಚರಣೆ ಮುಕ್ತಾಯಗೊಳ್ಳುತ್ತದೆ.</p>.<p>ಕೃಷಿಕರು ತಮ್ಮ ಜಮೀನುಗಳಿಗೆ ತೆರಳಿ ಎತ್ತು, ನೊಗ ನೇಗಿಲುಗಳಿಗೆ ಪೂಜೆ ಸಲ್ಲಿಸಿ ಹೊನ್ನಾರು ಕಟ್ಟಿ ಭೂಮಿಯನ್ನು ಉಳುಮೆ ಮಾಡುವ ಮೂಲಕ ಬರಲಿರುವ ಕೃಷಿ ವರ್ಷದಲ್ಲಿ ಉತ್ತಮ ಮಳೆ, ಬೆಳೆಯಾಗಿ ಬದುಕು ಹಸನಾ ಗಿರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ.</p>.<p>ಪಟ್ಟಣದ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯ ಸೇರಿದಂತೆ ವಿವಿಧದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅರಕಲಗೂಡು: ಪಟ್ಟಣದಲ್ಲಿ ಯುಗಾದಿ ಹಬ್ಬದ ದಿನವೇ ರಾಮನವಮಿ ಕಾರ್ಯ ಕ್ರಮಗಳು ಚಾಲನೆಗೊಳ್ಳುವ ಮೂಲಕ ಹಬ್ಬದ ಸಡಗರಕ್ಕೆ ರಾಮೋತ್ಸವ ಮೆರುಗು ನೀಡುತ್ತದೆ.</p>.<p>ಕೋಟೆ ಐತಿಹಾಸಿಕ ಲಕ್ಷ್ಮೀನರಸಿಂಹ ಸ್ವಾಮಿ ದೇವಾಲಯದಲ್ಲಿ ಸಂಜೆ ಪಂಚಾಂಗ ಶ್ರವಣ, ಪೂಜೆ, ಪಾನಕ ಪನಿವಾರಗಳ ವಿತರಣೆ ನಡೆಯುತ್ತದೆ. ಪಟ್ಟಣದ ಕೋಟೆ ಕೋದಂಡ ರಾಮ ದೇವಾಲಯದಲ್ಲಿ ಯುಗಾದಿ ದಿನದಿಂದ ರಾಮೋತ್ಸವ ಕಾರ್ಯಕ್ರಮಗಳು ಚಾಲನೆ ಗೊಳ್ಳುತ್ತವೆ. ಇದು ಹಬ್ಬದ ಸಡಗರ ಹೆಚ್ಚಿಸಿದೆ.</p>.<p>ರಾಮನವಮಿಯಂದು ರಥೋತ್ಸವ ಹಾಗೂ ದಶಮಿಯಂದು ಶ್ರೀರಾಮ ಪಟ್ಟಾಭಿಷೇಕ ನಡೆಯುತ್ತದೆ. ಇದರ ಹಿನ್ನೆಲೆಯಲ್ಲಿ ಪ್ರತಿದಿನ ದೇವಾಲಯದಲ್ಲಿ ವಿಶೇಷ ಪೂಜೆ, ಉತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆ ಗೊಳ್ಳುತ್ತವೆ. ಹೊರ ಊರುಗಳಲ್ಲಿ ನೆಲೆಸಿರುವ ಇಲ್ಲಿನವರು ಉತ್ಸವದಲ್ಲಿ ಭಾಗವಹಿಸಿ ಸಂಭ್ರಮಿಸುತ್ತಾರೆ.</p>.<p>ಹಬ್ಬದ ದಿನದಂದು ಬೆಳಿಗ್ಗೆ ಮನೆಗಳಿಗೆ ತಳಿರು ತೋರಣಗಳನ್ನು ಕಟ್ಟಿ ಸಿಂಗರಿಸಿ, ಎಣ್ಣೆ ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ ದೇವರಿಗೆ ಪೂಜೆ ಸಲ್ಲಿಸಿ, ಬೇವು, ಬೆಲ್ಲ ಸವಿಯುವುದು ವಾಡಿಕೆ.</p>.<p>ಮಧ್ಯಾಹ್ನ ನೆಂಟರಿಷ್ಟರೊಡಗೂಡಿ ಹೋಳಿಗೆ ಊಟ ಮಾಡಿ ಸಂಜೆ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ಪಂಚಾಂಗ ಶ್ರವಣ ಆಲಿಸಿ ಮಳೆ, ಬೆಳೆ, ವರ್ಷದ ಭವಿಷ್ಯ ತಿಳಿಯುವ ಮೂಲಕ ಹಬ್ಬದ ಆಚರಣೆ ಮುಕ್ತಾಯಗೊಳ್ಳುತ್ತದೆ.</p>.<p>ಕೃಷಿಕರು ತಮ್ಮ ಜಮೀನುಗಳಿಗೆ ತೆರಳಿ ಎತ್ತು, ನೊಗ ನೇಗಿಲುಗಳಿಗೆ ಪೂಜೆ ಸಲ್ಲಿಸಿ ಹೊನ್ನಾರು ಕಟ್ಟಿ ಭೂಮಿಯನ್ನು ಉಳುಮೆ ಮಾಡುವ ಮೂಲಕ ಬರಲಿರುವ ಕೃಷಿ ವರ್ಷದಲ್ಲಿ ಉತ್ತಮ ಮಳೆ, ಬೆಳೆಯಾಗಿ ಬದುಕು ಹಸನಾ ಗಿರಲಿ ಎಂದು ಪ್ರಾರ್ಥನೆ ಸಲ್ಲಿಸುತ್ತಾರೆ.</p>.<p>ಪಟ್ಟಣದ ಗ್ರಾಮ ದೇವತೆ ದೊಡ್ಡಮ್ಮ ದೇವಾಲಯ ಸೇರಿದಂತೆ ವಿವಿಧದೇವಾಲಯಗಳಲ್ಲಿ ದೇವರಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>