<p><strong>ಹಾಸನ:</strong> ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದ್ದು, ಎರಡು ತಿಂಗಳ ಅವಧಿಗೆ ಆರೋಗ್ಯ ಇಲಾಖೆಯೇ ಕೆಲಸ ನೀಡಬೇಕುಎಂದು ಆಗ್ರಹಿಸಿ ಆಲೂರು ತಾಲ್ಲೂಕು ಕೋವಿಡ್ ಆರೈಕೆ ಕೇಂದ್ರದ ಸಿಬ್ಬಂದಿ ಶುಕ್ರವಾರಪ್ರತಿಭಟನೆ ನಡೆಸಿದರು.</p>.<p>ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಗೌರವ ಧನದ ಆಧಾರದ ಮೇಲೆ 6 ತಿಂಗಳ ಅವಧಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನೇಮಕ ಮಾಡುವಾಗಲೇ ಒಂದೂವರೆ ತಿಂಗಳುತಡವಾಗಿತ್ತು. ಈಗ ಎರಡು ತಿಂಗಳು ಅವಧಿ ಬಾಕಿ ಇರುವಾಗಲೇ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆಎಂದು ಸಿಬ್ಬಂದಿ ಆರೋಪಿಸಿದರು.</p>.<p>ಡಿ ಗ್ರೂಪ್ ನೌಕರ ಎಚ್.ಆರ್.ಪ್ರತಾಪ್ ಕುಮಾರ್ ಮಾತನಾಡಿ, ‘ಕೋವಿಡ್ ಕರ್ತವ್ಯಕ್ಕಾಗಿಬೇರೆ ಕೆಲಸಗಳನ್ನು ಬಿಟ್ಟು ಬರಲಾಗಿತ್ತು. ಆದರೆ, ಏಕಾಏಕಿ ಕೆಲಸದಿಂದ ತೆಗೆದಿರುವುದರಿಂದ ಶುಶ್ರೂಷಕರು, ಡಿ ಗ್ರೂಪ್ ನೌಕರರು, ಪ್ರಯೋಗಾಲಯ ತಂತ್ರಜ್ಞರು ಬೇರೆ ಕೆಲಸ ಇಲ್ಲದೆಕಂಗಾಲಾಗಿದ್ದಾರೆ’ ಎಂದು ಅಳಲು ತೋಡಿಕೊಂಡರು.</p>.<p>‘ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಹಾಗಾಗಿ ಉಳಿದ ಎರಡು ತಿಂಗಳು ಇಲಾಖೆಯಿಂದ ಯಾವುದೇ ಕೆಲಸ ನೀಡಿದರೂ ಮಾಡಲು ಸಿದ್ಧ. ರಾಜ್ಯದಲ್ಲಿಕೋವಿಡ್ 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಈ ಹಿಂದೆ ಕೋವಿಡ್ ಆರೈಕೆಕೇಂದ್ರದಲ್ಲಿ ಕರ್ತವ್ಯ ಸಿರ್ವಹಿಸಿದ್ದ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.</p>.<p>ಪ್ರತಿಭಟನೆಯಲ್ಲಿ ಕೋವಿಡ್ ಆರೈಕೆ ಕೇಂದ್ರದ ಶುಶ್ರೂಷಕಿಯರಾದ ಎಸ್.ಡಿ.ಕವಿತಾ, ಕೆ.ಸುಜಾತಾ, ಎನ್.ಡಿ.ದಾಕ್ಷಾಯಿಣಿ, ಎಂ.ಕೆ.ಮಮತ, ಅಬ್ದುಲ್ ಬಷೀರ್, ಸುನಿತಾ, ಬಾನುಮತಿ, ಪ್ರಯೋಗಾಲಯ ತಂತ್ರಜ್ಞರಾದ ಎಸ್.ಸಂತೋಷ್, ಗ್ರೂಪ್ ಡಿ ನೌಕರರಾದ ಕೆ.ಎಸ್.ಕೀರ್ತಿ, ಮಣಿ, ಬಿ.ಕೆ.ಅಶ್ವಥ್, ಶಶಿಧರ, ಕೆ.ಆರ್.