<p><strong>ಹಾಸನ: </strong>ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶನಿವಾರ ಮಳೆ ಬಿಡುವು ನೀಡಿದ್ದು, ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯಗಳ ನೀರಿನ ಮಟ್ಟಏರಿಕೆಯಾಗಿದೆ.</p>.<p>ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕೆಲವು ಕಡೆ ಆಗಾಗ್ಗೆ ಅಲ್ಪ ಪ್ರಮಾಣಮಳೆಯಾಗುತ್ತಿದೆ. ಸಕಲೇಶಪುರ, ಆಲೂರು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.ಹಾಸನ ನಗರ, ಅರಕಲಗೂಡು, ಬೇಲೂರು, ಹಳೇಬೀಡು ಭಾಗದಲ್ಲಿ ಸಾಧಾರಣ ತುಂತುರು ಮಳೆಯಾಗಿದೆ.</p>.<p>ಆಲೂರು ಪಟ್ಟಣ, ಪಾಳ್ಯ, ಕುಂದೂರು, ಕೆ.ಹೊಸಕೋಟೆ ಹಾಗೂ ಸಕಲೇಶಪುರ ಪಟ್ಟಣ,ಬಾಳ್ಳುಪೇಟೆ, ಬೆಳಗೋಡು, ಹಾನುಬಾಳು, ಮಾರನಹಳ್ಳಿ, ಶುಕ್ರವಾರ ಸಂತೆ, ಹೆತ್ತೂರು,ಹೊಸೂರು, ಯಸಳೂರು ಭಾಗದಲ್ಲಿ ಜೋರು ಮಳೆ ಸುರಿದಿದೆ.</p>.<p>ಮೂಡಿಗೆರೆ ಮತ್ತು ಸಕಲೇಶಪುರ ಭಾಗದಲ್ಲಿ ಜೋರು ಮಳೆಯಾಗುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. 2922 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ2889.54 ಅಡಿ ನೀರಿತ್ತು. ಪ್ರಸ್ತುತ 15,364 ಕ್ಯುಸೆಕ್ ಒಳ ಹರಿವಿದ್ದು, 200ಕ್ಯುಸೆಕ್ ಹೊರ ಹರಿವು ಇದೆ.</p>.<p>ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾಗಲು ಎರಡು ಅಡಿ ಬಾಕಿ ಇದೆ. 1.51 (966.05 ಮೀ) ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 1.20 ಟಿಎಂಸಿನೀರು ಸಂಗ್ರಹವಾಗಿದೆ. 700 ಕ್ಯುಸೆಕ್ ಒಳ ಹರಿವು ಇದೆ. 6.68 ಕ್ಯುಸೆಕ್ ನೀರನ್ನುಹೊರ ಬಿಡಲಾಗುತ್ತಿದೆ.</p>.<p>ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಆಲೂರು ಭಾಗದಲ್ಲಿ ಜೋರು ಮಳೆಆಗುತ್ತಿರುವುದರಿಂದ ಯಗಚಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಒಂದೂವರೆ ಅಡಿ ನೀರುಬಂದರೆ ಜಲಾಶಯ ಭರ್ತಿಯಾಗಲಿದೆ. 3.603 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ3.240 ಟಿಎಂಸಿ ನೀರು ಸಂಗ್ರಹವಾಗಿದ್ದು, 3051 ಕ್ಯುಸೆಕ್ ಒಳ ಹರಿವು ಇದೆ.</p>.<p><strong>ಕೊಚ್ಚಿ ಹೋದ ಸಸಿ ಮಡಿ</strong></p>.<p><strong>ಹೆತ್ತೂರು: </strong>ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮಳೆಯ ಆರ್ಭಟ ತಗ್ಗಿದ್ದು, ಬಿಡುವು ನೀಡಿ ಆಗಾಗ್ಗೆ<br />ಸಾಧಾರಣ ಮಳೆ ಸುರಿಯಿತು.</p>.<p>ಐಗೂರು, ಯಡಕೇರಿ, ಅತ್ತಿಗನಹಳ್ಳಿ, ಪಾಲಹಳ್ಳಿ ಗದ್ದೆಗಳಲ್ಲಿ ನೀರು ನಿಂತಿದೆ. ಕೆಲವೆಡೆ ಭತ್ತದ ನಾಟಿ ಮಾಡಲು ತಯಾರಿಸಿದ್ದ ಸಸಿ ಮಡಿ ಕೊಚ್ಚಿಹೋಗಿದೆ. ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.