ಯಶವಂತ್, ಭರತ್, ರತೀರ್ಶ, ಇರ್ಫಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾಸನ:</strong> ಗುತ್ತಿಗೆ ಆಧಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಯನ್ನು ಅವಧಿಗೂ ಮುನ್ನವೇ ಬಿಡುಗಡೆ ಮಾಡಿದ್ದು, ಎರಡು ತಿಂಗಳ ಅವಧಿಗೆ ಆರೋಗ್ಯ ಇಲಾಖೆಯೇ ಕೆಲಸ ನೀಡಬೇಕುಎಂದು ಆಗ್ರಹಿಸಿ ಆಲೂರು ತಾಲ್ಲೂಕು ಕೋವಿಡ್ ಆರೈಕೆ ಕೇಂದ್ರದ ಸಿಬ್ಬಂದಿ ಶುಕ್ರವಾರಪ್ರತಿಭಟನೆ ನಡೆಸಿದರು.</p>.<p>ಕೋವಿಡ್ ಎರಡನೇ ಅಲೆ ಸಂದರ್ಭದಲ್ಲಿ ಗೌರವ ಧನದ ಆಧಾರದ ಮೇಲೆ 6 ತಿಂಗಳ ಅವಧಿಗೆ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿತ್ತು. ನೇಮಕ ಮಾಡುವಾಗಲೇ ಒಂದೂವರೆ ತಿಂಗಳುತಡವಾಗಿತ್ತು. ಈಗ ಎರಡು ತಿಂಗಳು ಅವಧಿ ಬಾಕಿ ಇರುವಾಗಲೇ ಎಲ್ಲರನ್ನೂ ಬಿಡುಗಡೆ ಮಾಡಲಾಗಿದೆಎಂದು ಸಿಬ್ಬಂದಿ ಆರೋಪಿಸಿದರು.</p>.<p>ಡಿ ಗ್ರೂಪ್ ನೌಕರ ಎಚ್.ಆರ್.ಪ್ರತಾಪ್ ಕುಮಾರ್ ಮಾತನಾಡಿ, ‘ಕೋವಿಡ್ ಕರ್ತವ್ಯಕ್ಕಾಗಿಬೇರೆ ಕೆಲಸಗಳನ್ನು ಬಿಟ್ಟು ಬರಲಾಗಿತ್ತು. ಆದರೆ, ಏಕಾಏಕಿ ಕೆಲಸದಿಂದ ತೆಗೆದಿರುವುದರಿಂದ ಶುಶ್ರೂಷಕರು, ಡಿ ಗ್ರೂಪ್ ನೌಕರರು, ಪ್ರಯೋಗಾಲಯ ತಂತ್ರಜ್ಞರು ಬೇರೆ ಕೆಲಸ ಇಲ್ಲದೆಕಂಗಾಲಾಗಿದ್ದಾರೆ’ ಎಂದು ಅಳಲು ತೋಡಿಕೊಂಡರು.</p>.<p>‘ಕೋವಿಡ್ ಸಂದರ್ಭದಲ್ಲಿ ಪ್ರಾಣದ ಹಂಗು ತೊರೆದು ಕರ್ತವ್ಯ ನಿರ್ವಹಿಸಿದ್ದೇವೆ. ಹಾಗಾಗಿ ಉಳಿದ ಎರಡು ತಿಂಗಳು ಇಲಾಖೆಯಿಂದ ಯಾವುದೇ ಕೆಲಸ ನೀಡಿದರೂ ಮಾಡಲು ಸಿದ್ಧ. ರಾಜ್ಯದಲ್ಲಿಕೋವಿಡ್ 3ನೇ ಅಲೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಈ ಹಿಂದೆ ಕೋವಿಡ್ ಆರೈಕೆಕೇಂದ್ರದಲ್ಲಿ ಕರ್ತವ್ಯ ಸಿರ್ವಹಿಸಿದ್ದ ಸಿಬ್ಬಂದಿಗೆ ಮೊದಲ ಆದ್ಯತೆ ನೀಡಬೇಕು’ ಎಂದು ಒತ್ತಾಯಿಸಿಜಿಲ್ಲಾಧಿಕಾರಿ ಆರ್.ಗಿರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.</p>.<p>ಪ್ರತಿಭಟನೆಯಲ್ಲಿ ಕೋವಿಡ್ ಆರೈಕೆ ಕೇಂದ್ರದ ಶುಶ್ರೂಷಕಿಯರಾದ ಎಸ್.ಡಿ.ಕವಿತಾ, ಕೆ.ಸುಜಾತಾ, ಎನ್.ಡಿ.ದಾಕ್ಷಾಯಿಣಿ, ಎಂ.ಕೆ.ಮಮತ, ಅಬ್ದುಲ್ ಬಷೀರ್, ಸುನಿತಾ, ಬಾನುಮತಿ, ಪ್ರಯೋಗಾಲಯ ತಂತ್ರಜ್ಞರಾದ ಎಸ್.ಸಂತೋಷ್, ಗ್ರೂಪ್ ಡಿ ನೌಕರರಾದ ಕೆ.ಎಸ್.ಕೀರ್ತಿ, ಮಣಿ, ಬಿ.ಕೆ.ಅಶ್ವಥ್, ಶಶಿಧರ, ಕೆ.ಆರ್.ಯಶವಂತ್, ಭರತ್, ರತೀರ್ಶ, ಇರ್ಫಾನ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>