<br />ನಿರಂತರ ಮಳೆಯಿಂದ ಮಲೆನಾಡಿನ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಮಳೆ ತುಸು ಬಿಡುವು ನೀಡಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ: </strong>ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಶನಿವಾರ ಮಳೆ ಬಿಡುವು ನೀಡಿದ್ದು, ಜಲಾನಯನ ಪ್ರದೇಶಗಳಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಜಲಾಶಯಗಳ ನೀರಿನ ಮಟ್ಟಏರಿಕೆಯಾಗಿದೆ.</p>.<p>ಮೋಡ ಕವಿದ ವಾತಾವರಣ ಮುಂದುವರಿದಿದ್ದು, ಕೆಲವು ಕಡೆ ಆಗಾಗ್ಗೆ ಅಲ್ಪ ಪ್ರಮಾಣಮಳೆಯಾಗುತ್ತಿದೆ. ಸಕಲೇಶಪುರ, ಆಲೂರು ಪ್ರದೇಶಗಳಲ್ಲಿ ಉತ್ತಮ ಮಳೆಯಾಗಿದೆ.ಹಾಸನ ನಗರ, ಅರಕಲಗೂಡು, ಬೇಲೂರು, ಹಳೇಬೀಡು ಭಾಗದಲ್ಲಿ ಸಾಧಾರಣ ತುಂತುರು ಮಳೆಯಾಗಿದೆ.</p>.<p>ಆಲೂರು ಪಟ್ಟಣ, ಪಾಳ್ಯ, ಕುಂದೂರು, ಕೆ.ಹೊಸಕೋಟೆ ಹಾಗೂ ಸಕಲೇಶಪುರ ಪಟ್ಟಣ,ಬಾಳ್ಳುಪೇಟೆ, ಬೆಳಗೋಡು, ಹಾನುಬಾಳು, ಮಾರನಹಳ್ಳಿ, ಶುಕ್ರವಾರ ಸಂತೆ, ಹೆತ್ತೂರು,ಹೊಸೂರು, ಯಸಳೂರು ಭಾಗದಲ್ಲಿ ಜೋರು ಮಳೆ ಸುರಿದಿದೆ.</p>.<p>ಮೂಡಿಗೆರೆ ಮತ್ತು ಸಕಲೇಶಪುರ ಭಾಗದಲ್ಲಿ ಜೋರು ಮಳೆಯಾಗುತ್ತಿರುವ ಕಾರಣ ಹೇಮಾವತಿ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿದೆ. 2922 ಅಡಿ ಸಾಮರ್ಥ್ಯದ ಜಲಾಶಯದಲ್ಲಿ ಪ್ರಸ್ತುತ2889.54 ಅಡಿ ನೀರಿತ್ತು. ಪ್ರಸ್ತುತ 15,364 ಕ್ಯುಸೆಕ್ ಒಳ ಹರಿವಿದ್ದು, 200ಕ್ಯುಸೆಕ್ ಹೊರ ಹರಿವು ಇದೆ.</p>.<p>ಆಲೂರು ತಾಲ್ಲೂಕಿನ ವಾಟೆಹೊಳೆ ಜಲಾಶಯ ಭರ್ತಿಯಾಗಲು ಎರಡು ಅಡಿ ಬಾಕಿ ಇದೆ. 1.51 (966.05 ಮೀ) ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ 1.20 ಟಿಎಂಸಿನೀರು ಸಂಗ್ರಹವಾಗಿದೆ. 700 ಕ್ಯುಸೆಕ್ ಒಳ ಹರಿವು ಇದೆ. 6.68 ಕ್ಯುಸೆಕ್ ನೀರನ್ನುಹೊರ ಬಿಡಲಾಗುತ್ತಿದೆ.</p>.<p>ಜಲಾನಯನ ಪ್ರದೇಶಗಳಾದ ಚಿಕ್ಕಮಗಳೂರು, ಆಲೂರು ಭಾಗದಲ್ಲಿ ಜೋರು ಮಳೆಆಗುತ್ತಿರುವುದರಿಂದ ಯಗಚಿ ಜಲಾಶಯಕ್ಕೆ ಒಳ ಹರಿವು ಹೆಚ್ಚಿದೆ. ಒಂದೂವರೆ ಅಡಿ ನೀರುಬಂದರೆ ಜಲಾಶಯ ಭರ್ತಿಯಾಗಲಿದೆ. 3.603 ಟಿಎಂಸಿ ಸಾಮರ್ಥ್ಯದ ಜಲಾಶಯದಲ್ಲಿ3.240 ಟಿಎಂಸಿ ನೀರು ಸಂಗ್ರಹವಾಗಿದ್ದು, 3051 ಕ್ಯುಸೆಕ್ ಒಳ ಹರಿವು ಇದೆ.</p>.<p><strong>ಕೊಚ್ಚಿ ಹೋದ ಸಸಿ ಮಡಿ</strong></p>.<p><strong>ಹೆತ್ತೂರು: </strong>ಹೋಬಳಿ ವ್ಯಾಪ್ತಿಯಲ್ಲಿ ಶನಿವಾರ ಮಳೆಯ ಆರ್ಭಟ ತಗ್ಗಿದ್ದು, ಬಿಡುವು ನೀಡಿ ಆಗಾಗ್ಗೆ<br />ಸಾಧಾರಣ ಮಳೆ ಸುರಿಯಿತು.</p>.<p>ಐಗೂರು, ಯಡಕೇರಿ, ಅತ್ತಿಗನಹಳ್ಳಿ, ಪಾಲಹಳ್ಳಿ ಗದ್ದೆಗಳಲ್ಲಿ ನೀರು ನಿಂತಿದೆ. ಕೆಲವೆಡೆ ಭತ್ತದ ನಾಟಿ ಮಾಡಲು ತಯಾರಿಸಿದ್ದ ಸಸಿ ಮಡಿ ಕೊಚ್ಚಿಹೋಗಿದೆ. ಸೆಸ್ಕ್ ಸಿಬ್ಬಂದಿ ವಿದ್ಯುತ್ ಕಂಬಗಳ ದುರಸ್ತಿ ಕಾರ್ಯದಲ್ಲಿ ತೊಡಗಿದ್ದಾರೆ.<br />ನಿರಂತರ ಮಳೆಯಿಂದ ಮಲೆನಾಡಿನ ಜನರು ಮನೆಯಿಂದ ಹೊರ ಬಂದಿರಲಿಲ್ಲ. ಮಳೆ ತುಸು ಬಿಡುವು ನೀಡಿರುವುದರಿಂದ ನಿಟ್ಟುಸಿರು ಬಿಟ್ಟಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>